
ಚೆನ್ನೈ(ಜ.03): ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನ ಖ್ಯಾತ ದೇವಾಲು ಶನೈಶ್ಚರ ದೇವಸ್ಥಾನಕ್ಕೆ ಸ್ಯಾಂಡಲ್ವುಡ್ ನಟ ಯಶ್ ಭೇಟಿ ಕೊಟ್ಟಿದ್ದಾರೆ. ವಿಶೇಷ ಎಂದರೆ ನಟನ ಜೊತೆ ಡಿಸಿಎಂ ಕೂಡಾ ಇದ್ದರು.
ಡಿಸಿಎಂ ಆಶ್ವತ್ಥ್ ನಾರಾಯಣ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ರಾಕಿ ಭಾಯ್. ಯಶ್ ಜೊತೆ ಕೆಜಿಎಫ್ 2 ನಿರ್ಮಾಪಕ ವಿಜಯ್ ಕಿರಂಗಂದೂರು ಕೂಡ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.
ಜ. 01 ರಿಂದ ಶಾಲಾ, ಕಾಲೇಜು ಪ್ರಾರಂಭದಲ್ಲಿ ಬದಲಾವಣೆ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್
ಸೋಷಿಯಲ್ ಮೀಡಿಯಾದಲ್ಲಿ ಡಿಸಿಎಂ ಜೊತೆ ಯಶ್ ದೇವಾಲಯಕ್ಕೆ ಹೋಗಿರುವ ಫೋಟೋ ಹರಿದಾಡುತ್ತಿವೆ ಆಶ್ವತ್ ನಾರಾಯಣ್ ಜೊತೆ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಸ್ ಚರ್ಚೆ ಮಾಡ್ತಿದ್ದಾರೆ ಜನ.
ಅಂತೂ ಇವರಿಬ್ಬರೂ ಪ್ಲಾನ್ ಮಾಡಿ ಜೊತೆಗೇ ಹೋದರಾ..? ಅಥವಾ ಅಲ್ಲಿ ಭೇಟಿಯಾದರಾ ಎಂಬುದು ಗೊತ್ತಿಲ್ಲ. ಡಿಸಿಎಂ ಜೊತೆ ನಟ ದೇವಾಲಯಕ್ಕೆ ಹೋಗಿರುವ ಸುದ್ದಿ ಮಾತ್ರ ಎಲ್ಲೆಡೆ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ