
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಅವರ ( Rakshita Shetty ) ಲೈಫ್ ಈಗ ಸಿಕ್ಕಾಪಟ್ಟೆ ಬ್ಯುಸಿಯಿದೆ. ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಅವರು ಸಂದರ್ಶನಗಳು, ಇವೆಂಟ್ಗಳು, ರಾಜಕಾರಣಿಗಳ ಮನೆ ಭೇಟಿ ಎಂದು ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ. ಈಗ ಅವರು ಕಿಚ್ಚ ಸುದೀಪ್ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೆಲವು ವ್ಯಕ್ತಿಗಳು ಕೇವಲ ಮಾರ್ಗದರ್ಶನವನ್ನಷ್ಟೇ ನೀಡುವುದಿಲ್ಲ... ಇಡೀ ಜಗತ್ತು ನಿಮ್ಮನ್ನು ಪ್ರಶ್ನೆ ಮಾಡುವಾಗ ಅವರು ನಿಮ್ಮ ಪರವಾಗಿ ನಿಲ್ಲುತ್ತಾರೆ. ಸುದೀಪ್ ಸರ್, ಈ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಪ್ರಯಾಣದ ಉದ್ದಕ್ಕೂ ನೀವು ನನಗೆ ತಂದೆಯ ಸಮಾನವಾಗಿದ್ದೀರಿ. ನಾನು ಸರಿಯಾಗಿದ್ದಾಗ, ಕೋಟಿಗಟ್ಟಲೆ ಜನರ ಮುಂದೆ ನೀವು ನನಗಾಗಿ ದೃಢವಾಗಿ ನಿಂತಿರಿ. ನಾನು ಏನಾದರೂ ಒಳ್ಳೆಯದನ್ನು ಮಾಡಿದಾಗ, ಹೆಮ್ಮೆಯಿಂದ ನನ್ನನ್ನು ಪ್ರೋತ್ಸಾಹಿಸಿದಿರಿ. ಹಾಗೆಯೇ ನಾನು ತಪ್ಪು ಮಾಡಿದಾಗ, ಒಬ್ಬ ನಿಜವಾದ ಹಿತೈಷಿಯಂತೆ ಪ್ರಾಮಾಣಿಕವಾಗಿ, ಕಠಿಣವಾಗಿ, ಆದರೆ ಅಷ್ಟೇ ಕಾಳಜಿಯಿಂದ ನನ್ನನ್ನು ತಿದ್ದಿದ್ದೀರಿ.
ನನಗೇ ನಾನು ಶತ್ರುವಾದ ಕ್ಷಣಗಳಿದ್ದವು, ನನ್ನ ವರ್ತನೆಯೇ ನನಗೆ ವಿರುದ್ಧವಾಗಿ ಕೆಲಸ ಮಾಡಿದ ಸಮಯವೂ ಇತ್ತು. ಆ ಸಂದರ್ಭದಲ್ಲಿ ನನ್ನ ಕಣ್ಣಲ್ಲಿ ಕಣ್ಣಿಟ್ಟು, "ರಕ್ಷಿತಾ, ನೀನು ಇದಕ್ಕಿಂತಲೂ ಬಲಿಷ್ಠಳು" ಎಂದು ಸತ್ಯವನ್ನು ಹೇಳಿದ್ದಿರಿ. ನಿಮ್ಮ ಆ ಪ್ರಾಮಾಣಿಕ ಮಾರ್ಗದರ್ಶನ ನನ್ನನ್ನು ಬದಲಿಸಿದೆ.
ಬಿಗ್ ಬಾಸ್ನಲ್ಲಿ ಮೊದಲ ರನ್ನರ್ ಅಪ್ ಆಗಿದ್ದು ಕೇವಲ ನನ್ನ ಸಾಧನೆಯಲ್ಲ. ಅದರಲ್ಲಿ ನಿಮ್ಮ ಶ್ರಮ, ಬೆಂಬಲ ಮತ್ತು ನನ್ನ ಮೇಲಿದ್ದ ನಿಮ್ಮ ನಂಬಿಕೆಯೂ ಅಡಗಿದೆ. ಇಂದು ನಾನು ಇಲ್ಲಿ ನಿಂತಿದ್ದೇನೆ ಎಂದರೆ, ನನಗೆ ನಿಮ್ಮ ಅವಶ್ಯಕತೆ ಅತ್ಯಂತ ಹೆಚ್ಚಿದ್ದಾಗ ನೀವು ನನ್ನ ಪಕ್ಕದಲ್ಲಿ ನಿಂತಿದ್ದೇ ಕಾರಣ.
ನನ್ನನ್ನು ರಕ್ಷಿಸಿದ್ದಕ್ಕೆ, ಬೆಂಬಲಿಸಿದ್ದಕ್ಕೆ, ಒಬ್ಬ ತಂದೆಯಂತೆ ನನ್ನನ್ನು ಕಾಳಜಿಯಿಂದ ನಡೆಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ನೀವು ನನಗಾಗಿ ಮಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಕೃತಜ್ಞತೆ ಮತ್ತು ಪ್ರೀತಿಯನ್ನು ನಾನು ಎಂದೆಂದಿಗೂ ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.