ಬಿಗ್​ಬಾಸ್ ಮನೆಯೊಳ​ಗೆ ಸ್ಪರ್ಧಿಯಾಗಿ ಕತ್ತೆ ಎಂಟ್ರಿ! ಜನರಿಂದ ದೂರು ದಾಖಲು: ಪೇಟಾನಿಂದ ನೋಟಿಸ್ ಜಾರಿ...

Published : Oct 10, 2024, 12:58 PM IST
ಬಿಗ್​ಬಾಸ್ ಮನೆಯೊಳ​ಗೆ ಸ್ಪರ್ಧಿಯಾಗಿ ಕತ್ತೆ ಎಂಟ್ರಿ! ಜನರಿಂದ ದೂರು ದಾಖಲು: ಪೇಟಾನಿಂದ ನೋಟಿಸ್ ಜಾರಿ...

ಸಾರಾಂಶ

ಬಿಗ್​ಬಾಸ್​ ಮನೆಯಲ್ಲಿ  ಕತ್ತೆಯನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೇಟಾ ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ನೋಟಿಸ್​ ಜಾರಿಗೊಳಿಸಿದೆ. ಏನಿದು ವಿಷಯ?  

 ಬಿಗ್​ಬಾಸ್​ಗೆ ಹೋಗುವ ಬಹುತೇಕ ಸ್ಪರ್ಧಿಗಳು ಚಿತ್ರ-ವಿಚಿತ್ರ ಸ್ವಭಾವದವರು, ಜಗಳಗಂಟರು ಎಂದೆಲ್ಲಾ ಬಿರುದು ಪಡೆದವರು. ಆದರೆ ಇವರ ಮಧ್ಯೆಯೇ ಈಗ ಕತ್ತೆಯೂ ಬಿಗ್​ಬಾಸ್​ ಪ್ರವೇಶ ಮಾಡಿದ್ದು, ಭಾರಿ ಕೋಲಾಹಲ ಸೃಷ್ಟಿಯಾಗಿದೆ.   ಅಂದಹಾಗೆ ಕತ್ತೆ ಎಂಟ್ರಿ ಕೊಟ್ಟಿರೋದು ಕನ್ನಡದ ಬಿಗ್​ಬಾಸ್​ನಲ್ಲಿ ಅಲ್ಲ, ಬದಲಿಗೆ  ಹಿಂದಿಯ ಬಿಗ್​ಬಾಸ್​ ಸೀಸನ್​ 18ಗೆ. ಕತ್ತೆ ಎಂಟ್ರಿಯ ಬಗ್ಗೆ ಮೊದಲೇ ಸಲ್ಮಾನ್​ ಖಾನ್​ ಭಾರಿ ಪ್ರಚಾರ ಮಾಡಿದ್ದರು. ವಾಹಿನಿ ಕೂಡ ಪ್ರೊಮೋ ರಿಲೀಸ್​ ಮಾಡಿತ್ತು. ಇದೇ  6 ರಂದು 18ನೇ  ಸೀಸನ್​ ಆರಂಭವಾಗಿದ್ದು, ಸ್ಪರ್ಧಿಗಳಿಗೂ ಮುನ್ನವೇ ಕತ್ತೆ ಎಂಟ್ರಿ ಕೊಟ್ಟಿತ್ತು.  
 
ಇದಕ್ಕೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಸ್ಪರ್ಧಿಗಳ ಮಧ್ಯೆ ಕತ್ತೆಗೆ ಅವಮಾನ ಮಾಡ್ಬೇಡಿ ಎಂದೂ ಸಲ್ಮಾನ್​ ಖಾನ್​ ಕಾಳೆದಿದದ್ದರು ಎನ್ನಿ. ಆದರೆ ಇದೀಗ, ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(PETA) ಇಂಡಿಯಾ ಸಲ್ಮಾನ್​ ಖಾನ್​ಗೆ ನೋಟಿಸ್​ ಜಾರಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಸಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಅವರ ಕಳವಳಗಳನ್ನು ನಿರ್ಲಕ್ಷಿಸಬಾರದು ಎಂದಿರುವ ಪೇಟಾ,  ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ತಪ್ಪಿಸಲು,  ಕತ್ತೆಯನ್ನು ಹೊರಹಾಕಿ ಎಂದು ಬಿಗ್​ಬಾಸ್​ಗೆ ನೋಟಿಸ್​ ಮೂಲಕ ತಿಳಿಸಿದೆ.  ಸಲ್ಮಾನ್​ ಖಾನ್​ ಅವರಿಗೆ ಪತ್ರ ಬರೆದಿರುವ ಪೇಟಾ, ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ಹಾಕುವಂತೆ ಬಿಗ್​ಬಾಸ್​ ಆಯೋಜಕರಿಗೆ ತಿಳಿಸಿ ಎಂದು ಹೇಳಿದೆ. 

ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

ಅಂದಹಾಗೆ, ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರಿಗಿಂತಲೂ ಮೊದಲು ಕತ್ತೆ ಕಾಣಿಸಿಕೊಂಡಿದೆ. ಬಿಗ್ ಬಾಸ್ ಆರಂಭವಾದಾಗ ಎಲ್ಲರೂ ಅದರಲ್ಲಿ ಸಲ್ಮಾನ್ ಖಾನ್ ಪ್ರವೇಶಕ್ಕಾಗಿ ಕಾಯುತ್ತಿದ್ದರು, ಆದರೆ ಸಲ್ಮಾನ್ ಖಾನ್ ಬದಲಿಗೆ ಕತ್ತೆಯೊಂದು ವೇದಿಕೆಯನ್ನು ಪ್ರವೇಶಿಸಿತ್ತು.  ಕತ್ತೆಯು ವೇದಿಕೆಯಲ್ಲಿ ಹುಲ್ಲು ತಿನ್ನುತ್ತಿತ್ತು. ಆ ಬಳಿಕ ಬಿಗ್ ಬಾಸ್ ಧ್ವನಿ ಹಿನ್ನೆಲೆಯಿಂದ ಬಂದಿತ್ತು.   ಅಂದಹಾಗೆ, ಕತ್ತೆಯ ಹೆಸರು ಮ್ಯಾಕ್ಸ್. ಇದು ಸ್ಪರ್ಧಿ ವಕೀಲ ಗುಣರತ್ನ ಸದಾವರ್ತೆ ಅವರ ಸಾಕುಪ್ರಾಣಿ ಎಂದು ಕೊನೆಗೆ ಸ್ಪಷ್ಟನೆ ನೀಡಲಾಗಿತ್ತು.  ಹಿಂದಿಯ ಬಿಗ್​ಬಾಸ್​ ಕೂಡ ಈ ಬಾರಿ  ಇತರ ಸೀಸನ್‌ಗಳಿಗಿಂತ ವಿಭಿನ್ನ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂದು ಮೊದಲೇ  ಅನೌನ್ಸ್​  ಮಾಡಲಾಗಿದ್ದು, ಕತ್ತೆ ಎಂಟ್ರಿ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿತ್ತು.  
 
ಅಷ್ಟಕ್ಕೂ ಈ ರೀತಿ ಮಾಡಿದರೆ ಅದು ಕಾಂಟ್ರವರ್ಸಿಯಾಗಿ ರಿಯಾಲಿಟಿ ಷೋ ಮತ್ತಷ್ಟು ಜನಪ್ರಿಯ ಆಗುತ್ತದೆ ಎಂಬ ಕಾರಣವೂ ಇದರ ಹಿಂದೆ ಇದೆ ಎನ್ನುವುದು ಹಲವರ ಆರೋಪ. ವಿವಾದಾತ್ಮಕ ವ್ಯಕ್ತಿಗಳನ್ನು ಷೋಗೆ ಕರೆಸುವುದು, ನಂತರ ಪೊಲೀಸರು ಎಂಟ್ರಿ ಕೊಡುವುದು, ಇಲ್ಲವೇ ಯಾರಿಂದಲೋ ಕಂಪ್ಲೇಂಟ್​ ಕೊಡಿಸುವುದು, ಆಮೇಲೆ ಜೈಲಿಗೆ ಅಟ್ಟುವುದು, ನಂತರ ಬಂದ ಮೇಲೆ ಮತ್ತಷ್ಟು ಟಿಆರ್​ಪಿ ಏರಿಸಿಕೊಳ್ಳುವುದು... ಹೀಗೆ ಎಲ್ಲವೂ ಮೊದಲೇ ನಿಗದಿಯಾಗಿ ಇರುತ್ತದೆ, ಎಲ್ಲವೂ ಸ್ಕ್ರಿಪ್ಟೆಡ್​ ಎಂಬ ಬಗ್ಗೆ ಇದಾಗಲೇ ಬಿಗ್​ಬಾಸ್​ಗೆ ಹೋಗಿ ಬಂದಿರುವ ಹಲವು ಸ್ಪರ್ಧಿಗಳೇ ಖುದ್ದು ಹೇಳಿದ್ದಾರೆ. ಎಲ್ಲವೂ ಜನರನ್ನು ಮೋಸ ಮಾಡುವ ತಂತ್ರಗಳು, ಇಲ್ಲದಿದ್ದರೆ ಟಿಆರ್​ಪಿ ಕುಸಿಯುತ್ತದೆ ಎನ್ನುವ ಕಾರಣಕ್ಕೆ ಮೊದಲೇ ನಿಗದಿ ಮಾಡಿ ಎಲ್ಲವನ್ನೂ ಮಾಡಲಾಗುತ್ತದೆ ಎಂಬ ಗಂಭೀರ ಆರೋಪಗಳೂ ಇವೆ. 

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?