
ಬೆಂಗಳೂರು (ಸೆ.29): ಆರ್ಥಿಕ ಸಂಕಷ್ಟ ಏನೇ ಬರಲಿ ನಿಭಾಯಿಸ್ತೀನಿ ಎಂದು ಸಿದ್ದರಾಮಯ್ಯನವರು ಕನಸಿನ ಗ್ಯಾರೆಂಟಿ ಯೋಜನೆ ಜಾರಿಗೆ ತಂದ್ರು. ಇಂದು ಗ್ಯಾರಂಟಿ ಯೋಜನೆ ಸಂಬಂಧಿತ ಪುಸ್ತಕವನ್ನ ಸಿಎಂರವರೇ ಬಿಡುಗಡೆ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ನುಡಿದರು.
ಇಂದುಇಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ "ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ" ಕೃತಿ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಎಲ್ಲರೂ ಸಿದ್ದರಾಮಯ್ಯ ಮಲಗಿದ್ದಾರೆ ಅಂದುಕೊಳ್ತೀರಿ. ಆದರೆ ಅವರು ಎಲ್ಲವನ್ನೂ ಕೇಳಿಸಿಕೊಳ್ತಿರ್ತಾರೆ. ಯಾರಾರು ಏನೇನು ಮಾತಾಡಿದ್ರು ಎಲ್ಲವನ್ನೂ ಕೇಳಿಸಿಕೊಳ್ತಾರೆ. ಬೇಕಿದ್ರೆ ಹೇಳುತ್ತಾರೆ. ಸಿದ್ದರಾಮಯ್ಯ ಏನು ಅಂತಾ ನನಗೆ ಗೊತ್ತು. ಸಿದ್ದರಾಮಯ್ಯ ಅಪ್ಪಟ ಚಿನ್ನ, ಪ್ರಾಮಾಣಿಕ ವ್ಯಕ್ತಿ. ಸ್ವಾರ್ಥಕ್ಕೆ ಉತ್ತೇಜನ ಕೊಡುವವರಲ್ಲ. ನೇರ ನಿಷ್ಠುರವಾಗಿ ಮಾತನಾಡುವವರು. ಜನಪರ ಕಾಳಜಿ ಇರುವ ಸಿದ್ದರಾಮಯ್ಯ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕೆಲವರಿಗೆ ಸಿದ್ದರಾಮಯ್ಯರನ್ನು ಕಂಡರೆ ಹೊಟ್ಟೆಉರಿ. ಕೆಲವರು ಯಾವಾಗ ಸಿಎಂ ಕುರ್ಚಿ ಖಾಲಿಯಾಗುತ್ತೋ ಅಂತಾ ಕಾಯ್ತಿದ್ದಾರೆ. ಆನೆ ನಡೆಯುವಾಗ ನರಿಗಳು ನೋಡುತ್ತಿರುತ್ತವೆ ಏನೋ ಬಿಳಬಹುದು ಅಂತ ಕಾಯ್ತಿರ್ತಾರೆ ಎನ್ನುವ ಮೂಲಕ ಈ ರೀತಿಯಾಗಿದೆ ಈಗಿನ ಕಥೆ ಎಂದು ಪರೋಕ್ಷವಾಗಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟ ಸ್ವಪಕ್ಷ ಹಾಗೂ ವಿರೋಧ ಪಕ್ಷದವರಿಗೆ ಸಚಿವ ಮಹದೇವಪ್ಪ ಟಾಂಗ್ ನೀಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಗುತ್ತಾ?
ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ. ಗ್ಯಾರಂಟಿ ಯೋಜನೆ ಫಲಾನುಭವಿಗಳು ಇದರ ವಿರುದ್ಧ ಹೋರಾಟಕ್ಕೆ ಇಳಿಯಬೇಕು. ಯುವ ಚಳವಳಿ ಸಿದ್ದರಾಮಯ್ಯ ಪರ ಶುರುವಾಗಬೇಕಿದೆ. ಸಿದ್ದರಾಮಯ್ಯರನ್ನು ಅನುಮಾನಪಡಲು ಸಾಧ್ಯನಾ? ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ಸಿದ್ದರಾಮಯ್ಯ ವಿರುದ್ದ ಈ ಸರಕಾರದ ವಿರುದ್ದ ಕೆಲಸ ಮಾಡುತ್ತಿವೆ. ಸಿದ್ದರಾಮಯ್ಯ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಸಿದ್ದರಾಮಯ್ಯಗೆ ಖಾಸಗಿ ಜೀವನ ಇಲ್ಲ. ಮನೆ, ಮಠ, ಹೆಂಡತಿ, ಮಕ್ಕಳ ಬಗ್ಗೆ ಯೋಚನೆ ಮಾಡಲ್ಲ. ಇಂಥಹದೆ ಊಟ ಬೇಕು ಅಂತಾ ಕೂತವರು ಅಲ್ಲ. ಇಂತಹ ನಾಯಕರನ್ನು ಉಳಿಸಿ ಕೊಳ್ಳಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ