6 ತಿಂಗಳ ಮುಂಚೆಯೇ ಶ್ರೀಗಳಿಗೆ ಸಿಕ್ಕಿತ್ತಾ ಸಾವಿನ ಮುನ್ಸೂಚನೆ?

Jan 24, 2019, 6:07 PM IST

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜ.24): ನಡೆದಾಡುವ ದೇವರೆಂದೆ ಹೆಸರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಸಮಾಧಿ ವೇಳೆ ಉತ್ತರ ಕನಾ೯ಟಕದ ಬಾಗಲಕೋಟೆಯ ವಿಭೂತಿ ಗಟ್ಟಿಗಳನ್ನ ಬಳಸಲಾಗಿದ್ದು, ಇದಕ್ಕೆ ಶ್ರೀಗಳು 6 ತಿಂಗಳ ಮೊದಲೇ ತಮ್ಮ ಭಕ್ತನಿಗೆ 10 ಸಾವಿರ ವಿಭೂತಿ ಗಟ್ಟಿ ತಯಾರಿಸಿಕೊಡುವಂತೆ ಹೇಳಿದ್ದರು ಎನ್ನಲಾಗಿದೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರದ ವೀರಯ್ಯ ಹಿರೇಮಠ ಎಂಬುವರು ಶ್ರೀಗಳ ಅಂತ್ಯಕ್ರಿಯೆಗೆ  ಕ್ರಿಯಾಗಟ್ಟಿ ಸೇವೆ ಸಲ್ಲಿಸಿದ್ದಾರೆ.

 ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..