
ಬೆಂಗಳೂರು(ಜ.03): ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ತೆರಳುವುದು ಒಂದು ಸಾಹಸವೆ.. ಅನುಭವಿಸಿದವರಿಗೆ ಗೊತ್ತು ಅದರ ಪಾಡು.. ಬುಕ್ ಮಾಡಿದ್ದ ಕ್ಯಾಬ್ ಹತ್ತು ನಿಮಿಷ ತಡ ಆದರೆ ಎದೆ ಢವ ಢವ ಎಂದು ಹೊಡೆದುಕೊಳ್ಳಲು ಶುರುವಾಗುತ್ತದೆ. ಇದಕ್ಕೆಲ್ಲ ಒಂದು ಪರಿಹಾರ ಈಗ ಸಿಕ್ಕಿದೆ. ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಆರಂಭವಾಗಿದೆ.
ರೈಲು ಜ.4ರಂದು ಮುಂಜಾನೆ 4.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್ ರೈಲು ನಿಲ್ದಾಣದತ್ತ ತೆರಳಲಿದೆ. ತನ್ಮೂಲಕ ಪ್ರಯಾಣಿಕರು ಇನ್ನು ಮುಂದೆ ನಗರದ ಕೇಂದ್ರ ಭಾಗದಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಒಂದೂವರೆ ತಾಸಿನಲ್ಲಿ ಪ್ರಯಾಣಿಸಬಹುದಾಗಿದೆ.
ಮೆಜೆಸ್ಟಿಕ್ ನಿಂದ ರೈಲು ಏರಿ ಹೊರಟರೆ ವಿಮಾನ ನಿಲ್ದಾಣ ಅಲ್ಲಿಂದ ಬಿಎಂಟಿಸಿ ಫೀಡರ್ ಬಸ್ ನಲ್ಲಿ 15 ನಿಮಿಷಕ್ಕೆ ನಿಮ್ಮ ಜಾಗ . ಟ್ರಾಫಿಕ್ ಜಂಜಾಟವಿಲ್ಲ.. ಸಿಗ್ನಲ್ ಗಳ ಕಿರಿಕಿರಿ ಇಲ್ಲ..
ಮೆಜೆಸ್ಟಿಕ್ ನಿಂದ ರೈಲು ಸೇವೆ.. ಲಾಭಗಳ ಸರಳ ಪಟ್ಟಿ
* ಸಮಯಕ್ಕೆ ಸರಿಯಾಗಿ ಜಾಗ ತಲುಪಿ; ರೈಲಿನ ಮೂಲಕ ತೆರಳುವುದರಿಂದ ಪಕ್ಕಾ ಸಮಯ ಲೆಕ್ಕ ಮಾಡಬಹುದು. ಟ್ರಾಫಿಕ್ ಕಿರಿಕಿರಿ ಇಲ್ಲದಿರುವ ಕಾರಣ ಆರಾಮದಾಯಕ ಪ್ರಯಾಣ ನಿಮ್ಮದಾಗುತ್ತದೆ.
*ಕಡಿಮೆ ಖರ್ಚು; ಕ್ಯಾಬ್ ಬುಕ್ ಮಾಡಿಕೊಂಡು ಸಾವಿರಾರು ರೂ. ನೀಡುವ ಅಗತ್ಯ ಇಲ್ಲಿರುವುದಿಲ್ಲ. ಹಣದ ಉಳಿತಾಯ ಜತೆಗೆ ಸಮಯದ ಉಳಿತಾಯ ಸಾಧ್ಯ. ಕ್ಯಾಬ್ ಬುಕ್ ಮಾಡಿ ಕಾಯುತ್ತ ಕುಳಿತು ಸಾವಿರಾರು ರೂ. ನೀಡುವ ಬದಲು ಇಲ್ಲಿ 10 ರಿಂದ 15 ರೂ. ನಲ್ಲಿ ಪ್ರಯಾಣ ಮುಗಿದುಹೋಗುತ್ತದೆ.
* ಜಂಜಾಟವಿಲ್ಲ; ಕ್ಯಾಬ್ ಗೆ ಲಗೇಜ್ ಏರಿಸುವುದು ಒಂದು ಜಂಜಾಟವೇ.. ಎರಡು ಅಥವಾ ಮೂರು ಜನರು ತೆರಳುವುದಾದರೆ ಕ್ಯಾಬ್ ಗೆ ಲಗೇಜ್ ತುಂಬುವ ಜಂಜಾಟ ಯಾರಿಗೂ ಬೇಡ.. ರೈಲಿನಲ್ಲಿ ಆದರೆ ತಾಪತ್ರಯ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ