ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ?

Suvarna News   | Asianet News
Published : Feb 24, 2020, 08:58 AM IST
ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ?

ಸಾರಾಂಶ

ಕಲರ್ಸ್‌ ಸೂಪರ್‌ ವಾಹಿ​ನಿ​ಯಲ್ಲಿ ಬಹು ಜನ​ಪ್ರಿ​ಯ​ಗೊಂಡಿ​ರುವ ಧಾರಾ​ವಾಹಿ ‘ಶಾಂತಂ ಪಾಪಂ’. ನಮ್ಮ ಸುತ್ತಮುತ್ತ ಎಷ್ಟೋ ಅಪರಾಧಗಳು ನಡೆಯುತ್ತವೆ. ಅಂಥ ನೈಜ ಘಟನೆಗಳನ್ನುಆಧರಿಸಿ ಅಪರಾಧಗಳ ಕುರಿತು ತಿಳು​ವ​ಳಿಕೆ ಜತೆಗೆ ಎಚ್ಚರವನ್ನುಮೂಡಿಸುವ ನಿಟ್ಟಿ​ನಲ್ಲಿ ಮೂಡಿ ಬರು​ತ್ತಿ​ರುವ ಈ ಕ್ರೈಮ್‌ ಧಾರಾವಾಹಿ ಎರ​ಡನೇ ಸೀಸನ್‌ ಪ್ರಸಾ​ರ​ವಾ​ಗು​ತ್ತಿದೆ.

ಫೆ.24ರಿಂದ ಸೋಮ​ವಾ​ರ​ದಿಂದ ಶುಕ್ರ​ವಾ​ರದ ವರೆಗೆ ಪ್ರತಿ ರಾತ್ರಿ 8 ಗಂಟೆಗೆ ಪರದೆ ಮೇಲೆ ಮೂಡ​ಲಿದೆ. ವಿಶೇಷ ಅಂದರೆ ಎರ​ಡನೇ ಸಂಚಿ​ಕೆಯ ನಿರೂ​ಪ​ಣೆ​ಯನ್ನು ಬಿಗ್‌​ಬಾಸ್‌ ಶೋನ ಸ್ಪರ್ಧಿ ಆಗಿದ್ದ ಚೈತ್ರಾ ಕೊಟ್ಟೂರು ನಿರ್ವ​ಹಿ​ಸ​ಲಿ​ದ್ದಾರೆ.

ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

ಜಗ​ದೀಶ್‌ ಭಾವೆ ಕಥಾ ಸಂಶೋ​ಧನೆ, ವಿನೋದ್‌ ದೊಡ್ಡ​ಹಾಳೆ ನಿರ್ದೇ​ಶನ ಹಾಗೂ ಡಾವೆಂಕಿ ಪರಿ​ಕ​ಲ್ಪ​ನೆಯ ಈ ಧಾರಾ​ವಾ​ಹಿ​ಗೆ ರಘು ಸಮ​ರ್ಥ, ಸುಜಯ್‌ ಹುಣ​ಸೂ​ರು, ನಿತ್ಯಾ ಲಕ್ಷ್ಮೀ ಪ್ರಹ್ಲಾದ. ಪವನ್‌ ಭಟ್‌, ಪ್ರಮೋದ್‌ ಮರ​ವಂತೆ ಚಿತ್ರ​ಕಥೆ ಇದೆ.

ಆರ್ಯವರ್ಧನ್‌ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!

ಕುಟುಂಬ ಸಮೇತ ಕುಳಿತು ನೋಡುವಂತಹ ಸತ್ಯಘಟನೆಗಳಿಂದ ಪ್ರೇರಿತ ಕತೆಗಳನ್ನು ಹೇಳುವ ಪ್ರಯತ್ನ ಈ ಧಾರಾ​ವಾ​ಹಿ​ಯದ್ದು. ಒಂದೊಂದು ಎಪಿ​ಸೋ​ಡ್‌ಗೂ ಕಲಾ​ವಿ​ದರು ಬದ​ಲಾ​ಗಲಿದ್ದು, ಪ್ರತಿ ಕಂತಿ​ನಲ್ಲೂ ಹೊಸ ಹೊಸ ತಾರೆ​ಗ​ಳನ್ನು ನೋಡಬಹುದು. ಮೊದಲ ಕತೆ ‘ಮಗಳು ಶಾರದೆ’. ಮನ ಕಲಕುವ ಕತೆಯಾ​ಗಿದ್ದು, ಮಹಿಳಾ ಹೋರಾಟಗಾರ್ತಿ ಆವಂತಿಕಾ ತನ್ನ ಕಾರಿನ ಚಾಲ​ಕನ ಮಗ​ಳನ್ನು ಮನೆ ಕೆಲ​ಸಕ್ಕೆ ಇಟ್ಟು​ಕೊಂಡಿ​ರು​ತ್ತಾಳೆ. ಆಕೆ ಆಕ​ಸ್ಮಿ​ಕ​ವಾಗಿ ಸಾವು ಕಾಣು​ತ್ತಾಳೆ. ಇದು ಯಾಕೆ ಎಂಬು​ದ​ರೊಂದಿಗೆ ಮೊದಲ ಎಪಿ​ಸೋಡ್‌ ಶುರು​ವಾ​ಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​