
ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡ್ಡದಕೇರಿ ಓಣಿಯಲ್ಲಿ ಅಪರೂಪದ ಘಟನೆಯೊಂದು ಸಂಚಲನ ಮೂಡಿಸಿದೆ. ಸಯ್ಯದಭಾಷಾ ಹುಗ್ಗಿ ಎಂಬುವವರ ದೇಸಿ ತಳಿಯ ಹಸು ಒಂದು ಹೆಣ್ಣು ಮತ್ತು ಎರಡು ಗಂಡು ಕರುಗಳಿಗೆ ಜನ್ಮ ನೀಡಿದೆ. ಮೂರು ಕರುಗಳೂ ಆರೋಗ್ಯವಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಸಯ್ಯದಭಾಷಾ ಅವರು ತಮ್ಮ ಹಸುವಿಗೆ ಮತ್ತು ಕರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 'ಒಂದೇ ಬಾರಿಗೆ ಮೂರು ಕರುಗಳ ಜನನವು ಲಕ್ಷ್ಮೀ ದೇವಿಯ ಆಗಮನದಂತೆ ಭಾಸವಾಗುತ್ತಿದೆ' ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಈ ಹಸುವಿಗೆ ಜಾನುವಾರು ಅಭಿವೃದ್ಧಿ ಅಧಿಕಾರಿ ಹಸನಸಾಬ್ ಸವಣೂರ ಕೃತಕ ಗರ್ಭಧಾರಣೆ ನಡೆಸಿದ್ದರು. 'ದೇಸಿ ತಳಿಯ ಹಸುವಿನಲ್ಲಿ ಇಂತಹ ಘಟನೆಯು ಅತ್ಯಂತ ಅಪರೂಪ. ಇದು ವೈಜ್ಞಾನಿಕವಾಗಿಯೂ ಗಮನಾರ್ಹವಾದ ಸಂಗತಿಯಾಗಿದೆ ಎಂದು ಹಸನಸಾಬ್ ತಿಳಿಸಿದ್ದಾರೆ.
ಗುಡ್ಡದಕೇರಿ ಓಣಿಯಲ್ಲಿ ಈ ಘಟನೆಯಿಂದ ಸ್ಥಳೀಯ ರೈತರು ಮತ್ತು ಜನರು ಆಶ್ಚರ್ಯಗೊಂಡಿದ್ದಾರೆ. ಸಯ್ಯದಭಾಷಾ ಅವರ ಮನೆಗೆ ಭೇಟಿನೀಡಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ. 'ಇದು ದೇವರ ಕೃಪೆ'ಎನ್ನುತ್ತಿದ್ದಾರೆ ಸ್ಥಳೀಯರು. ಈ ಘಟನೆಯು ದೇಸಿ ತಳಿಯ ಜಾನುವಾರುಗಳ ಸಾಮರ್ಥ್ಯ ತೋರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ