ಸೀರಿಯಲ್​ ಸೆಟ್​ನಲ್ಲಿ ಭಾರಿ ಅವಘಡ! ಶೂಟಿಂಗ್​ ವೇಳೆ ವಿದ್ಯುತ್​ ತಗುಲಿ ಕ್ಯಾಮೆರಾಮನ್​ ಸಾವು

Published : Nov 16, 2024, 06:28 PM IST
ಸೀರಿಯಲ್​ ಸೆಟ್​ನಲ್ಲಿ ಭಾರಿ ಅವಘಡ! ಶೂಟಿಂಗ್​ ವೇಳೆ ವಿದ್ಯುತ್​ ತಗುಲಿ ಕ್ಯಾಮೆರಾಮನ್​ ಸಾವು

ಸಾರಾಂಶ

ಸೀರಿಯಲ್​ ಶೂಟಿಂಗ್​ ವೇಳೆ ಭಾರಿ ಅವಘಡ ಸಂಭವಿಸಿದ್ದು, ವಿದ್ಯುತ್​ ತಗುಲಿ ಸಹಾಯಕ ಕ್ಯಾಮೆರಾಮನ್​ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಲ್ಲಿ ಈ ಅವಘಡ?   

ಎಲ್ಲಾ ಭಾಷೆಗಳ ಸೀರಿಯಲ್​ಗಳಿಗಿಂತಲೂ ಹೈಯೆಸ್ಟ್​ ಟಿಆರ್​ಪಿ ಹೊಂದಿರುವ ಹಿಂದಿ ಸೀರಿಯಲ್​ ಅನುಪಮಾ ಶೂಟಿಂಗ್​ ಸಮಯದಲ್ಲಿ ಭಾರಿ ಅವಘಡ ಸಂಭವಿಸಿದೆ. ರೂಪಾಲಿ ಗಂಗೂಲಿ ಅವರ ಧಾರಾವಾಹಿಯ ಸೆಟ್‌ನಲ್ಲಿ ಕ್ಯಾಮರಾ ಸಹಾಯಕ ಸಾವನ್ನಪ್ಪಿದ್ದಾರೆ.  ಮುಂಬೈನ ಗೋರೆಗಾಂವ್‌ನ ಫಿಲ್ಮ್‌ಸಿಟಿಯಲ್ಲಿ ಅನುಪಮಾ ಸೀರಿಯಲ್​ ಸೆಟ್ ಹಾಕಲಾಗಿದೆ.  ಇದರ ಶೂಟಿಂಗ್​ ಸಮಯದಲ್ಲಿ ಸಮಯದಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ  ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಅನುಪಮಾ ಅವರ ತಂಡವು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.   

ಅಂದಹಾಗೆ, ಈ ಘಟನೆ ಇದೇ  14 ರ ಗುರುವಾರ ಸಂಜೆ ನಡೆದಿದೆ.  ಧಾರಾವಾಹಿಯ ಚಿತ್ರೀಕರಣದ ವೇಳೆ ಕ್ಯಾಮರಾ ಸಹಾಯಕನ ಕಾಲಿಗೆ ವಿದ್ಯುತ್ ಶಾಕ್ ತಗುಲಿದೆ. ಈ ಘಟನೆ ಕುರಿತು ಮುಂಬೈನ ಆರೆ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ವಾಸ್ತವವಾಗಿ, ಧಾರಾವಾಹಿಗೆ ಬಳಸಲಾದ ಕ್ಯಾಮೆರಾಗಳನ್ನು ಬೇರೆ ಕಡೆಯಿಂದ  ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಇದೇ ರೀತಿ ಮಾಡಲಾಗುತ್ತದೆ. ಈ ಕ್ಯಾಮೆರಾದೊಂದಿಗೆ ಕ್ಯಾಮೆರಾ ಸಹಾಯಕರು ಸಹ ಸೆಟ್‌ನಲ್ಲಿ ಇರುತ್ತಾರೆ.  ಕ್ಯಾಮೆರಾ ಅಸಿಸ್ಟೆಂಟ್ ರಜೆ ಇದ್ದರೆ,  ಅವರ ಜಾಗಕ್ಕೆ ಈ ಕಂಪೆನಿಯಿಂದ ಮತ್ತೊಬ್ಬ ಸಹಾಯಕರನ್ನು ನೀಡಲಾಗುತ್ತದೆ. ಇಲ್ಲಿಯೂ ಅದೇ ರೀತಿ ಆಗಿದ್ದು, ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಲಕ್ಷ್ಮಿನಿವಾಸ ಶೂಟಿಂಗ್​ ಸೆಟ್​ನಲ್ಲಿ ಮೊಲ ತಂದಾಗ ಏನಾಗಿತ್ತು? ತೆರೆಮರೆಯ ಸ್ಟೋರಿ ಇಲ್ಲಿದೆ...

 ಅನುಪಮಾ ಚಿತ್ರೀಕರಣಕ್ಕೆ ‘ಸಾಯಿ ವಿಡಿಯೋ’ ಸಂಸ್ಥೆಯ ಕ್ಯಾಮೆರಾಗಳನ್ನು ಬಳಸಲಾಗಿದೆ. ಘಟನೆಯ ಬಳಿಕ,  ಸಾಯಿ ವಿಡಿಯೋದಿಂದ ಅವರ ಕುಟುಂಬಕ್ಕೆ ಸ್ವಲ್ಪ ಹಣವನ್ನು ಪರಿಹಾರವಾಗಿ ನೀಡಲಾಗಿದೆ ಮತ್ತು ಅವರ ಪಾರ್ಥಿವ ಶರೀರವನ್ನು ಬಿಹಾರದಲ್ಲಿರುವ ಅವರ ಮನೆಗೆ ಕೊಂಡೊಯ್ಯುವ ವೆಚ್ಚವನ್ನು ಕಂಪನಿಯು ಭರಿಸಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ  ಸಹೋದರ ಸದ್ಯ ಮುಂಬೈಗೆ ಬಂದಿದ್ದಾರೆ.  ಆದರೆ, ಈ ಬಗ್ಗೆ ಚಾನೆಲ್ ಮತ್ತು ಪ್ರೊಡಕ್ಷನ್ ಹೌಸ್ ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

 ರೂಪಾಲಿ ಗಂಗೂಲಿಯವರ 'ಅನುಪಮಾ' ಸ್ಟಾರ್ ಪ್ಲಸ್ ನ ನಂಬರ್ ಒನ್ ಧಾರಾವಾಹಿ. ಸದ್ಯ ಈ ಧಾರಾವಾಹಿಯಲ್ಲಿ ಮೂರನೇ ಲೀಪ್ ಬಂದಿದೆ. ಈ ಧಾರಾವಾಹಿಯಲ್ಲಿ ರೂಪಾಲಿ ಗಂಗೂಲಿ ಜೊತೆ ಗೌರವ್ ಖನ್ನಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಐಕಾನಿಕ್ ಶೋಗಳನ್ನು ನಿರ್ಮಿಸುವ ರಾಜನ್ ಶಾಹಿ ಈ ಪ್ರಸಿದ್ಧ ಟಿವಿ ಧಾರಾವಾಹಿಯ ನಿರ್ಮಾಪಕರು. ಅನುಪಮಾ ಅವರಿಗಿಂತ ಮೊದಲು ಅವರು ‘ಆಯ್ ಕುಥೆ ಕೇ ಕರ್ತೆ’ ಎಂಬ ಮರಾಠಿ ಧಾರಾವಾಹಿ ಮಾಡಿದ್ದರು. ಈ ಧಾರಾವಾಹಿಯು ಸ್ಟಾರ್ ಪ್ರವಾಹದಲ್ಲಿನ ಎಲ್ಲಾ TRP ದಾಖಲೆಗಳನ್ನು ಮುರಿದಿದೆ. ಈ ಧಾರಾವಾಹಿಯ ಯಶಸ್ಸಿನ ನಂತರ, ಅವರು ರೂಪಾಲಿ ಗಂಗೂಲಿಯನ್ನು ನಟಿಸುವ ಮೂಲಕ ಸ್ಟಾರ್ ಪ್ಲಸ್‌ಗಾಗಿ 'ಅನುಪಮಾ' ಮಾಡಿದರು.

ನಾಲ್ಕು ಸೆಕೆಂಡ್​ಗೆ ಸ್ಟಾಪ್​ ಆಗತ್ತಾ? ಅಣ್ಣಯ್ಯ ಸೀರಿಯಲ್​ ನಟಿಯ ಈ ಚಾಲೆಂಜ್​ ಸ್ವೀಕರಿಸುವಿರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!