ಉತ್ತರ ಪತ್ರಿಕೆ ಮಾಹಿತಿ ನೀಡದ ಕೆಪಿಎಸ್‌ಸ್ಸಿಗೆ 1 ಲಕ್ಷ ರು. ದಂಡ

Kannadaprabha News   | Asianet News
Published : Oct 07, 2020, 07:55 AM ISTUpdated : Oct 07, 2020, 08:00 AM IST
ಉತ್ತರ ಪತ್ರಿಕೆ ಮಾಹಿತಿ ನೀಡದ ಕೆಪಿಎಸ್‌ಸ್ಸಿಗೆ 1 ಲಕ್ಷ ರು. ದಂಡ

ಸಾರಾಂಶ

ಮುಖ್ಯ ಪರೀಕ್ಷೆಯ ಉತ್ತರ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಅಭ್ಯರ್ಥಿಗಳಿಗೆ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗ| ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಕೆ.ಪಿ. ಮಂಜುನಾಥ್‌, ಕೆಪಿಎಸ್‌ಸಿ ಮಾಹಿತಿ ಅ​ಧಿಕಾರಿ ಶಶಿಕಲಾಗೆ ವಿವರಣೆ ಕೇಳಿ ನೋಟಿಸ್‌ ನೀಡಿದ್ದರು| ವಿಚಾರಣೆಗೂ ಹಾಜರಾಗದೆ ನೋಟಿಸ್‌ಗೆ ವಿವರಣೆಯನ್ನು ಸಲ್ಲಿಸದ ಕಾರಣ ಶಶಿಕಲಾಗೆ 25 ಸಾವಿರ ದಂಡ| 

ಬೆಂಗಳೂರು(ಅ.07): 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯ ಉತ್ತರ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಅಭ್ಯರ್ಥಿಗಳಿಗೆ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಕರ್ನಾಟಕ ಮಾಹಿತಿ ಆಯೋಗ (ಕೆಐಸಿ) ಒಂದು ಲಕ್ಷ ರು.ಗಳ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ದಂಡದ ಮೊತ್ತವನ್ನು ಅರ್ಜಿದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ಸೂಚಿಸಿದೆ.

ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ ಬಿ.ಕೆ. ಸುಧನ್ವ ಬಂಡೋಲ್ಕರ್‌ ಎಂಬುವರು 2020ರ ಜ.14ರಂದು ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪತ್ರಿಕೆ ನೀಡಲು ಕೆಪಿಎಸ್‌ಸಿ ನಿರಾಕರಿಸಿದ ಕಾರಣ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಕೆಎಎಸ್‌ ಅಧಿಕಾರಿಗಳ 2 ಆಯ್ಕೆ ಪಟ್ಟಿಅಸಿಂಧು

ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಕೆ.ಪಿ. ಮಂಜುನಾಥ್‌, ಕೆಪಿಎಸ್‌ಸಿ ಮಾಹಿತಿ ಅ​ಧಿಕಾರಿ ಶಶಿಕಲಾಗೆ ವಿವರಣೆ ಕೇಳಿ ನೋಟಿಸ್‌ ನೀಡಿದ್ದರು. ವಿಚಾರಣೆಗೂ ಹಾಜರಾಗದೆ ನೋಟಿಸ್‌ಗೆ ವಿವರಣೆಯನ್ನು ಸಲ್ಲಿಸದ ಕಾರಣ ಶಶಿಕಲಾಗೆ 25 ಸಾವಿರ ದಂಡ ವಿ​ಧಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!