ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?

Published : Aug 14, 2020, 01:24 PM ISTUpdated : Aug 14, 2020, 02:27 PM IST
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?

ಸಾರಾಂಶ

ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರು ಫೋನ್‌ನಲ್ಲಿ ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆ; ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ ಎಂಬುದೇ. ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಸಿಟ್ಟುಗೊಂಡಿದ್ದಾರೆ, ಬದಲಾವಣೆ ಅನಿವಾರ್ಯ ಎಂಬೆಲ್ಲಾ ಮಾತುಗಳು ರಾಜ್ಯ ಬಿಜೆಪಿ ನಾಯಕರಿಂದಲೇ ಕೇಳಿ ಬರುತ್ತಿದ್ದವು. ಆದರೆ ಹೈಕಮಾಂಡ್‌ ನಾಯಕರನ್ನು ಮತ್ತು ಅವರ ಆಸುಪಾಸಿನವರನ್ನು ಖಾಸಗಿಯಾಗಿ ಕೇಳಿದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂಬ ಉತ್ತರ ಬರುತ್ತದೆ. 

ಬೆಂಗಳೂರು (ಆ. 14): ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರು ಫೋನ್‌ನಲ್ಲಿ ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆ; ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ ಎಂಬುದೇ. ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಸಿಟ್ಟುಗೊಂಡಿದ್ದಾರೆ, ಬದಲಾವಣೆ ಅನಿವಾರ್ಯ ಎಂಬೆಲ್ಲಾ ಮಾತುಗಳು ರಾಜ್ಯ ಬಿಜೆಪಿ ನಾಯಕರಿಂದಲೇ ಕೇಳಿ ಬರುತ್ತಿದ್ದವು.

ಆದರೆ ಹೈಕಮಾಂಡ್‌ ನಾಯಕರನ್ನು ಮತ್ತು ಅವರ ಆಸುಪಾಸಿನವರನ್ನು ಖಾಸಗಿಯಾಗಿ ಕೇಳಿದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂಬ ಉತ್ತರ ಬರುತ್ತದೆ. ದಿಲ್ಲಿ ಮೂಲಗಳು ಹೇಳುವ ಪ್ರಕಾರ, ಯಡಿಯೂರಪ್ಪನವರ ಆಡಳಿತದ ವೈಖರಿ ಬಗ್ಗೆ ದಿಲ್ಲಿ ನಾಯಕರಲ್ಲಿ ಸ್ವಲ್ಪ ಬೇಸರವಿದೆ, ಹೌದು. ಅದು ಮೊದಲಿನಿಂದಲೂ ಇದೆ. ಆದರೆ ಬದಲಾಯಿಸಲೇಬೇಕು ಎಂಬ ಅನಿವಾರ್ಯತೆಯ ಪರಿಸ್ಥಿತಿ ಉದ್ಭವವಾಗಿಲ್ಲ. ಕೋವಿಡ್‌ ಮತ್ತು ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಇಂಥ ಸಾಹಸಕ್ಕೆ ಕೈಹಾಕಲೂ ಸಾಧ್ಯವಿಲ್ಲ ಎಂದು ದಿಲ್ಲಿ ಬಿಜೆಪಿ ಮೂಲಗಳೇ ಹೇಳುತ್ತಿವೆ.

ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ

ದಿಲ್ಲೀಲಿ ಬಿಎಸ್‌ವೈಗೆ ಯಾರೂ ಇಲ್ಲ

ನಿರರ್ಗಳವಾಗಿ ಹಿಂದಿ, ಇಂಗ್ಲಿಷ್‌ ಬಾರದ ಯಡಿಯೂರಪ್ಪನವರಿಗೂ ದಿಲ್ಲಿಗೂ ಸಂಬಂಧ ಅಷ್ಟಕಷ್ಟೆ. ಕಾಂಗ್ರೆಸ್‌ನ ಸಿದ್ದರಾಮಯ್ಯಗೆ ಅಹ್ಮದ್‌ ಪಟೇಲ… ಇದ್ದಂತೆ, ರಾಷ್ಟ್ರೀಯ ಪಕ್ಷಗಳ ಮುಖ್ಯಮಂತ್ರಿಗಳಿಗೆ ದಿಲ್ಲಿಯಲ್ಲಿ ಒಬ್ಬ ಮನುಷ್ಯ ಬೇಕು. ತುಂಬಾ ಹಿಂದೆ ದಿಲ್ಲಿ ಜೊತೆ ವ್ಯವಹರಿಸಲು ಯಡಿಯೂರಪ್ಪಗೆ ಅನಂತಕುಮಾರ್‌ ಇದ್ದರು. ನಂತರ ಅನಂತಕುಮಾರ್‌ ಜೊತೆ ಜಗಳ ಆದಾಗ ಅರುಣ್‌ ಜೇಟ್ಲಿ ಯಡಿಯೂರಪ್ಪನವರ ಆಪದ್ಬಾಂಧವರಾದರು. ಮಧ್ಯೆ ಸಣ್ಣಪುಟ್ಟಕೆಲಸಗಳಿಗೆ ಧನಂಜಯ ಕುಮಾರ್‌, ಲೆಹರ್‌ ಸಿಂಗ್‌ ಇದ್ದರು. ಈಗ ಯಡಿಯೂರಪ್ಪ ಜೊತೆ ಅಷ್ಟಕಷ್ಟೆಎಂಬಂತಿರುವ ಸದಾನಂದಗೌಡ, ಪ್ರಹ್ಲಾದ್‌ ಜೋಶಿ ಮತ್ತು ಬಿ.ಎಲ್‌.ಸಂತೋಷ್‌ ಈ ಮೂವರು ದಿಲ್ಲಿಯಲ್ಲಿದ್ದಾರೆ. ಬಿಎಸ್‌ವೈಗೆ ದಿಲ್ಲಿಯಲ್ಲಿ ಒಬ್ಬರು ತುರ್ತಾಗಿ ಆಪದ್ಬಾಂಧವ ಬೇಕಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್', ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ