
‘ಅಣ್ಣಯ್ಯ’ ಧಾರಾವಾಹಿಯಲ್ಲಿ ಸದ್ಯ ಇಮೋಶನಲ್ ಎಪಿಸೋಡ್ ಪ್ರಸಾರವಾಗುತ್ತಿದೆ. ಒಂದು ಕಡೆ ಶಿವಣ್ಣನ ಮುಂದೆ ಸೀನನ ನಿಜ ಮುಖದ ಅನಾವರಣ ಆಗಿದೆ. ದೇವಸ್ಥಾನದಲ್ಲಿ ಸೀನಾ, ಪಿಂಕಿ ಕುತ್ತಿಗೆಗೆ ತಾಳಿ ಕಟ್ಟುವುದನ್ನು ನೋಡಿ ಸಿಟ್ಟಾದ ಶಿವಣ್ಣ, ಸೀನಾಗೆ ಬಿಗಿದು, ಕೊನೆಗೆ ತನ್ನ ತಂಗಿಯ ಜೀವನ ಹಾಳಾಗಿದೆ ಎಂದು ತಿಳಿದು, ಸೀನಾ ಮನೆಯಿಂದ ರಶ್ಮಿಯನ್ನು ವಾಪಾಸ್ ಕರೆದುಕೊಂಡು ಮನೆಗೆ ಬಂದಿದ್ದಾನೆ. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದಾನೆ ಮಾದಪ್ಪ.
ಸೊಸೆಗಾಗಿ ಮಗನನ್ನೇ ದುರು ಹಾಕಿ, ರಶ್ಮಿಯನ್ನು ಮಗಳಂತೆ ಕಾಣುತ್ತಿರುವ ಹಾಗೂ ಸೊಸೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ತಯಾರಿ ನಡೆಸಿರುವ ಮಾದಪ್ಪನನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇಂತಹ ಮಾವ ಎಲ್ಲರಿಗೂ ಸಿಗಲಪ್ಪಾ ಎಂದು ಹಾರೈಸಿದ್ದಾರೆ. ಮಾವ ಎಂದರೆ ಸೊಸೆಯರ ಮುಂದೆ ಅಧಿಕಾರ ಚಲಾಯಿಸುವವರ ಮಧ್ಯೆ, ಮಾದಪ್ಪನಂತಹ ಸೊಸೆಗೆ ಸದಾ ಬೆಂಗಾವಲಾಗಿರುವ ಮಾವನನ್ನು ನೋಡಿ ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತೊಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ. ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.