ಪಾಸ್ವಾನ್ ಭಾಷಣದಿಂದಲೇ ಸಿಕ್ಕಿತ್ತು ದಲಿತಗೆ ಸ್ವಾಮೀಜಿ ಪಟ್ಟ

Kannadaprabha News   | Asianet News
Published : Oct 09, 2020, 10:08 AM IST
ಪಾಸ್ವಾನ್ ಭಾಷಣದಿಂದಲೇ ಸಿಕ್ಕಿತ್ತು ದಲಿತಗೆ ಸ್ವಾಮೀಜಿ ಪಟ್ಟ

ಸಾರಾಂಶ

ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಒಂದೇ ಒಂದು ಭಾಷಣದಿಂದ ದಲಿತ ವ್ಯಕ್ತಿಗೆ ಸ್ವಾಮೀಜಿ ಪಟ್ಟವು ಲಭಿಸಿತ್ತು ಎಂದು ವಚನಾನಂದ ಸ್ವಾಮೀಜಿ ಸ್ಮರಿಸಿದ್ದಾರೆ

ಬೆಂಗಳೂರು (ಅ.09):  ಗುರುವಾರ ದಿವಂಗತರಾದ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು 90ರ ದಶಕದಲ್ಲಿ ರಾಜ್ಯಕ್ಕೆ ಆಗಮಿಸಿ ಮಾಡಿದ್ದ ಭಾಷಣದಿಂದ ದಲಿತ ಯುವಕನೊಬ್ಬ ಪ್ರಮುಖ ಶಾಖಾ ಮಠವೊಂದರ ಪೀಠಾಧಿಪತಿ ಆಗಿದ್ದರು’ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ಹಾಗೂ ಶ್ವಾಸಗುರು ವಚನಾನಂದ ಸ್ವಾಮೀಜಿ ಸ್ಮರಿಸಿದ್ದಾರೆ.

‘90ರ ದಶಕದಲ್ಲಿ ರಾಜ್ಯದ ಬಸವ ಕಲ್ಯಾಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ನಾಡಿನ ಶರಣರ ಸಮ್ಮೇಳನದಲ್ಲಿ ಅನೇಕ ಸಾಧು-ಸಂತರ ನಡುವೆ ರಾಮ್‌ ವಿಲಾಸ್‌ ಪಾಸ್ವಾನ್‌ ಸಹ ಭಾಗವಹಿಸಿದ್ದರು. ರಾಮ್‌ ವಿಲಾಸ್‌ ಪಾಸ್ವಾನ್‌ ತಮ್ಮ ಭಾಷಣದ ವೇಳೆ ನೆರೆದಿದ್ದ ಹಿರಿಯ ಸ್ವಾಮೀಜಿಗಳನ್ನು ಉದ್ದೇಶಿಸಿ ‘ನಿಮ್ಮಲ್ಲಿ ಯಾವುದಾದ​ರೂ ಮಠದ ಶಾಖಾ ಮಠಕ್ಕೆ ದಲಿತರನ್ನು ಪೀಠಾಧಿಪತಿಗಳಾಗಿ ನೇಮಿಸಿದ್ದೀರಾ?’ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಎಲ್ಲಾ ಸ್ವಾಮೀಜಿಗಳಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಈ ವೇಳೆ ಬಾಗ​ಲ​ಕೋ​ಟೆಯ ಇಳ​ಕ​ಲ್‌ನ ವಿಜ​ಯ​ ಮ​ಹಾಂತೇಶ ಪೀಠದ ಮಹಾಂತ ಶಿವ​ಯೋಗಿ ಸ್ವಾಮೀಜಿ ತಾವು ಮಾಡುವುದಾಗಿ ಘೋಷಿಸಿದ್ದರು’ ಎಂದು ವಚ​ನಾ​ನಂದರು ನೆನ​ಪಿ​ಸಿ​ಕೊಂಡಿ​ದ್ದಾ​ರೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ ...

‘ಇದರಂತೆ ಮೊಳಕಾಲ್ಮುರು ಸಿದ್ದಯ್ಯನ ಕೋಟೆ ಶಾಖಾ ಮಠಕ್ಕೆ ಬೆಳಗಾವಿ ಮೂಲದ ದಲಿತ ಯುವಕನಿಗೆ ಸಂಸ್ಕಾರ ಬೋಧಿಸಿ ಮಠಾಧಿಪತಿಯನ್ನಾಗಿ ನೇಮಿಸಿದ್ದರು. ಇದು ಪಾಸ್ವಾನ್‌ ಅವರ ಮಾತಿನ ಪ್ರಭಾವ ಹಾಗೂ ಇಳ​ಕಲ್‌ ಮಹಾಂತ ಸ್ವಾಮೀಜಿ ಅವರ ದಾರ್ಶ​ನಿಕ ವ್ಯಕ್ತಿ​ತ್ವಕ್ಕೆ ಹಿಡಿದ ಕೈಗ​ನ್ನಡಿ’ ಎಂದು ವಚನಾನಂದ ಸ್ವಾಮೀಜಿ ಸ್ಮರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!