
ಬಿಗ್ ಬಾಸ್ ಮನೆಯಲ್ಲಿ ನಿಧಾನಗವಾಗಿ ಬೆಂಕಿ ಆವರಿಸಿಕೊಳ್ಳುತ್ತಿದೆ. ಹಿರಿಯ ಪತ್ರಕರ್ತ ರವಿ ಬೆಳಗೆರೆ ಕಂಟೆಸ್ಟಂಟ್ ಅಲ್ಲ, ಅವರು ಅತಿಥಿ.. ಈ ಶನಿವಾರದವರೆಗೆ ಮನೆಯಲ್ಲಿ ಇರುತ್ತಾರೆ ಎಂದು ಬಿಗ್ ಬಾಸ್ ಘೋಷಣೆ ಮಾಡಿಯೂ ಆಗಿದೆ.
ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸುಂದರಿ ದೀಪಿಕಾ ದಾಸ್ ಎರಡನೇ ದಿನವೇ ಕಲಾವಿದ ರಾಜು ತಾಳಿಕೋಟೆ ಅವರ ಮೇಲೆ ಆರೋಪವೊಂದನ್ನು ಮಾಡಿದ್ದಾರೆ.
ರಾಜು ತಾಳಿಕೋಟೆ ಹೆಣ್ಣು ಮಕ್ಕಳನ್ನು ಮುಟ್ಟಿ ಮುಟ್ಟಿ, ಬೆನ್ನು ತಟ್ಟಿ ಮಾತನಾಡಿಸುತ್ತಾರೆ ಎಂಬ ಆರೋಪ ಮಾಡಿದ್ದು ಮನೆಯವರೊಂದಿಗೆ ಹಂಚಿಕೊಂಡಿದ್ದಾರೆ.
ಮನೆಗೆ ಹೋಗದ ಪಂಕಜ್; ಅಭಿಮಾನಿಗಳ ಆಕ್ರೋಶ
ಎಲ್ಲರೂ ಊಟಕ್ಕೆ ಹೋಗೋಣ ಬನ್ನಿ ಎಂದು ಮನೆಯ ಹೊರಗಿನ ಜಾಗದಿಂದ ಡೈನಿಂಗ್ ಟೇಬಲ್ ಕಡೆಗೆ ಕರೆದುಕೊಂಡು ಹೋಗುವಾಗ ತಾಳಿಕೋಟೆ ದೀಪಿಕಾ ಅವರ ಹೆಗಲ ಬಳಿ ಕೈ ಹಾಕಿ ಬನ್ನಿ ಹೋಗೋಣ ಎಂದು ಕರೆದಿದ್ದಾರೆ. ಈ ವೇಳೆ ನಾವು ಬರ್ತೆವೆ ಬಿಡಿ, ನೀವು ಮುಟ್ಟಿ ಮಾತನಾಡಿಸುವುದು ಯಾಕೆ ಎಂದು ದೀಪಿಕಾ ಪ್ರಶ್ನೆ ಮಾಡಿದ್ದಾರೆ.
ದಿನದ ಕೊನೆಯಲ್ಲಿ ಮತ್ತೆ ಮನೆಯೊಳಗೆ ಬಂದ ಬೆಳಗೆರೆ ಅವರ ಬಳಿಯೂ ಹೆಣ್ಣುಮಕ್ಕಳು ತಮ್ಮ ಗೋಳು ತೋಡಿಕೊಂಡಿದ್ದಾರೆ. ಕೆಲವರಿಗೆ ಇದೊಂದು ಚಟ ಎಂದು ಹೇಳಿರುವ ಬೆಳಗೆರೆ ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು, ಈಗಲೂ ಸಿನಿಮಾ ರಂಗದಲ್ಲಿರುವ ವೃದ್ಧರೊಬ್ಬರು ಹೀಗೆ ಮಾಡುತ್ತಾರೆ ಎಂದು ಹೇಳಿದ್ದು ಹೆಸರು ಹೇಳಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.