ಬೆಂಗಳೂರು: ರಾಜ್ಯಗಳಲ್ಲಿ ಮಾಕ್ ಡ್ರಿಲ್ ನಡೆಸುವ ಮುನ್ನವೇ ಭಾರತ ನಡುರಾತ್ರಿಯೇ ಉಗ್ರರ ಸಂಹಾರ ನಡೆಸಲಾಗಿದೆ. ಬುಧವಾರ ಕೇಂದ್ರ ಸರ್ಕಾರ ದೇಶದ 244 ಜಿಲ್ಲೆಗಳಲ್ಲಿ ಅಣಕು ಯುದ್ಧ ಕವಾಯತಿಗೆ ಆದೇಶ ಹೊರಡಿಸಿದ್ದರೂ, ಮಂಗಳವಾರವೇ ಕೆಲವು ಕಡೆ ಅಣಕು ಕವಾಯತುಗಳು ನಡೆದಿವೆ. ಪೊಲೀಸರು, ಸ್ಥಳೀಯ ಅಧಿಕಾರಿಗಳು ಮತ್ತು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಸಹಯೋಗದೊಂದಿಗೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಕವಾಯತುಗಳು ಆರಂಭವಾಗಿವೆ. ಗುರುವಾರ ನಡೆಯಲಿರುವ ನಾಗರಿಕ ರಕ್ಷಣಾ ಅಣಕು ಕವಾಯತಿನಲ್ಲಿ ಭಾಗವಹಿಸಲು ದೇಶಾದ್ಯಂತ ಜನರಿಗೆ ಬಿಜೆಪಿ ಮನವಿ ಮಾಡಿದೆ. ಈ ಕುರಿತು ಎಕ್ಸ್ನಲ್ಲಿ ಬಿಜೆಪಿ ಪೋಸ್ಟ್ ಮಾಡಿದ್ದು, ‘ಎಲ್ಲಾ ನಾಗರಿಕರು, ವಿದ್ಯಾರ್ಥಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಮುಂದೆ ಬಂದು ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಿ. ನಿಮ್ಮ ಭಾಗವಹಿಸುವಿಕೆಯು ಪರಿವರ್ತನೆಯನ್ನು ತರುತ್ತದೆ’ ಎಂದು ಮನವಿ ಮಾಡಿದೆ. ಪಕ್ಷದ ಸಂಸದರು ಮತ್ತು ಶಾಸಕರು ರಾಷ್ಟ್ರವ್ಯಾಪಿ ಈ ಕಾರ್ಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

09:33 PM (IST) May 07
ಹೆಂಡತಿ ಏನಾದರೂ ಬೇಕು ಎಂದು ಕೇಳಿದಾಗ ಈ ಸಲ ದುಡ್ಡಿಲ್ಲ, ಮುಂದಿನ ತಿಂಗಳು ನೋಡೋಣ ಅಂತೀರಾ? ಹಾಗಿದ್ರೆ ಈ ವಿಡಿಯೋ ಅನ್ನು ಒಮ್ಮೆ ನೋಡಲೇಬೇಕು!
ಪೂರ್ತಿ ಓದಿ06:44 PM (IST) May 07
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಂತರ, ಬೆಂಗಳೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ನಾಗರಿಕರ ತುರ್ತು ಸನ್ನಾಹವನ್ನು ಪರಿಶೀಲಿಸಲು ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದಿಂದ ಮಾಕ್ ಡ್ರಿಲ್ ನಡೆಸಲಾಯಿತು. ಈ ಡ್ರಿಲ್ನಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಸಿಲುಕಿರುವವರ ರಕ್ಷಣೆ, ಬೆಂಕಿ ಅವಘಡ, ಮತ್ತು ಸಮುದ್ರ ತೀರದಲ್ಲಿ ಸಿಲುಕುವವರ ರಕ್ಷಣೆಯಂತಹ ವಿವಿಧ ಸನ್ನಿವೇಶಗಳನ್ನು ಸೃಷ್ಟಿಸಲಾಯಿತು.
ಪೂರ್ತಿ ಓದಿ11:42 AM (IST) May 07
ಗರ್ಭಿಣಿ ಎಂದು ಬೇರೆಯವರಿಗೆ ತಿಳಿಯುವುದು ಮಹಿಳೆಗೆ ಹೊಟ್ಟೆ ಬಂದಾಗಲೇ. ಆದರೆ ಹೊಟ್ಟೆ ಬರದೆಯೂ ಗರ್ಭಿಣಿಗೆ ಮಗುವಾಗಲು ಸಾಧ್ಯನಾ? ಇದೇನಿದು ಅಂತೀರಾ?
ಪೂರ್ತಿ ಓದಿ09:22 AM (IST) May 07
ಪಹಲ್ಗಾಮ್ ದಾಳಿಯ 15 ದಿನಗಳ ನಂತರ, ಭಾರತವು ಪಾಕಿಸ್ತಾನ ಮತ್ತು ಪಿಒಕೆನಲ್ಲಿ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಇದಕ್ಕೂ ಮೊದಲು 2019 ರಲ್ಲಿ ಬಾಲಾಕೋಟ್ನಲ್ಲಿ ನಡೆದ ವೈಮಾನಿಕ ದಾಳಿಯ ಮೂಲಕ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿತ್ತು. ಎರಡೂ ಕಾರ್ಯಾಚರಣೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಿರಿ
ಪೂರ್ತಿ ಓದಿ
07:49 AM (IST) May 07
ಪಾಕಿಸ್ತಾನದ ಯುವಕನೊಬ್ಬ ಭಾರತದ ಕ್ಷಿಪಣಿ ದಾಳಿಯನ್ನು ವಿಡಿಯೋದಲ್ಲಿ ದೃಢಪಡಿಸಿದ್ದಾನೆ. ಬಹವಾಲ್ಪುರದ ಉಗ್ರರ ಶಿಬಿರದ ಮೇಲೆ ನಡೆದ ದಾಳಿಯ ಬಗ್ಗೆ ಪ್ರಶ್ನಿಸಿದ್ದಾನೆ. ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ವರದಿಯಾಗಿದೆ.
ಪೂರ್ತಿ ಓದಿ