ಚಾಲಕರು ತೂಕಡಿಸಿದರೆ ಬರುತ್ತೆ ಅಲಾರ್ಮ್ ಸಂದೇಶ!

Kannadaprabha News   | Asianet News
Published : Jun 10, 2021, 10:22 AM IST
ಚಾಲಕರು ತೂಕಡಿಸಿದರೆ ಬರುತ್ತೆ ಅಲಾರ್ಮ್ ಸಂದೇಶ!

ಸಾರಾಂಶ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹೊಸ ವ್ಯವಸ್ಥೆ ನಿಗಮದ ಬಸ್‌ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ‘ಕೊಲಿಜಿಯನ್‌ ವಾರ್ನಿಂಗ್‌ ಸಿಸ್ಟಂ’(ಸಿಡಬ್ಲುಎಸ್‌) ಮತ್ತು ‘ಡ್ರೈವರ್‌ ಡ್ರೋಜಿನೆಸ್‌ ಡಿಟೆಕ್ಷನ್‌ ಸಿಸ್ಟಮ್‌’

 ಬೆಂಗಳೂರು (ಜೂ.10):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಿಗಮದ ಬಸ್‌ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ ನಿರ್ಧರಿಸಿದೆ.

‘ಕೊಲಿಜಿಯನ್‌ ವಾರ್ನಿಂಗ್‌ ಸಿಸ್ಟಂ’(ಸಿಡಬ್ಲುಎಸ್‌) ಮತ್ತು ‘ಡ್ರೈವರ್‌ ಡ್ರೋಜಿನೆಸ್‌ ಡಿಟೆಕ್ಷನ್‌ ಸಿಸ್ಟಮ್‌’(ಡಿಡಿಎಸ್‌) ಎಂಬ ತಂತ್ರಜ್ಞಾನ ಇದಾಗಿದೆ. ಚಾಲಕ ಬಸ್‌ ಚಾಲನೆ ವೇಳೆ ನಿದ್ರೆಗೆ ಜಾರಿದರೆ, ಆತನನ್ನು ಅಲಾರ್ಮ್ ಮೂಲಕ ಎಚ್ಚರಿಸುವ ಹಾಗೂ ಮುಂಬದಿ ಚಲಿಸುವ ವಾಹನಗಳ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೆ ವಾಹನದ ಪ್ರತಿ ಚಲನೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದೆ. ಈ ತಂತ್ರಜ್ಞಾನವು ಸುರಕ್ಷಿತ ಚಾಲನೆ ಹಾಗೂ ಅಪಘಾತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ. ಹೀಗಾಗಿ ಮೊದಲ ಹಂತದಲ್ಲಿ 1,044 ಬಸ್ಸುಗಳಿಗೆ ಈ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ.

ಕೇರಳಕ್ಕೆ ಪಾಲಾಗಿಲ್ಲ, KSRTC ಬಳಸಲು ಕರ್ನಾಟಕಕ್ಕೆ ನಿಷೇಧವಿಲ್ಲ: ಡಿಸಿಎಂ ಸವದಿ! .

ತಂತ್ರಜ್ಞಾನ ಹೀಗೆ ಕೆಲಸ ಮಾಡುತ್ತೆ: ಒಂದು ಕ್ಯಾಮರಾ ಚಾಲಕನಿಗೆ ಅಭಿಮುಖವಾಗಿ ಇರಲಿದೆ. ಮತ್ತೊಂದು ಕ್ಯಾಮರಾ ಬಸ್ಸಿನ ಮುಂಭಾಗಕ್ಕೆ ಅಳವಡಿಸಲಾಗುತ್ತದೆ. ಬಸ್ಸಿನ ಮುಂಭಾಗದ ಕ್ಯಾಮರಾ ರಾತ್ರಿ ವೇಳೆ ಸುಮಾರು ಇನ್ನೂರು ಮೀಟರ್‌ ದೂರದಲ್ಲಿರುವ ವಾಹನದ ಬಗ್ಗೆ ಚಾಲಕನಿಗೆ ಮಾಹಿತಿ ರವಾನಿಸಲಿದೆ. ಅಂತೆಯೇ ಚಾಲಕನಿಗೆ ಅಭಿಮುಖವಾಗಿರುವ ಕ್ಯಾಮರಾವು ಚಾಲಕನಿಗೆ ನಿದ್ರೆ ಮಂಪರು ಆವರಿಸಿದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣ ಅಲಾರಾಮ್‌ ಮಾಡಿ ಎಚ್ಚರಿಸಲಿದೆ.

ಕೈತಪ್ಪಿದ KSRTC : ಬಾಬಾಸಾಹೇಬ್ ಸಾರಿಗೆ ಎಂದು ಹೆಸರಿಡಲು ಸುಮಲತಾ ಮನವಿ

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ 1,044 ಬಸ್ಸಿಗಳಿಗೆ ಈ ತಂತ್ರಜ್ಞಾನ ಅಳವಡಿಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಬಸ್ಸುಗಳಿಗೆ ವಿಸ್ತರಿಸಲಾಗುವುದು

- ಲಕ್ಷ್ಮಣ ಸವದಿ, ಸಾರಿಗೆ ಸಚಿವ

ಚಾಲನೆಯ ಕುರಿತಾದ ದತ್ತಾಂಶ ಸಂಗ್ರಹಕ್ಕೆ ಅವಕಾಶವಿದ್ದು, ಚಾಲಕನ ಮೌಲ್ಯಮಾಪನಕ್ಕೂ ಇದು ಉಪಯೋಗವಾಗಲಿದೆ. ಚಾಲನೆಯ ದತ್ತಾಂಶ ವಿಶ್ಲೇಷಿಸಿ ಚಾಲಕರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌