Auto Kannadiga: ಪ್ರಯಾಣ ಮಾಡೋವಾಗ್ಲೆ ಕನ್ನಡ ಕಲಿಸುವ ಆಟೋ ಡ್ರೈವರ್‌ ಐಡಿಯಾಗೆ ನೆಟ್ಟಿಗರ ಮೆಚ್ಚುಗೆ

By Santosh NaikFirst Published Oct 22, 2024, 3:02 PM IST
Highlights

ಬೆಂಗಳೂರಿನ ಆಟೋ ಚಾಲಕ ಅಜ್ಮಲ್‌ ಸುಲ್ತಾನ್‌ ಎಂಬಾತ ತನ್ನ ಆಟೋದಲ್ಲಿ ಪೋಸ್ಟರ್‌ ಅಂಟಿಸುವ ಮೂಲಕ ಕನ್ನಡ ಕಲಿಸುವ ಪ್ರಯತ್ನಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಬೆಂಗಳೂರು (ಅ.22): ಕರ್ನಾಟಕದಲ್ಲಿ ಕನ್ನಡ ಭಾಷೆ ವಿಚಾರವಾಗಿ ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಯಾಗಿತ್ತು. ಉತ್ತರ ಭಾರತೀಯರು ಕನ್ನಡದಲ್ಲಿ ವ್ಯವಹರಿಸಬೇಕು ಎನ್ನುವ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿತ್ತು. ಇದರ ನಡುವೆ ಬೆಂಗಳೂರು ಆಟೋ ಚಾಲಕರೊಬ್ಬರು ಭಾಷಾ ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪರಿಹಾರ ಕಂಡುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿರುವ ನಡೆಯಲ್ಲಿ ಆಟೋ ಚಾಲಕ ತನ್ನ ಆಟೋದಲ್ಲಿ ಕನ್ನಡ ಪೋಸ್ಟರ್‌ಅನ್ನು ಅಂಟಿಸಿದ್ದಾನೆ. ಇದು ಪ್ರಯಾಣಿಕರಿಗೆ ಆಟೋದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿಯೇ ಕನ್ನಡ ಕಲಿಯುವ ಅವಕಾಶ ಸೃಷ್ಟಿಸಿದೆ. 'ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ' ಎನ್ನುವ ಶೀರ್ಷಿಕೆಯ ಪೋಸ್ಟರ್‌ ಇದಾಗಿದ್ದು, ಕನ್ನಡದ ಸಾಮಾನ್ಯ ವಾಕ್ಯಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡಲಾಗಿದೆ. ಇದು ಕನ್ನಡೇತರ ಭಾಷಿಗರಿಗೆ ಸ್ಥಳೀಯ ಭಾಷೆಯಲ್ಲಿ ಉತ್ತಮವಾಗಿ ಸಂವಹನ ನಡೆಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಆಟೋ ಚಾಲಕನ ಸಿಂಪಲ್‌ ಐಡಿಯಾ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪ್ರಯಾಣಿಕರೊಬ್ಬರು ಇದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾಷೆಯ ಅಂತರವನ್ನು ಕಡಿಮೆ ಮಾಡಲು ಅವರ ಸ್ನೇಹಪರ ಮತ್ತು ಶೈಕ್ಷಣಿಕ ವಿಧಾನಕ್ಕಾಗಿ ಚಾಲಕನ ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘನೆ ಮಾಡಿದ್ದಾರೆ.

ಎಕ್ಸ್‌ನಲ್ಲಿ ಕಾಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬರು, ಬಹುಶಃ ಇದು ಅತ್ಯಂತ ವೇಗವಾಗಿ ಹಾಗೂ ಅತ್ಯಂತ ಅಗ್ಗವಾಗಿ ಕನ್ನಡ ಕಲಿಯುವ ಪ್ರಯತ್ನವಾಗಿದೆ ಎಂದು ತಿಳಿಸಿದ್ದಲ್ಲದೆ, ಆಟೋ ಚಾಲಕನ ಯೋಚನೆ ಬಹಳ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಈ ಪೋಸ್ಟರ್‌ನಲ್ಲಿ ಕನ್ನಡದಲ್ಲಿ ದೈನಂದಿನವಾಗಿ ಬಳಕೆ ಮಾಡುವ ಹಲವು ಸಾಲುಗಳನ್ನು ಹೊಂದಿದೆ. 'Namasakara sir' (Hello, sir) ಎನ್ನುವ ಸಾಲುಗಳು ಇಂಗ್ಲೀಷ್‌ನಲ್ಲಿದೆ. 'Elli idira' (Where are you?), “Yeshtu aaytu” (How much?) ಹಾಗೂ “UPI idya athva cash aa?” (Is it UPI or cash?) ಎನ್ನುವ ಸಾಲುಗಳನ್ನು ಹೊಂದಿದೆ.

Latest Videos

ಸರಳವಾದ ಅಟೋ ರೈಡ್‌ಅನ್ನು ಕಲಿಕೆಯ ಅನುಭವವನ್ನಾಗಿ ಪರಿವರ್ತಿಸುವ ಇವರ ಟೆಕ್ನಿಕ್‌ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕ್ರಿಯೇಟಿವ್‌ ಮಾರ್ಗದಲ್ಲಿ ಕನ್ನಡ ಕಲಿಸುತ್ತಿರುವ ಆಟೋ ಚಾಲಕನ ಜಾಣ್ಮೆಯನ್ನೂ ಮೆಚ್ಚಿದ್ದಾರೆ.

ಪೋಸ್ಟರ್‌ಗಳ ಆಚೆಗೆ, ಚಾಲಕ ಆನ್‌ಲೈನ್‌ನಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. Instagram, YouTube ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ಪಾಠಗಳನ್ನು ಹಂಚಿಕೊಳ್ಳುತ್ತಾರೆ. ವೈರಲ್ ಪೋಸ್ಟ್‌ನಿಂದ ಗಮನವನ್ನು ಪಡೆದುಕೊಂಡಿರುವ ಅವರ ಇನ್‌ಸ್ಟಾಗ್ರಾಮ್ ಖಾತೆಯು ರೀಲ್‌ಗಳನ್ನು ಒಳಗೊಂಡಿದೆ, ಅಲ್ಲಿ ಅವರು ತಮ್ಮ ಹೆಚ್ಚುತ್ತಿರುವ ಅನುಯಾಯಿಗಳೊಂದಿಗೆ ಕನ್ನಡ ಭಾಷೆಯ ಪಾಠಗಳನ್ನು ಹಂಚಿಕೊಳ್ಳುತ್ತಾರೆ.

'ಜಗದೀಶ್‌ಗೆ ಕ್ಲೀನ್‌ ಚಿಟ್‌ ಕೊಡೋ ಹಾಗೆ ಸುದೀಪ್‌ ಮಾತನಾಡಿದ್ರು..' ಕಿಚ್ಚನ ವಿರುದ್ದವೇ ಗರಂ ಆದ ಚೈತ್ರಾ ಕುಂದಾಪುರ, ಮಾನಸ!

ಒಂದು ತಿಂಗಳ ಹಿಂದೆ, ಬೆಂಗಳೂರಿನ ಆಟೋರಿಕ್ಷಾ ಚಾಲಕನೊಬ್ಬ ತನ್ನ ರೈಡ್ ಅನ್ನು ರದ್ದುಗೊಳಿಸಿದ್ದಕ್ಕಾಗಿ ಮಹಿಳಾ ಪ್ರಯಾಣಿಕರನ್ನು ನಿಂದಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ, ಅದನ್ನು ಅಗ್ರಿಗೇಟರ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದ ವಿಡಿಯೋದಲ್ಲಿ ಆಟೋ ಚಾಲಕ ಪ್ರಯಾಣಿಕನೊಬ್ಬನ ಫೋನ್ ಕಿತ್ತುಕೊಂಡು ಪ್ರಯಾಣಿಸಲು ಬೇರೊಂದು ಆಟೋರಿಕ್ಷಾವನ್ನು ಆರಿಸಿಕೊಂಡಿದ್ದಕ್ಕೆ ಕಿರುಚಾಟ ನಡೆಸಿದ್ದ. ಬಳಿಕ ಆತನ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

Markonahalli Dam: ಭರ್ತಿಯಾದ ಇತಿಹಾಸ ಪ್ರಸಿದ್ದ ಮಾರ್ಕೋನಹಳ್ಳಿ ಡ್ಯಾಮ್‌, 2 ಸ್ವಯಂಚಾಲಿತ ಸೈಫನ್‌ ಓಪನ್‌

very handy pic.twitter.com/RqC6lTpwuq

— Vatsalya (@vatsalyatandon)
click me!