ಕುಮ್ಕಿ, ಬಾಣಿ ಕೃಷಿಕರಿಗೆ ಶೀಘ್ರ ಸಿಹಿ ಸುದ್ದಿ: ಅಶೋಕ್‌

Published : Mar 31, 2022, 05:53 AM ISTUpdated : Mar 31, 2022, 06:49 AM IST
ಕುಮ್ಕಿ, ಬಾಣಿ ಕೃಷಿಕರಿಗೆ ಶೀಘ್ರ ಸಿಹಿ ಸುದ್ದಿ: ಅಶೋಕ್‌

ಸಾರಾಂಶ

*  ಕುಮ್ಕಿ, ಬಾಣಿ ಕೃಷಿಕರಿಗೆ ಶೀಘ್ರ ಸಿಹಿ ಸುದ್ದಿ: ಅಶೋಕ್‌ *  ಈ ಭೂಮಿಗಳ ಬಗ್ಗೆ ಸಮಸ್ಯೆ ಇತ್ಯರ್ಥಕ್ಕೆ ಸಂಪುಟ ಸಮಿತಿ *  ಮಲೆನಾಡಲ್ಲಿ ಕಾಫಿ ಬೆಳೆಯುವವರಿಗೆ ಈ ಭೂಮಿ ಲೀಸ್‌ಗೆ  

ಬೆಂಗಳೂರು(ಮಾ.31):  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕುಮ್ಕಿ, ಬಾಣಿ, ಕಾಣಿ, ಬೆಟ್ಟದ ಭೂಮಿ, ಸೊಪ್ಪಿನ ಬೆಟ್ಟ, ಎಂದು ಕರೆಯಲ್ಪಡುವ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೆ ತಿಂಗಳೊಳಗೆ ಸಿಹಿ ಸುದ್ದಿ ಕೊಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌(R Ashok) ಹೇಳಿದರು.

ಕಾಂಗ್ರೆಸ್‌ನ(Congress) ಕೆ. ಹರೀ ಶ್‌ಕುಮಾರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೂರಾರು ವರ್ಷಗಳಿಂದ ಇಂತಹ ಭೂಮಿಯಲ್ಲಿ(Land) ರೈತರು(Farmers) ಕೃಷಿ(Agriculture) ಮಾಡಿಕೊಂಡು ಬರುತ್ತಿದ್ದಾರೆ, ಇಂತಹ ಭೂಮಿಯನ್ನು ರೈತರಿಗೆ ಕೊಡಲು ಆಗುತ್ತಿಲ್ಲ, ಸರ್ಕಾರಕ್ಕೂ ಆದಾಯ ಬರುತ್ತಿಲ್ಲ, ಹೀಗಾಗಿ ಈ ಸಮಸ್ಯೆಗೆ ಪರಿಹರಿಸಲು ತಮ್ಮ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲಿ ರೈತರಿಗೆ ಸಹಿ ಸುದ್ದಿ ಕೊಡಲಾಗುವುದು ಎಂದು ಹೇಳಿದರು.

Udupi Government School: ಶಾಲಾ ಮಕ್ಕಳಿಗೆ ಅಶೋಕ್‌ರಿಂದ ಜೀವನ ಪಾಠ

ವೈಯಕ್ತಿಕವಾಗಿ ರೈತರಿಗೆ ಇಂತಹ ಜಮೀನು ಕೊಡಲು ಈ ಹಿಂದೆ ಪ್ರಯತ್ನಿಸಿದಾಗ ಕಾನೂನು ಇಲಾಖೆ ಇಂತಹ ಕ್ರಮಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಆ ವಿಷಯ ಅಲ್ಲಿಗೆ ನೆನೆಗುದಿಗೆ ಬಿದ್ದಿತು. ಈಗ ತಮ್ಮ ಸರ್ಕಾರ ಇದಕ್ಕೊಂದು ಪರಿಹಾರ ಕೊಡಲು ಮುಂದಾಗಿದೆ. ಅದೇ ರೀತಿ ಮಲೆನಾಡು ಭಾಗದಲ್ಲಿ ಅನೇಕರು ಕಾಫಿ ಬೆಳೆಯುತ್ತಿದ್ದಾರೆ. ಇವರಿಗೆ ಲೀಸ್‌ ಮೇಲೆ ನಿರ್ದಿಷ್ಟ ಅವಧಿಗೆ ಕೊಡಬೇಕು ಎಂಬ ಚಿಂತನೆ ಇದೆ. ಆದರೆ ಎಷ್ಟು ಮೊತ್ತಕ್ಕೆ ಕೊಡಬೇಕು, ಯಾರಿಗೆ ಕೊಡಬೇಕು, ಸರ್ಕಾರಕ್ಕೆ ಎಷ್ಟುಆದಾಯ ಬರುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಶೀಘ್ರದಲ್ಲಿ ಮಲೆನಾಡು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿಯ ರೈತರ ಜೊತೆ ನೇರವಾಗಿ ಸಂವಾದ ಮಾಡಿ ಪರಿಹರಿಸಲಾಗುವುದು. ಜೊತೆಗೆ ಗೋಮಾಳ ಭೂಮಿಯನ್ನು ಇದರಲ್ಲಿ ಸೇರಿಸಲಾಗುವುದು ಎಂದರು.

20 ಕಾಂಗ್ರೆಸಿಗರಿಂದ ನೂರಾರು ಶಾಸಕರ ಹಕ್ಕು ದಮನ: ಅಶೋಕ್‌

ಪ್ರತಿಪಕ್ಷ ಕಾಂಗ್ರೆಸ್‌ನವರು(Congress) ತಮ್ಮ ಪಕ್ಷದ ಹಿಡನ್‌ ಅಜೆಂಡಾ ಮುಂದಿಟ್ಟುಕೊಂಡು ಅಧಿವೇಶನ(Assembly Session) ಹಾಳು ಮಾಡುತ್ತಿರುವುದು ಜನರನ್ನೂ ರೊಚ್ಚಿಗೇಳಿಸುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಕಾಂಗ್ರೆಸ್‌ನ 20 ಶಾಸಕರ ಧರಣಿಯಿಂದ ಉಳಿದ ನೂರಾರು ಶಾಸಕರ ಹಕ್ಕುಗಳು ದಮನವಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದರು.

Karnataka Politics: ಸಿದ್ದುಗೆ ಟೀಕಿಸುವ ಚಟ, ಅಹಂಕಾರ: ಅಶೋಕ್‌ ಕಿಡಿ

ಫೆ.22 ರಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ(Karnataka) ಜನರ ಸಮಸ್ಯೆಗಿಂತ ತಮ್ಮ ಪಕ್ಷದ ಧರಣಿ ವಿಚಾರವೇ ನಮಗೆ ಹೆಚ್ಚು ಸಿದ್ದರಾಮಯ್ಯ(Siddaramaiah) ಅವರು ಹೇಳಿರುವುದು ಕಾಂಗ್ರೆಸ್‌ ಪಕ್ಷದ ಮನಸ್ಥಿತಿ ತೋರಿಸುತ್ತದೆ. ಸದನ ನಡೆಸುವುದು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು. ಆದರೆ, ಕಾಂಗ್ರೆಸ್‌ನವರಿಗೆ ಇದು ಬೇಕಿಲ್ಲ. ತಮ್ಮ ಹಿಡನ್‌ ಅಜೆಂಡಾ ಮುಂದಿಟ್ಟುಕೊಂಡು ಸದನ ವ್ಯರ್ಥ ಮಾಡುತ್ತಿದ್ದಾರೆ. ಅಸಲಿಗೆ ಕಾಂಗ್ರೆಸ್‌ನ ಎಲ್ಲ ಶಾಸಕರೂ ಧರಣಿಯಲ್ಲಿ ಭಾಗವಹಿಸುತ್ತಿಲ್ಲ. ಕೇವಲ 20ರಿಂದ 30 ಜನ ಮಾತ್ರ ಇದ್ದಾರೆ. ಉಳಿದವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದರಿಂದ ಉಳಿದ 150ಕ್ಕೂ ಹೆಚ್ಚು ಶಾಸಕರ ಹಕ್ಕು ದಮನವಾಗುತ್ತಿದೆ’ ಎಂದು ಆರೋಪಿಸಿದ್ದರು. 

ರಾಜ್ಯದಲ್ಲಿ Hijab ಪರ ಮಾತು ಆಡುವವರು 100 ಜನರೂ ಇಲ್ಲ

ಉಡುಪಿ: ಹಿಜಾಬ್‌ (Hijab) ವಿಚಾರದಲ್ಲಿ ಕಾಂಗ್ರೆಸ್‌ (Congress) ಗೊಂದಲದಲ್ಲಿದೆ. ಯಾರನ್ನು ಬೆಂಬಲಿಸಬೇಕು ಎನ್ನುವುದೇ ಅದಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಹಿಜಾಬ್‌ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬಾರದಂತೆ ನೋಡಿಕೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ