'ಅಮೃತಧಾರೆ' ಶೂಟಿಂಗ್​ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್​ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?

'ಅಮೃತಧಾರೆ' ಶೂಟಿಂಗ್​ ವೇಳೆ ಭೂಮಿಕಾ ಸೀರೆಗೆ ಬೆಂಕಿ ಬಿದ್ದಾಗ ಏನಾಗಿತ್ತು? ಶೂಟಿಂಗ್​ ಸೆಟ್​ನಲ್ಲಿ ನಡೆದದ್ದೇನು? ತೆರೆಮರೆ ಕಥೆ ಏನು?  
 


ತನಗೆ ಮಕ್ಕಳಾಗಲ್ಲ ಎಂದು ಕುತಂತ್ರಿ ಅತ್ತೆಯ ಮಾತು ಕೇಳಿ, ಗಂಡನನ್ನು ಬೇರೆ ಮದುವೆ ಮಾಡಿಸಲು ಹೊರಟಿದ್ದಳು ಭೂಮಿಕಾ. ಆದರೆ ಪತ್ನಿಯೇ ಸರ್ವಸ್ವ ಎಂದುಕೊಂಡಿರೋ ಗೌತಮ್ ಹಾಗೆ ಮಾಡಲು ಸಾಧ್ಯನಾ? ​ಆ ಮದುವೆಯಾಗಲು ಬಂದಿರುವ ಹುಡುಗಿಯ ಜೊತೆ ಮೊದಲೇ ಪ್ಲ್ಯಾನ್​ ಮಾಡಿ ಸೀರಿಯಲ್​ ವೀಕ್ಷಕರಿಗೆ ಟೆನ್ಷನ್​ ಕೊಟ್ಟಿದ್ದ ಗೌತಮ್​. ಮದುವೆಯಾಗಲು ರೆಡಿಯಾಗುವಂತೆ ಮಾಡಿ, ಕೊನೆಗೆ ಮದುವೆಗೆ ತಾಳಿ ಕಟ್ಟುವ ಸಮಯದಲ್ಲಿ ತನ್ನ ಪತ್ನಿ ಭೂಮಿಕಾಗೇ ಮರುಮಾಂಗಲ್ಯ ಮಾಡಿದ್ದ. ನೀವೇ ನನ್ನ ಸರ್ವಸ್ವ ಎನ್ನುವ ಮೂಲಕ ಅಬ್ಬಾ ಇದ್ದರೆ ಇಂಥ ಗಂಡ ಇರಬೇಕು ಎನ್ನುವಂಥ ಪಾತ್ರ ಮಾಡಿದ್ದ ಗೌತಮ್​. ಅದಾದ ತಕ್ಷಣವೇ ಭೂಮಿಕಾಗೆ ತಲೆಸುತ್ತಿತು. ಅಲ್ಲಿಯೇ ಇದ್ದ ವೈದ್ಯೆ ಆಕೆ ಗರ್ಭಿಣಿ ಎಂದು ಹೇಳುವ ಮೂಲಕ ಎಲ್ಲರನ್ನೂ ಖುಷಿಗೊಳಿಸಿದ್ದಾರೆ. ಈಗೇನಿದ್ದರೂ ವಿಲನ್​ಗಳಾಗಿರುವ ಶಕುಂತಲಾ, ಜೈದೇವ ಎಲ್ಲಾ ಸೇರಿ ಏನು ಮಾಡುತ್ತಾರೋ ನೋಡುವುದು ಒಂದೇ ಬಾಕಿ.

ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​ ಕಥೆ. ಇದಕ್ಕೂ ಮುನ್ನ, ಕೆಲವು ಎಪಿಸೋಡ್​ ಹಿಂದೆ ಭೂಮಿಕಾ ದೇವರ ಮನೆಯಲ್ಲಿ ಪೂಜೆ ಮಾಡುವಾಗ ಆಕೆಯ ಸೀರೆಯ ಸೆರಗಿಗೆ ಬೆಂಕಿ ತಗುಲಿತ್ತು. ಅದನ್ನು ಸುಧಾ ಬಂದು ಕೈಯಿಂದಲೇ ಆರಿಸಿದ್ದಳು. ಆಗಿನ್ನೂ ಸುಧಾ, ಗೌತಮ್​ನ ತಂಗಿ ಎಂದು ತಿಳಿಯದ ಸಮಯ. ಆಕೆ ಕೆಲಸದವಳಾಗಿ ಬಂದಿದ್ದಳು. ಆ ಸಮಯದಲ್ಲಿ ಕೈಯಲ್ಲಿ ಬೆಂಕಿಯನ್ನು ಆರಿಸಿದ್ದರಿಂದ ಆಕೆಯ ಕೈಗೆ ಸಿಕ್ಕಾಪಟ್ಟೆ ಗಾಯಗಳಾಗಿದ್ದವು. ಅಂದಹಾಗೆ ಇಂಥ ದೃಶ್ಯಗಳು ಸಿನಿಮಾ, ಸೀರಿಯಲ್​ಗಳಲ್ಲಿ ಮಾಮೂಲು. ನಾವು ನೋಡುವಾಗ ನಿಜಕ್ಕೂ ಬೆಂಕಿಯನ್ನು ಕೈಯಲ್ಲಿ ಆರಿಸಿದರು ಎಂದೇ ಅಂದುಕೊಳ್ಳುವ ಹಾಗೆ ಇರುತ್ತದೆ.

Latest Videos

ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್​

ಆದರೆ, ನಿಜವಾಗಿಯೂ ಶೂಟಿಂಗ್​ನಲ್ಲಿ ಮಾಡಿದ್ದೇನು ಎನ್ನುವ ವಿಡಿಯೋ ವೈರಲ್​ ಆಗಿದೆ. ಇಲ್ಲಿ ಭೂಮಿಕಾಳ ಸೀರೆಯ ಸೆರಗಿಗೆ ಬೆಂಕಿ ಬಿದ್ದದ್ದು ನಿಜ. ಆದರೆ ಹಾಗೆ ಬೆಂಕಿ ಹಚ್ಚುವ ಮೊದಲು ಸೆರಗಿಗೆ ಒಂದು ರೀತಿಯ ಲಿಕ್ವಿಡ್​ ಹಾಕುವುದನ್ನು ನೋಡಬಹುದು. ಆಗ ಅದನ್ನು ಮುಟ್ಟುವವರ ಕೈಗೂ ಹಚ್ಚಲಾಗಿರುತ್ತದೆ. ಆದ್ದರಿಂದ ಬೆಂಕಿ ತಗುಲಿದರೂ ಅದೇನೂ ಅಪಾಯ ಆಗುವುದಿಲ್ಲ. ಈ ರೀತಿಯಾಗಿ ಶೂಟಿಂಗ್​ ಮಾಡಿರುವುದನ್ನು ಇದರಲ್ಲಿ ನೋಡಬಹುದು. ಸೆರಗಿಗೆ ಆ ಲಿಕ್ವಿಡ್​ ಅನ್ನು ಹಚ್ಚುತ್ತಿರುವ ವಿಡಿಯೋ ಅನ್ನು ಖುದ್ದು ಭೂಮಿಕಾ ಅರ್ಥಾತ್​ ನಟಿ  ಛಾಯಾ ಸಿಂಗ್​ ಶೇರ್​ ಮಾಡಿಕೊಂಡಿದ್ದಾರೆ. ಸೀರಿಯಲ್​ನಲ್ಲಿ ಆ ಸನ್ನಿವೇಶವನ್ನು ಸಕತ್​ ಭಯಾನಕ ಹಾಗೂ ಟೆನ್ಷನ್​ ರೀತಿಯಲ್ಲಿ ತೋರಿಸಲಾಗಿದ್ದರೆ, ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದ ತಕ್ಷಣ ಎಲ್ಲರೂ ಬಿದ್ದೂ ಬಿದ್ದೂ ನಗುವುದನ್ನು ನೋಡಬಹುದು. 

ಭೂಮಿಕಾ ಅಂದರೆ ಛಾಯಾ ಸಿಂಗ್​ ಅವರ ವಿಷಯಕ್ಕೆ ಬರುವುದಾದರೆ, ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದಾರೆ.  ಇದೀಗ ಅವರ ಫ್ಯಾನ್ಸ್​ ಪೇಜ್​ನಿಂದ ಛಾಯಾ ಸಿಂಗ್​ ಮತ್ತು ಅವರ ನಿಜ ಜೀವನದ ಪತಿ ಕೃಷ್ಣ ಅವರ ರೊಮ್ಯಾಂಟಿಕ್​ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಕೃಷ್ಣ ಅವರು ತಮ್ಮ ಪತ್ನಿ ಛಾಯಾ ಕುರಿತು ಮಾತನಾಡಿದ್ದಾರೆ, ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡಿ ಮತ್ತೊಮ್ಮೆ ಪ್ರಪೋಸ್​ ಮಾಡಿದ್ದಾರೆ. ಇದರಿಂದ ಭಾವುಕರಾಗಿರುವ ಛಾಯಾ ಅವರು ಆನಂದ ಭಾಷ್ಪ ಹರಿಸಿದ್ದಾರೆ. ಜೊತೆಗೆ ಇಬ್ಬರೂ ಕೈ ಕೈ ಹಿಡಿದು ಡ್ಯಾನ್ಸ್​ ಮಾಡಿದ್ದಾರೆ.  ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ,  ಕೃಷ್ಣ ಅವರ ಜೊತೆ ಛಾಯಾ ಅವರ ಮದುವೆಯಾಗಿ 11 ವರ್ಷಗಳು ಕಳೆದಿವೆ.  ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​  ಮಾಡಿಕೊಳ್ಳುತ್ತಿರುತ್ತಾರೆ.   

ಆ್ಯಕ್ಟಿಂಗ್​ ಬರಲ್ಲ ಅಂತ ರಿಜೆಕ್ಟ್​ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!

click me!