ಕರ್ನಾಟಕದ ಜೊತೆ ಯಾವುದೇ ರಾಜಿ ಇಲ್ಲ: ಗೋವಾ ಸಿಎಂ ಸಾವಂತ್‌

Kannadaprabha News   | Asianet News
Published : Oct 08, 2020, 07:18 AM IST
ಕರ್ನಾಟಕದ ಜೊತೆ ಯಾವುದೇ ರಾಜಿ ಇಲ್ಲ: ಗೋವಾ ಸಿಎಂ ಸಾವಂತ್‌

ಸಾರಾಂಶ

ಮಹದಾಯಿ ವಿಚಾರದಲ್ಲಿ ಕರ್ನಾಟಕದ ಜೊತೆಗೆ ಯಾವುದೇ ರಾಜಿ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ

ಪಣ​ಜಿ (ಅ.08): ‘ಕರ್ನಾ​ಟ​ಕದ ಜತೆ​ಗಿನ ಮ​ಹ​ದಾಯಿ ವಿಚಾ​ರದಲ್ಲಿ ಗೋವಾ ಯಾವುದೇ ಕಾರ​ಣಕ್ಕೂ ರಾಜಿ ಮಾಡಿ​ಕೊ​ಳ್ಳು​ವುದಿಲ್ಲ’ ಎಂದು ಗೋವಾ ಮುಖ್ಯ​ಮಂತ್ರಿ ಪ್ರಮೋದ್‌ ಸಾವಂತ್‌ ಪುನ​ರು​ಚ್ಚ​ರಿ​ಸಿ​ದ್ದಾ​ರೆ. 

ಬುಧವಾರ ಸುದ್ದಿ​ಗಾರರ ಜತೆ ಮಾತ​ನಾ​ಡಿದ ಅವರು, ‘ಈ ವಿಷಯ​ದಲ್ಲಿ ಸರ್ಕಾರ ಸರಿ​ದಾ​ರಿ​ಯ​ಲ್ಲಿದೆ ಹಾಗೂ ನಿಲುವು ಸ್ಪಷ್ಟ​ವಾ​ಗಿದೆ. ನಮ್ಮ ವಾದ​ದಲ್ಲಿ ಬಲ ಇದೆ. ಕರ್ನಾ​ಟ​ಕದ ವಿರುದ್ಧ ಮಹ​ದಾಯಿ ತಿರುವು ವಿರುದ್ಧ ಸುಪ್ರೀಂ ಕೋರ್ಟ್‌​ನಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖ​ಲಿ​ಸಿ​ದ್ದೇವೆ. ಕೋರ್ಟಲ್ಲಿ ಹೋರಾಟ ಮುಂದು​ವ​ರಿ​ಸು​ತ್ತೇ​ವೆ. 

ಮಹದಾಯಿ ವಿವಾದ: ಗೋವಾದಿಂದ ಮತ್ತೆ ಶುರುವಾಯ್ತು ಕಿರಿಕ್

ಈ ವಿಚಾ​ರ​ದಲ್ಲಿ ರಾಜಿ ಇಲ್ಲ’ ಎಂದ​ರು. ‘ಮಹ​ದಾಯಿ ಐತೀ​ರ್ಪನ್ನು ಪ್ರಶ್ನಿಸಿ ಗೋವಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಆದರೂ ಕರ್ನಾ​ಟ​ಕವು ಮಹ​ದಾಯಿ ನದಿಗೆ ತಿರುವು ಕೊಟ್ಟಿ​ದೆ. ಇದು ನ್ಯಾಯಾಂಗ ನಿಂದನೆ’ ಎಂದು ಮಂಗ​ಳ​ವಾರ ಸುಪ್ರೀಂ ಕೋರ್ಟ್‌​ನಲ್ಲಿ ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ದಾವೆ ಹೂಡಿ​ತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ