ಮೊದಲ ಪತ್ನಿ, ಮಗಳನ್ನು ಹೊರದಬ್ಬಿ ಎರಡನೇ ಮದುವೆಯಾದ ಜೆಡಿಎಸ್ ಶಾಸಕ!

Published : Jan 25, 2019, 08:24 AM ISTUpdated : Jan 25, 2019, 12:12 PM IST
ಮೊದಲ ಪತ್ನಿ, ಮಗಳನ್ನು ಹೊರದಬ್ಬಿ ಎರಡನೇ ಮದುವೆಯಾದ ಜೆಡಿಎಸ್ ಶಾಸಕ!

ಸಾರಾಂಶ

ಜೆಡಿಎಸ್‌ ಶಾಸಕನೊಬ್ಬ ತನ್ನ ಮೊದಲ ಹೆಂಡತಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗಿರುವುದು ಸದ್ಯ ವಿವಾದವೆಬ್ಬಿಸಿದೆ. ಸಾಲದೆಂಬಂತೆ ಎರಡನೇ ಪತ್ನಿಯನ್ನು ಕರೆತಂದ ಆತ ಮೊದಲ ಹೆಂಡತಿ ಹಾಗೂ ಮಗಳನ್ನು ಕನಿಕರ ತೋರದೇ ಹೊರ ದಬ್ಬಿದ್ದಾರೆ. ಸದ್ಯ ಈ ವಿವಾದ ಶಾಸಕರಿಗೆ ಸಂಕಷ್ಟ ತಂದೊಟ್ಟಿದೆ.

ಮೈಸೂರು[ಜ.25]: ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್​ ಶಾಸಕ ಕೆ.ಮಹದೇವ ಅವರ ಮೇಲೆ ಎರಡು ಮದುವೆ ಆಗಿರುವ ಆರೋಪ ಕೇಳಿ ಬಂದಿದೆ. ಮೊದಲ ಹೆಂಡತಿ ಬದುಕಿರುವಾಗಲೇ ಆಕೆಯನ್ನು ಮನೆಯಿಂದ ಹೊರದಬ್ಬಿ ಮತ್ತೊಂದು ಮದುವೆಯಾಗಿರುವ ವಿವಾದ ಶಾಸಕನ ಕೊರಳು ಸುತ್ತಿಕೊಂಡಿದೆ.

 ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು  ಸಾಲಿಗ್ರಾಮ ಊರಿನ ರುಕ್ಮಿಣಿ[ಮೊದಲ ಹೆಂಡತಿ] ಎಂಬುವವರು ಮಹದೇವ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಶಾಸಕರಿಗೆ ಈಗ ಸಂಕಷ್ಟ ಎದುರಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಿಂದ ಶಾಸಕನ ಎರಡು ಮದುವೆ ರಹಸ್ಯ ಬಯಲಾಗಿದ್ದು, ಮೊದಲನೇ ಪತ್ನಿ ರುಕ್ಮಿಣಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 

1975ರಲ್ಲಿ ಮದುವೆಯಾಗಿದ್ದ ಮಹದೇವ್ ಹಾಗೂ ರುಕ್ಮಿಣಿ ದಂಪತಿಗೆ ಒಂದು ಹೆಣ್ಣುಮಗು ಜನಿಸಿತ್ತು. ಆದರೆ ಮದುವೆಯಾಗಿ 9 ವರ್ಷದ ನಂತರ ರುಕ್ಮಿಣಿ ಹಾಗೂ ಮಗಳನ್ನು ದೂರ ಮಾಡಿ ಸುಭದ್ರಮ್ಮ ಎಂಬುವರ ಜತೆ ವಿವಾಹವಾಗಿದ್ದಾರೆ ಎಂಬುದು ರುಕ್ಮಿಣಿ ಅವರ ದೂರು.

ಹಿರಿಯರ ಸಮ್ಮುಖದಲ್ಲಿ ಮದುವೆಯಾದ ತನಗೆ ಇಲ್ಲಸಲ್ಲದ ಕಷ್ಟಗಳನ್ನು ನೀಡಿದ ಆಸಾಮಿ ಚುನಾವಣೆ ವೇಳೆ ಅಫಿಡವಿಟ್​ ಸಲ್ಲಿಸುವಾಗ ಪತ್ನಿಯ ಹೆಸರಿದ್ದ ಸ್ಥಳದಲ್ಲಿ ಸುಭದ್ರಮ್ಮ ಎಂದು ಉಲ್ಲೇಖಿಸಿದ್ದಾರೆ. ಅದನ್ನು ಹೇಗೋ ನೋಡಿದ ಮೊದಲ ಪತ್ನಿ ರುಕ್ಮಿಣಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ ಇದನ್ನು ರುಜುವಾತು ಮಾಡಲು ತನ್ನ ಮಗಳ ಡಿಎನ್​ಎ ಟೆಸ್ಟ್​ ಮಾಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. 

ಸದ್ಯ ಪ್ರಕರಣ ಕೆ.ಆರ್​.ನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿದ್ದು, ಫೆಬ್ರವರಿ16ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರೊಂದಿಗೆ ಗುಟ್ಟಾಗಿ ಎರಡು ಮದುವೆ ಆಗಿರುವ ವಿಚಾರದಲ್ಲಿ ಶಾಸಕರಿಗೆ ತೊಡಕಾಗುವ ಸಾಧ್ಯತೆ ಇದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ