ಜೈಲಿನಲ್ಲಿರೋ ಕ್ರಿಮಿನಲ್​ನನ್ನು ಬಿಡಿಸೋದು ಬೇಕಿತ್ತಾ ಇವಳಿಗೆ? ತಗ್ಲಾಕ್ಕೊಂಡ ಭಾರ್ಗವಿ!

Published : Jun 25, 2024, 04:26 PM IST
ಜೈಲಿನಲ್ಲಿರೋ ಕ್ರಿಮಿನಲ್​ನನ್ನು ಬಿಡಿಸೋದು ಬೇಕಿತ್ತಾ ಇವಳಿಗೆ? ತಗ್ಲಾಕ್ಕೊಂಡ ಭಾರ್ಗವಿ!

ಸಾರಾಂಶ

ಸೀತಾ  ಮತ್ತು ರಾಮ್​ರನ್ನು ಬೇರೆ ಮಾಡಲು ಜೈಲಿನಲ್ಲಿರುವ ಕ್ರಿಮಿನಲ್​ ರುದ್ರಪ್ರತಾಪ್​ನನ್ನು ಬಿಡಿಸಿಕೊಂಡು ಬಂದಿರೋ ಭಾರ್ಗವಿ ಈಗ ತಗ್ಲಾಕ್ಕೊಂಡಿದ್ದಾಳೆ. ಮುಂದೇನು?  

ಸೀತಾ ಮತ್ತು ರಾಮ್​ ಮದ್ವೆಯ ಕಾರ್ಯ ಅದ್ಧೂರಿಯಾಗಿಯೇ ನಡೆಯುತ್ತಿದೆ. ಇದರ ನಡುವೆಯೇ ರುದ್ರಪ್ರತಾಪ ಅಶೋಕ್​ ಮತ್ತು ರಾಮ್​ನ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅಂಜಲಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ರುದ್ರಪ್ರತಾಪ್​ ಆಕೆಗೆ ಫೋನ್​ ಮಾಡಿದ್ದ. ಆದರೆ ಆ ಫೋನ್​ ಅನ್ನು ಸಿಹಿ ರಿಸೀವ್​ ಮಾಡಿದಾಗಲೇ ರುದ್ರಪ್ರತಾಪ್​ ಅಲ್ಲೇ ಎಲ್ಲೋ ಇರುವುದು ಗೊತ್ತಾಗಿತ್ತು. ಸಿಹಿಗೆ ರುದ್ರಪ್ರತಾಪ್​ನನ್ನು ಕಂಡರೆ ಭಯ. ಏಕೆಂದರೆ ಇದಾಗಲೇ ಅವಳ ಮೇಲೆ ಹಲ್ಲೆ ಮಾಡಿದ್ದ ಆತ. ಆದ್ದರಿಂದ ಈ ವಿಷಯವನ್ನು ರಾಮ್​ಗೆ ತಿಳಿಸಿದ್ದಳು. ಅದೇ  ಇನ್ನೊಂದೆಡೆ ಅಂಜಲಿ ರುದ್ರಪ್ರತಾಪನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಆ ವಿಷಯವಿನ್ನೂ ಅಣ್ಣ ಅಶೋಕ್​ಗೆ ಗೊತ್ತಿಲ್ಲ. ಆದರೆ ಇದೀಗ ಸೀರಿಯಲ್​ಗೆ ಭಾರಿ ಟ್ವಿಸ್ಟ್​  ಬಂದಿದೆ.

ಸಿಹಿ ರುದ್ರಪ್ರತಾಪ್​ ಅಂಜಲಿಗೆ ಫೋನ್​ ಮಾಡಿರುವ ವಿಷಯ ತಿಳಿಯುತ್ತಲೇ ರಾಮ್​  ಮತ್ತು ಅಶೋಕ್​ ಅವನನ್ನು ಹುಡುಕಿ ಹೊರಟಿದ್ದಾರೆ. ರುದ್ರಪ್ರತಾಪ್​ ಸಿಕ್ಕಿಬಿದ್ದಿದ್ದಾನೆ. ಇಬ್ಬರೂ ಸೇರಿ ಅವನನ್ನು ಚೆನ್ನಾಗಿ ಥಳಿಸಿದ್ದಾರೆ. ಆಗ ರುದ್ರಪ್ರತಾಪ್​ ನಿಮ್ಮ ಮನೆಯಲ್ಲಿ ಇರುವ ಶತ್ರುವನ್ನೇ ಗುರುತಿಸಿಕೊಳ್ಳಿ ಮೊದಲು ಎಂದುಬಿಟ್ಟಿದ್ದಾನೆ.  ಆ ಶತ್ರು ಯಾರು ಎನ್ನುವುದು ಅಶೋಕ್​ಗೆ ಚೆನ್ನಾಗಿ ಗೊತ್ತು. ಅವಳೇ ಭಾರ್ಗವಿ. ಆದರೆ ಚಿಕ್ಕಮ್ಮ ಭಾರ್ಗವಿಯ ಮೇಲೆ ರಾಮ್​ಗೆ ಯಾವುದೇ ಸಂದೇಹವಿಲ್ಲ. ಸೀತಾ  ಮತ್ತು ರಾಮ್​ನನ್ನುದೂರ ಮಾಡಲು ಅವಳು ಪಟ್ಟ ಪ್ರಯತ್ನ ಎಲ್ಲವೂ ಠುಸ್​ ಆಗಿರುವ ನಡುವೆಯೇ ಅವಳು ರುದ್ರಪ್ರತಾಪ್​ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಳು. ಸಿಹಿಯನ್ನು ಕಿಡ್ನ್ಯಾಪ್​ ಮಾಡಿದ್ದರಿಂದ  ಜೈಲುಪಾಲಾಗಿದ್ದ ಅವರನನ್ನು ಭಾರ್ಗವಿ ಬಿಡಿಸಿಕೊಂಡು ಬಂದಿದ್ದಳು.

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...

ಇವೆಲ್ಲಾ ವಿಷಯ ಅಶೋಕ್​ಗೆ ಗೊತ್ತು. ಅವನು ಇದನ್ನು ರಾಮ್​ಗೆ ಹೇಳಲು ಪ್ರಯತ್ನ ಮಾಡಿದ್ದರೂ ರಾಮ್​ ಅದನ್ನು ಒಪ್ಪಿರಲಿಲ್ಲ. ಇದೀಗ ರುದ್ರಪ್ರತಾಪನ ಮಾತು ರಾಮ್​ಗೂ ಅಚ್ಚರಿ ತಂದಿದೆ. ಇಬ್ಬರೂ ಸೇರಿ ರುದ್ರಪ್ರತಾಪ್​  ಮೇಲೆ ಕೇಸು ಹಾಕಿದ್ದಾರೆ. ಪೊಲೀಸ್​ ಠಾಣೆಗೆ ಹೋಗಲು ರೆಡಿಯಾದವರನ್ನು ಭಾರ್ಗವಿ ತಡೆದು ನಿಲ್ಲಿಸಿದ್ದಾಳೆ. ಅವಳಿಗೆ ಎಲ್ಲಿ ತಾನು ಸಿಕ್ಕಿಹಾಕಿಕೊಳ್ಳುತ್ತೇನೋ ಎನ್ನುವ ಭಯ. ಅದಕ್ಕಾಗಿಯೇ ಮದುವೆಯ ಸಂದರ್ಭದಲ್ಲಿ ಹೀಗೆಲ್ಲಾ ಹೋಗಬೇಡ ಎಂದಿದ್ದಾಳೆ.  ಆದರೆ ಅಶೋಕ್​ಗೆ ಈ ಕುತಂತ್ರ ಎಲ್ಲಾ ಗೊತ್ತಿರುವ ಕಾರಣ, ಇನ್ಸ್​ಪೆಕ್ಟರ್​ ಅವರೇ ಮನೆಗೆ ಬರ್ತಾ ಇದ್ದಾರೆ ಬಿಡಿ, ಎಲ್ಲಾ ಗೊತ್ತಾಗತ್ತೆ ಎಂದಿದ್ದಾರೆ. ಭಾರ್ಗವಿಗೆ ಶಾಕ್​  ಆಗಿದೆ. ಇಷ್ಟಕ್ಕೇ ಸುಮ್ಮನಾಗದ ಅಶೋಕ್​ ರುದ್ರಪ್ರತಾಪ್​ನಂಥ ಕ್ರಿಮಿನಲ್​ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಯಾರು ಅಂತ ಗೊತ್ತಾಗತ್ತೆ ಎಂದಿದ್ದಾನೆ.

ಇದೀಗ ಸೀರಿಯಲ್​ ಕುತೂಹಲದ ಘಟ್ಟ ತಲುಪಿದೆ. ರಾಮ್​ಗೂ ಮದುವೆ ಸಮಯದಲ್ಲಿಯೇ ಚಿಕ್ಕಮ್ಮನ ಕುತಂತ್ರ ಗೊತ್ತಾಗತ್ತೋ ಇಲ್ಲವೋ ಎನ್ನುವುದು ಪ್ರಶ್ನೆ. ಒಂದು ವೇಳೆ ಗೊತ್ತಾಗಿಬಿಟ್ಟರೆ ಸೀರಿಯಲ್​ ಮುಗಿದು ಹೋಗುತ್ತೆ. ಹಾಗೆ ಆಗಲ್ಲ ಎನ್ನುವ ತರ್ಕ ಕೆಲವರದ್ದು. ಅದೇ ಇನ್ನೊಂದೆಡೆ ಭಾರ್ಗವಿಯ ವಿಷಯ ಗೊತ್ತಾಗತ್ತೆ. ಆದರೆ ಸೀತಾಳ ಇತಿಹಾಸ ಇನ್ನೂ ಸೀಕ್ರೇಟ್​ ಆಗಿರುವ ಕಾರಣ, ಅವರ ನಡುವೆಯೇ ಬಿರುಕು ಬರುವ ಸಾಧ್ಯತೆ ಇದೆ. ಇವರಿಬ್ಬರ ಮದುವೆ ಆಗುವುದೇ ಡೌಟು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಕ್ರಿಮಿನಲ್​ನನ್ನು ಜೈಲಿನಿಂದ ಬಿಡಿಸಿದ ಭಾರ್ಗವಿಗೆ ಕಂಟಕ ಎದುರಾಗಿದೆ.  

ಮಾಡಿದ್ದುಣ್ಣೋ ಮಹಾರಾಯ ಎನ್ನೋದು ಇದಕ್ಕೆನಾ? ಲಿಂಬೆ ಹಣ್ಣು ಹಿಡಿದು ಮಾಟ ಮಾಡಿಸಿದ್ದ ರಾಜಿಗೆ ಆತ್ಮದ ಕಾಟ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು