ಚೈತ್ರಾ ಮಾಟಗಾತಿ ಅಂದ ಜಗದೀಶ್​! ಜೈಲಲ್ಲಿ ನಿಮ್ಮ ಸೀನಿಯರ್​ಗೆ ವಿಷ್​ ಮಾಡಿದ್ರಾ ಕೇಳಿದ ಸುದೀಪ್​!

Published : Oct 02, 2024, 10:28 PM IST
ಚೈತ್ರಾ ಮಾಟಗಾತಿ ಅಂದ ಜಗದೀಶ್​! ಜೈಲಲ್ಲಿ ನಿಮ್ಮ ಸೀನಿಯರ್​ಗೆ ವಿಷ್​ ಮಾಡಿದ್ರಾ ಕೇಳಿದ ಸುದೀಪ್​!

ಸಾರಾಂಶ

ಸದ್ಯ ಬಿಗ್​ಬಾಸ್​ನಲ್ಲಿ ಚೈತ್ರಾ ಕುಂದಾಪುರ ಮತ್ತು ಲಾಯರ್​ ಜಗದೀಶ್​ ಅವರದ್ದೇ ಹವಾ. ಆದರೆ ಬಿಗ್​ಬಾಸ್​ ಮನೆಗೆ ಹೋಗುವ ಮುನ್ನ ಇವರಿಬ್ಬರ ಮಾತುಕತೆ ಹೇಗಿತ್ತು? ವಿಡಿಯೋ ವೈರಲ್​ ಆಗಿದೆ.   

ಬಿಗ್​ಬಾಸ್​ನ ಸೀಸನ್​ 11 ಶುರುವಾಗಿ ಇದಾಗಲೇ ಸ್ವರ್ಗ ಮತ್ತು ನಗಕ ವಾಸಿಗಳ ನಡುವೆ ಜಟಾಪಟಿ ಶುರುವಾಗಿದೆ. ಅದರಲ್ಲಿಯೂ ಚೈತ್ರಾ ಕುಂದಾಪುರ ಮತ್ತು ಲಾಯರ್​ ಜಗದೀಶ್​ ನಡುವೆ ಮೊದಲಿನಿಂದಲೂ ತಿಕ್ಕಾಟ ನಡೆಯುತ್ತಲೇ ಇದೆ.  ನರಕದ ವಾಸಿಗಳೆಲ್ಲಾ ನಿಯಮಗಳನ್ನು ಮುರಿಯೋಕೆ ತಮ್ಮದೇ ಆದ  ಸ್ಟ್ರಾಟೆಜಿ ಮಾಡಿಕೊಂಡಿದ್ದರೆ, ಸ್ವರ್ಗದವರಿಗೆ  ನಿಯಮ ಪಾಲನೆ ಮಾಡುವುದೇ ಕಷ್ಟ ಅನ್ನುವಂತಾಗಿದೆ. ಇದೇ ವೇಳೆ,  ಚೈತ್ರಾ ಕುಂದಾಪುರ ಬಗ್ಗೆ ಲಾಯರ್ ಜಗದೀಶ್‌ ಮಾತನಾಡಿದ್ದಾರೆ.  ಚೈತ್ರಾ ಕುಂದಾಪುರ ಕೈಯಲ್ಲಿ ಮನೆಗೆಲಸ ಮಾಡಿಸುವ ವೇಳೆ ಹೆರಾಸ್​ಮೆಂಟ್​  ಪರ್ಸನಲ್ ಅಟ್ಯಾಕ್ ರೀತಿ ಕಾಣ್ತು ಅಂತ ಲಾಯರ್ ಜಗದೀಶ್ ಆರೋಪಿಸಿದ್ದಾರೆ. ಇದನ್ನ ಇತರೆ ಸ್ವರ್ಗವಾಸಿಗಳು ಒಪ್ಪಲಿಲ್ಲ. ಇದಕ್ಕೂ ಮುನ್ನ  ಟಾಯ್ಲೆಟ್​ ಕ್ಲೀನ್​ ಮಾಡುವ ವಿಚಾರದಲ್ಲಿಯೂ ಗಲಾಟೆ ಆಗಿತ್ತು.

 ನರಕದಲ್ಲಿರುವ ಚೈತ್ರಾ ಕುಂದಾಪುರ ಅವರು ಟಾಯ್ಲೆಟ್​ ಕ್ಲೀನ್​ ಮಾಡಿದ್ದರು. ಆದರೆ ಅದು ಸರಿಯಾಗಿ ಕ್ಲೀನ್​ ಆಗಿಲ್ಲ ಎಂದು ಜಗದೀಶ್​ ಪುನಃ ಕ್ಲೀನ್​ ಮಾಡಿದರು. ಆದರೆ ಬಿಗ್​ಬಾಸ್​​ ನಿಮಯದ ಪ್ರಕಾರ ಇದು ತಪ್ಪು. ವಕೀಲರಾಗಿ ಹೀಗೆ ಮಾಡಿದ್ದು ಸರಿಯಲ್ಲ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಇವರು ಬಿಗ್​ಬಾಸ್​ಗೆ ಹೋಗುವ ಮೊದಲು ಪರಸ್ಪರ ಮಾತನಾಡಿಕೊಂಡಿದ್ದು, ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ್​ ಅವರನ್ನು ಹಾಡಿ ಹೊಗಳಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ.

ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್​ ಕ್ಲೀನ್​ ಮಾಡಿ ಪೇಚಿಗೆ ಸಿಲುಕಿದ ಲಾಯರ್​ ಜಗದೀಶ್​! ರುಬ್ಬಿಸಿಕೊಳ್ಳೋರು ಯಾರು?

ಅಷ್ಟಕ್ಕೂ ಚೈತ್ರಾ ಅವರನ್ನು ಜಗದೀಶ್​ ಅವರು ಡೈಮಂಡ್​, ಅದ್ಭುತ ಮಾಟಗಾತಿ, ಮಾತುಗಾರ್ತಿ ಎಂದು ಹಾಡಿ ಹೊಗಳಿದ್ದಾರೆ. ನಾನು ನೋಡಿದ ಚೈತ್ರಾಗೂ ಈಗಿನ ಚೈತ್ರಾಗೂ ತುಂಬಾ ವ್ಯತ್ಯಾಸ ಇದೆ ಎಂದಿದ್ದಾರೆ. ಇದೇ ವೇಳೆ, ಚೈತ್ರಾ ಅವರು ಕುವೆಂಪು ಅವರ ಬಗ್ಗೆ ಮಾತನಾಡಿದ್ದು ನಾನು ಕೇಳಿದ್ದೇನೆ. ಇದು ತುಂಬಾ ಇಷ್ಟವಾಯ್ತು ಎಂದಿದ್ದಾರೆ. ಹಾಗೆನೇ ಬಿಗ್​ಬಾಸ್​ 2023 ನೀವು ಜೈಲಿನಿಂದ ನೋಡಿದ್ರೆ, 2022ರಲ್ಲಿ ನಾನು ಜೈಲಿನಿಂದ ನೋಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಜೈಲನಿಂದ  ನೋಡಿದ್ವಿ ಎಂದಿದ್ದಾರೆ. ಅದಕ್ಕೆ ಸುದೀಪ್​, ನಿಮ್ಮ ಸೀನಿಯರ್​ಗೆ ವಿಷ್​ ಮಾಡಲ್ವಾ ಎಂದು ಪ್ರಶ್ನಿಸಿದ್ರು. ಇದನ್ನು ಕೇಳಿ ಚೈತ್ರಾ, ಏನ್​ ಸರ್​ ಕಾಲೇಜಿನಲ್ಲಿ ಆದ್ರೆ ಮಾಡ್ಬೋದು, ವರ್ಕ್​ ಪ್ಲೇಸ್​ನಲ್ಲಿ ಸೀನಿಯರ್​ ಆದ್ರೆ ವಿಷ್​ ಮಾಡ್ಬೋದು, ಜೈಲಿನಲ್ಲಿ ಆದ್ರೆ ಎಂದು ಜೋರಾಗಿ ನಕ್ಕಿದ್ದಾರೆ.  
 
ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಕಲಿ ನಾಯಕರನ್ನು ಸೃಷ್ಟಿ ಮಾಡಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು.ಭಾರೀ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪ ಇವರ ಮೇಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಕುಂದಾಪುರ ಭಾಗದ ಜನಪ್ರಿಯ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಆರೋಪ ಕೇಳಿಬಂದಿತ್ತು. 7 ಕೋಟಿ ರೂಪಾಯಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದರು. ಇನ್ನು ಲಾಯರ್​ ಜಗದೀಶ್​ ಅವರು, ಈ ಹಿಂದೆ ಹಲಸೂರು ಗೇಟ್ ಠಾಣೆಪೊಲೀಸರು ದಾಖಲಿಸಿದ್ದ ಕೊಲೆ ಯತ್ನ ಕೇಸ್​ನಲ್ಲಿ ಜೈಲುಪಾಲಾಗಿದ್ರೆ, ಬಳಿಕ ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಕೇಸ್​ನಲ್ಲಿ ಮತ್ತೆ ಜೈಲಿಗೆ ಹೋಗಿದ್ದರು. ಸದ್ಯ ಇಬ್ಬರೂ ಜಾಮೀನಿನ ಮೇಲೆ ಇದ್ದಾರೆ. 

ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?