
ಬೆಂಗಳೂರು (ಮೇ.31): ಮಲ್ಲನೂರ್ ನಿಲ್ದಾಣದ ಯಾರ್ಡ್ನಲ್ಲಿ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ಹಿನ್ನೆಲೆಯಲ್ಲಿ ಜೂ.1ರಂದು ಎರಡು ರೈಲುಗಳ ಸಂಚಾರ ವಿಳಂಬವಾಗಲಿದೆ. ಜೂ. 1ರಂದು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ಕೆಎಸ್ಆರ್ ಬೆಂಗಳೂರು - ಕನ್ಯಾಕುಮಾರಿ ಡೈಲಿ ಎಕ್ಸ್ಪ್ರೆಸ್ (KSR Bangalore - Kanyakumari Express) ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ. ಜೊತೆಗೆ ಚಾಮರಾಜನಗರ ನಿಲ್ದಾಣದಿಂದ ಹೊರಡುವ ರೈಲು ಚಾಮರಾಜನಗರ - ತಿರುಪತಿ ಡೈಲಿ ಎಕ್ಸ್ಪ್ರೆಸ್ (Chamarajanagar - Tirupati Express) ರೈಲನ್ನು ಮಾರ್ಗ ಮಧ್ಯ 40 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿದೆ.
ಕೆಎಸ್ಆರ್ ಬೆಂಗಳೂರು- ಜೋಲಾರ್ಪೇಟೆ ವೇಗ ಪರೀಕ್ಷೆ ಹಿನ್ನೆಲೆ ಸಾರ್ವಜನಿಕರ ಓಡಾಟ ಬಂದ್
ಬೆಂಗಳೂರು: ಕೆಎಸ್ಆರ್ ಬೆಂಗಳೂರು- ಜೋಲಾರ್ಪೇಟೆ ವಿಭಾಗದ (ಜೋಲಾರ್ಪೇಟೆ ಹೊರತುಪಡಿಸಿ) ವಿದ್ಯುದ್ದೀಕರಿಸಿದ ಬ್ರಾಡ್ಗೇಜ್ ಜೋಡಿ ಮಾರ್ಗದಲ್ಲಿ ಜೂ. 1ರಂದು ಆಸಿಲೇಟಿಂಗ್ ಮಾನಿಟರಿ ಸಿಸ್ಟಮ್ (ಓಎಂಎಸ್) ವೇಗ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕರು ಈ ಮಾರ್ಗದಲ್ಲಿ ಓಡಾಡಬಾರದು ಎಂದು ಎಚ್ಚರಿಸಲಾಗಿದೆ.
ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್
ಈ ಮಾರ್ಗದಲ್ಲಿ ಗಂಟೆಗೆ 110 ಕಿ.ಮೀ.ನಿಂದ 130 ಕಿ.ಮೀ.ವರೆಗೆ ರೈಲುಗಳ ವೇಗವನ್ನು ಹೆಚ್ಚಿಸಲು ನೈರುತ್ಯ ರೈಲ್ವೆ (South Western Railway) ಮುಂದಾಗಿದೆ. ವೇಗ ಪರೀಕ್ಷೆ ಸಮಯದಲ್ಲಿ ತಪಾಸಣೆ ರೈಲು ವಿದ್ಯುದೀಕೃತ ಜೋಡಿ ಮಾರ್ಗದಲ್ಲಿ ಗಂಟೆಗೆ 143 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಸಾರ್ವಜನಿಕರು ಈ ಜೋಡಿ ಮಾರ್ಗದಲ್ಲಿ ಅತಿಕ್ರಮಿಸಿ ಓಡಾಡಬಾರದು. ಇದು ಪ್ರಾಣಾಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ