ಕನ್ನಡ ಗೀತೆ ಹಾಡುವ ಜರ್ಮನ್‌ ಯುವತಿಗೆ ಮೋದಿ ಮೆಚ್ಚುಗೆ

Published : Sep 25, 2023, 12:00 AM IST
ಕನ್ನಡ ಗೀತೆ ಹಾಡುವ ಜರ್ಮನ್‌ ಯುವತಿಗೆ ಮೋದಿ ಮೆಚ್ಚುಗೆ

ಸಾರಾಂಶ

ನೀವಿದನ್ನು ಕೇಳಿದರೆ ಅಚ್ಚರಿಪಡುತ್ತೀರಿ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಈಕೆ ಬಹಳ ಫೇಮಸ್ಸಾಗಿದ್ದಾಳೆ. ಎಂಥಾ ಸುಮಧುರ ಧ್ವನಿ ಈಕೆಯದು. ಈ ಧ್ವನಿಯಲ್ಲಿ ನಾವು ದೇವರಲ್ಲಿನ ಪ್ರೀತಿಯನ್ನು ಕಾಣಬಹುದು. ಈಕೆ ಜರ್ಮನಿಯ ಹೆಣ್ಣುಮಗಳು. ಹೆಸರು ಕಾಸ್ಮಿ. ಅವಳಿಗೆ 21 ವರ್ಷ. ದುರದೃಷ್ಟವಶಾತ್‌ ಕಣ್ಣು ಕಾಣಿಸುವುದಿಲ್ಲ. ಆದರೆ ಅವಳ ಧ್ವನಿಯಲ್ಲಿ ದೈವತ್ವವೇ ಇದೆ’ ಎಂದು ಮೋದಿ ಶ್ಲಾಘಿಸಿದ್ದಾರೆ.

ನವದೆಹಲಿ(ಸೆ.25): ಕನ್ನಡ, ಸಂಸ್ಕೃತ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಜರ್ಮನಿಯ ಅಂಧ ಯುವತಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಮನ್‌ ಕೀ ಬಾತ್‌ನಲ್ಲಿ ಕೊಂಡಾಡಿದ್ದಾರೆ.

‘ನೀವಿದನ್ನು ಕೇಳಿದರೆ ಅಚ್ಚರಿಪಡುತ್ತೀರಿ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಈಕೆ ಬಹಳ ಫೇಮಸ್ಸಾಗಿದ್ದಾಳೆ. ಎಂಥಾ ಸುಮಧುರ ಧ್ವನಿ ಈಕೆಯದು. ಈ ಧ್ವನಿಯಲ್ಲಿ ನಾವು ದೇವರಲ್ಲಿನ ಪ್ರೀತಿಯನ್ನು ಕಾಣಬಹುದು. ಈಕೆ ಜರ್ಮನಿಯ ಹೆಣ್ಣುಮಗಳು. ಹೆಸರು ಕಾಸ್ಮಿ. ಅವಳಿಗೆ 21 ವರ್ಷ. ದುರದೃಷ್ಟವಶಾತ್‌ ಕಣ್ಣು ಕಾಣಿಸುವುದಿಲ್ಲ. ಆದರೆ ಅವಳ ಧ್ವನಿಯಲ್ಲಿ ದೈವತ್ವವೇ ಇದೆ’ ಎಂದು ಮೋದಿ ಶ್ಲಾಘಿಸಿದ್ದಾರೆ.

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

‘ಕಾಸ್ಮಿ ಯಾವತ್ತೂ ಭಾರತಕ್ಕೆ ಬಂದಿಲ್ಲ. ಆದರೆ ಇಲ್ಲಿನ ಸಂಗೀತವನ್ನು ಅಭ್ಯಾಸ ಮಾಡಿದ್ದಾಳೆ. ಅವಳು ಕನ್ನಡ, ಮಲಯಾಳಂ, ತಮಿಳು, ಸಂಸ್ಕೃತ, ಹಿಂದಿ, ಅಸ್ಸಾಮಿ, ಬಂಗಾಳಿ, ಮರಾಠಿ, ಉರ್ದು ಹೀಗೆ ಅನೇಕ ಭಾರತೀಯ ಭಾಷೆಗಳ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾಳೆ. ಅವಳ ಸಾಧನೆಯನ್ನು ನಾನು ಮನಸಾರೆ ಶ್ಲಾಘಿಸುತ್ತೇನೆ’ ಎಂದು ಹೇಳಿದ ಮೋದಿ, ತಮ್ಮ ಭಾಷಣದ ನಡುವೆ ಆಕೆಯ ಕನ್ನಡ ಹಾಡನ್ನು ಕೇಳಿಸಿದರು.

ಭಾರತದ ಸಂಗೀತ ಹಾಗೂ ಸಂಸ್ಕೃತಿಗೆ ಕಾಸ್ಮಿ ಮಾರುಹೋಗಿದ್ದಾಳೆ. 5-6 ವರ್ಷಗಳಿಂದ ಅವಳು ಇಲ್ಲಿನ ಸಂಗೀತವನ್ನು ಅಭ್ಯಾಸ ಮಾಡಿದ್ದಾಳೆ. ತಬಲಾ ಕೂಡ ನುಡಿಸುತ್ತಾಳೆ. ಅವಳ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದೆ ಎಂದು ಮೋದಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ