ವಾಟ್ಸಪ್​ನಲ್ಲಿ ತಲಾಖ್​, ಬೆಂಗ್ಳೂರು ಏರ್​ಪೋರ್ಟ್​ನಲ್ಲಿ ಪತ್ನಿ ಬಿಟ್ಟು ಪತಿ ಪರಾರಿ..!

Published : Dec 08, 2018, 04:02 PM IST
ವಾಟ್ಸಪ್​ನಲ್ಲಿ ತಲಾಖ್​, ಬೆಂಗ್ಳೂರು ಏರ್​ಪೋರ್ಟ್​ನಲ್ಲಿ ಪತ್ನಿ ಬಿಟ್ಟು ಪತಿ ಪರಾರಿ..!

ಸಾರಾಂಶ

ಪತಿರಾಯನೊಬ್ಬ ಹೆಂಡತಿಗೆ ವಾಟ್ಸ​ಪ್​ನಲ್ಲಿ ತಲಾಖ್​ ನೀಡಿ ಆಕೆಯನ್ನ ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ..!

ಬೆಂಗಳೂರು, (ಡಿ.8): ವೃತ್ತಿಯಲ್ಲಿ ವೈದ್ಯನಾಗಿರೋ ಪತಿರಾಯನೊಬ್ಬ ಹೆಂಡತಿಗೆ ವಾಟ್ಸ​ಪ್​ನಲ್ಲಿ ತಲಾಖ್​ ನೀಡಿ ಪರಾರಿಯಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಾ. ಜಾವೀದ್ ಖಾನ್, 2003ರಲ್ಲಿ ರೇಷ್ಮಾ ಅಜೀಜ್​ ಎಂಬುವವರನ್ನು ವಿವಾಹವಾಗಿದ್ದು, ಬಳಿಕ ಅವರು ಇಂಗ್ಲೆಂಡ್​ನಲ್ಲಿ ನೆಲೆಸಿದ್ದರು. ನಂತರ ಇಡೀ ಕುಟುಂಬ ಅಮೆರಿಕಾಗೆ ಶಿಫ್ಟ್​ ಆಗಿದ್ದು, ಈ ದಂಪತಿಗೆ 13 ವರ್ಷದ ಹೆಣ್ಣು ಹಾಗೂ 10 ವರ್ಷದ ಗಂಡು ಮಗು ಇದೆ.

ಗಂಡ ಹೆಂಡ್ತಿ ಮಕ್ಕಳು ಚೆನ್ನಾಗಿಯೇ ಇದ್ದರು. ಆದ್ರೆ ಇತ್ತೀಚೆಗೆ ಅದೇನಾಯ್ತು ಏನೋ ಇವರ ಕುಟುಂಬದಲ್ಲಿ ಬಿರುಕು ಉಂಟಾಗಿತ್ತು.

ಈ ವೇಳೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಿರಿಯರು ಸಲಹೆಗೆ ನಿರ್ಧರಿಸಿ ಇಬ್ಬರೂ ಮಕ್ಕಳನ್ನು ಅಮೇರಿಕಾದಲ್ಲೇ ಬಿಟ್ಟು ದಂಪತಿ ಬೆಂಗಳೂರಿಗೆ ಬಂದಿದ್ದಾರೆ.

ನ.30ರಂದು ಎಮಿರೇಟ್ಸ್ ವಿಮಾನದ ಮೂಲಕ ದೇವನಹಳ್ಳಿ ಏರ್​ಪೋರ್ಟ್​ಗೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆಯೇ, ಡಾ. ಜಾವೀದ್ ಪತ್ನಿಯ ಪಾಸ್ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದಾನೆ.

ಏರ್​ಪೋರ್ಟ್​ಗೆ ಆಗಮಿಸಿದ ಬಳಿಕ ಜಾವೀದ್​ ಬೌನ್ಸರ್ಗಳ ಭದ್ರತೆಯಲ್ಲಿ ರೇಷ್ಮಾ ಅಜೀಜ್​ನನ್ನು ಬಿಟ್ಟು ಅಮೇರಿಕಾಗೆ ಹಿಂದಿರುಗಿದ್ದು, ಅಮೆರಿಕಾ ತಲುಪುತ್ತಿದ್ದಂತೆಯೇ ಅಜೀಜ್​ಗೆ ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್​ ಮೂಲಕ ತಲಾಖ್ ನೀಡುತ್ತಿರುವುದಾಗಿ ಸಂದೇಶ ಕಳುಹಿಸಿದ್ದಾನೆ.

ಈ ಸಂದೇಶ ಓದುತ್ತಲೇ ಅಜೀಜ್​ ಕಂಗಾಲಾಗಿ ಆಗಿದ್ದು, ನ್ಯಾಯಕ್ಕಾಗಿ ನಗರ ಉತ್ತರ ವಿಭಾಗ ಡಿಸಿಪಿ ಚೇತನ್​ ಸಿಂಗ್​ ರಾಥೋಡ್​, ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮೊರೆ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ