ಬ್ರಿಟನ್ನಿಂದ ಬಂದು ಕಣ್ಮರೆ ಆದವರಿಗೆ ಪೊಲೀಸರ ತಲಾಶ್‌

Kannadaprabha News   | Asianet News
Published : Dec 27, 2020, 07:24 AM IST
ಬ್ರಿಟನ್ನಿಂದ ಬಂದು ಕಣ್ಮರೆ ಆದವರಿಗೆ ಪೊಲೀಸರ ತಲಾಶ್‌

ಸಾರಾಂಶ

ಬ್ರಿಟನ್ನಿಂದ ಬಂದು ಕಣ್ಮರೆ ಆದವರಿಗೆ ಪೊಲೀಸರ ತಲಾಶ್‌, -ನಾಪತ್ತೆಯಾದ 693 ಮಂದಿ ಹುಡುಕಲು ಪೊಲೀಸ್‌ ನೆರವು ಕೋರಿದ ಆರೋಗ್ಯ ಇಲಾಖೆ, -ಬ್ರಿಟನ್‌ನಿಂದ ಬಂದ ಕೆಲವರ ಮೊಬೈಲ್‌ ಸ್ವಿಚಾಫ್‌, ಮನೆಗೆ ಬೀಗ, ಕೆಲವರಿಂದ ಕಳ್ಳಾಟ

ಬೆಂಗಳೂರು (ಡಿಸ27): ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿ ನಾಪತ್ತೆಯಾಗಿರುವ 693 ಮಂದಿಯ ಪತ್ತೆಗೆ ಇದೀಗ ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆಯ ಕೋರಿಕೆಯ ಮೇರೆಗೆ ಪೊಲೀಸ್‌ ಇಲಾಖೆ ಬ್ರಿಟನ್‌ನಿಂದ ಆಗಮಿಸಿದವರ ಪತ್ತೆ ಕಾರ್ಯ ಆರಂಭಿಸುವಂತೆ ಠಾಣಾ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಿ.12ರಿಂದ 21ರವರೆಗೆ ಬ್ರಿಟನ್‌ದಿಂದ ರಾಜ್ಯಕ್ಕೆ ಬಂದಿರುವ ಒಟ್ಟು 2127 ಜನರ ಪೈಕಿ ಶನಿವಾರದವರೆಗೂ 1434 ಜನರನ್ನು ಪತ್ತೆ ಹಚ್ಚಲು ಮಾತ್ರ ಆರೋಗ್ಯ ಇಲಾಖೆಗೆ ಸಾಧ್ಯವಾಗಿದೆ. ಉಳಿದ 693 ಮಂದಿಯನ್ನು ಬೇರೆ ಬೇರೆ ಕಾರಣಗಳಿಂದ ಪತ್ತೆ ಹಚ್ಚಲಾಗಿಲ್ಲ. ಇದರಲ್ಲಿ 220 ಮಂದಿ ಬೆಂಗಳೂರಿನವರು. ಈ 220 ಮಂದಿಯ ಪೈಕಿ ಕೆಲವರು ತಪ್ಪು ದೂರವಾಣಿ ಸಂಖ್ಯೆ ನೀಡಿದ್ದರೆ, ಇನ್ನು ಕೆಲವರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅವರ ವಿಳಾಸ ಹಿಡಿದು ಹೋದರೆ ಒಂದಷ್ಟುಜನರ ಮನೆಗೆ ಬೀಗ ಹಾಕಿದೆ. ಕೆಲವರು ಬೇರೆ ಊರುಗಳಿಗೆ, ಇನ್ನು ಕೆಲವರು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ಹಾಗಾಗಿ ಅವರನ್ನು ಹೇಗೆ ಪತ್ತೆ ಹಚ್ಚುವುದು ಎಂದು ತಿಳಿಯದೆ ಆರೋಗ್ಯ ಇಲಾಖೆ ಪೊಲೀಸರ ಸಹಕಾರ ಕೋರಿದೆ.

ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿರುವ ಪ್ರಯಾಣಿಕರ ವಿವರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತದಿಂದ ಪಡೆದಿರುವ ಆರೋಗ್ಯಾಧಿಕಾರಿಗಳು ಸ್ಥಳೀಯ ಪೊಲೀಸರಿಗೆ ನೀಡಿ ಅವರ ಪತ್ತೆಗೆ ಸಹಕರಿಸುವಂತೆ ಕೋರಿದ್ದಾರೆ.

ವ್ಯಾಕ್ಸಿನ್ ಕೊಟ್ಟ ಬಳಿಕ ರಿಯಾಕ್ಷನ್

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಬ್ರಿಟನ್‌ನಿಂದ ಬಂದವರ ಪೈಕಿ ಹಲವರ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರ ಸಹಕಾರ ಪಡೆಯಲು ಇಲಾಖೆಯ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾನೂನು ಕ್ರಮದ ಎಚ್ಚರಿಕೆ:
ನಾಪತ್ತೆಯಾಗಿರುವವರು ತಾವಾಗಿಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆ, ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿರುವುದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬ್ರಿಟನ್‌ನಲ್ಲಿ ಹೊಸ ವೈರಸ್ ಆತಂಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ