ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಭಾನುವಾರ ರಾಜ್ಯದಲ್ಲಿ ಮಹಾಮಾರಿ ಪರಿಸ್ಥಿತಿ ಇಂತಿದೆ

Published : Jun 21, 2020, 07:51 PM ISTUpdated : Jun 21, 2020, 07:57 PM IST
ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಭಾನುವಾರ ರಾಜ್ಯದಲ್ಲಿ ಮಹಾಮಾರಿ ಪರಿಸ್ಥಿತಿ ಇಂತಿದೆ

ಸಾರಾಂಶ

ಇಂದು, 21.06.2020, ಭಾನುವಾರ ಸಂಜೆ 5.00 ಗಂಟೆಯ ಮಾಹಿತಿಯಂತೆ ನಮ್ಮ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಈ ಕೆಳಗಿನಂತಿದೆ.‌\

ಬೆಂಗಳೂರು, (ಜೂನ್.21): ಕಂಕಣ ಸೂರ್ಯಗ್ರಹಣವಾದ ಇಂದು (ಭಾನುವಾರ) ಬೆಂಗಳೂರಿನಲ್ಲಿ ದಾಖಲೆಯ 196 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ 453 ಮಂದಿ ಕೊರೋನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ. 

ಡೇಂಜರ್ ಬೆಂಗಳೂರು; ಮೂರು ಹೊಸ ಕೋವಿಡ್ ಕೇರ್ ಸೆಂಟರ್, ಎಲ್ಲೆಲ್ಲಿ?

ಭಾನುವಾರ ರಾಜ್ಯದಲ್ಲಿ 5 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಇನ್ನು ಪತ್ತೆಯಾಗಿರುವ 9,150 ಪ್ರಕರಣಗಳ ಪೈಕಿ 5,618 ಮಂದಿ ಗುಣಮುಖರಾಗಿದ್ದರೆ, 3,391 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾನುವಾರದ ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು ನಗರ ಜಿಲ್ಲೆಯಲ್ಲಿ ಶನಿವಾರ 94 ಮಂದಿಗೆ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಆದ್ರೆ, ಭಾನುವಾರ 196 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರನ್ನ ಬೆಚ್ಚಿಬೀಳಿಸಿದೆ.

ಬೆಂಗಳೂರು ನಗರ 196, ಬೀದರ್ 13, ಬಳ್ಳಾರಿ 40, ರಾಮನಗರ 2, ಕಲಬುರಗಿ 39, ಮೈಸೂರು 18, ಹಾಸನ 5, ರಾಯಚೂರು 2, ಹಾವೇರಿ 3, ವಿಜಯಪುರ 39, ಚಿಕ್ಕಮಗಳೂರು 1, ಧಾರವಾಡ 15, ಚಿಕ್ಕಬಳ್ಳಾಪುರ  3, ದಕ್ಷಿಣ ಕನ್ನಡ 7,  ಮಂಡ್ಯ 5, ಉತ್ತರ ಕನ್ನಡ 8, ಕೋಲಾರ 8, ದಾವಣಗೆರೆ 8, ಬಾಗಲಕೋಟೆ 14, ಶಿವಮೊಗ್ಗ 4, ಗದಗ 18, ತುಮಕೂರು 4, ಯಾದಗಿರಿ 3 ಪ್ರಕರಣಗಳು ದೃಢಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!