ಬೆಂಗಳೂರು: ಬಿರು ಬೇಸಿಗೆಯ ಸುಡು ಬಿಸಿಲಿನಿಂದ ತತ್ತರಿಸಿದ್ದ ರಾಜಧಾನಿಯ ಜನತೆಗೆ ಬುಧವಾರ ಸಂಜೆ ಗುಡುಗು, ಸಿಡಿಲು, ಆಲಿಕಲ್ಲು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ತಂಪೆರೆಯಿತು. ಕೆಲ ದಿನಗಳಿಂದ ಬೇಸಿಗೆಯ ಬಿಸಿಲಿನಿಂದ ಜನತೆ ಹೈರಾಣಾಗಿದ್ದು, ಮಧ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದು ತಂಪಾದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ 5.05ರಿಂದ 6.35ರವರೆಗೆ ಸುರಿದ ಭೀಕರ ಮಳೆಗೆ ರಸ್ತೆಯಲ್ಲೆಲ್ಲಾ ನೀರು ತುಂಬಿ ವಾಹನ ಸವಾರರು, ಕಾರು ಹಾಗೂ ಆಟೋಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಲ್ಲಬೇಕಾಯಿತು.

07:50 PM (IST) Apr 30
07:21 PM (IST) Apr 30
06:53 PM (IST) Apr 30
05:27 PM (IST) Apr 30
04:36 PM (IST) Apr 30
03:17 PM (IST) Apr 30
ಇನ್ಸ್ಟಾಮಾರ್ಟ್ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ ಐಸ್ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ ಹೆಚ್ಚು ಐಸ್ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.
02:35 PM (IST) Apr 30
ದಶಕಗಳಿಂದ ಬೆಂಗಳೂರಿನಲ್ಲಿದ್ದ ಬೆಂಗಳೂರು ಟರ್ಫ್ ಕ್ಲಬ್ (BTC) ಮುಂದಿನ 2-3 ವರ್ಷಗಳಲ್ಲಿ ಕುಣಿಗಲ್ಗೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ಇಂಗ್ಲೆಂಡ್ನ ವಿಶ್ವಪ್ರಸಿದ್ಧ 'ಜಾಕಿ ಕ್ಲಬ್' ಈ ಹೊಸ ಸೌಲಭ್ಯವನ್ನು ಉಚಿತವಾಗಿ ವಿನ್ಯಾಸಗೊಳಿಸಲು ಒಪ್ಪಿಕೊಂಡಿದೆ,
01:41 PM (IST) Apr 30
12:54 PM (IST) Apr 30
12:07 PM (IST) Apr 30
ಧಾರವಾಡದಲ್ಲಿ ಗಾಂಜಾ ಸೇವನೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ಬಿಎಸ್ಸಿ ವಿದ್ಯಾರ್ಥಿ, ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯಿಂದ ಮನನೊಂದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ತನಿಖೆ ಮುಂದುವರಿಸಲಾಗಿದೆ.
11:55 AM (IST) Apr 30
11:38 AM (IST) Apr 30
11:31 AM (IST) Apr 30
11:19 AM (IST) Apr 30
11:08 AM (IST) Apr 30
10:59 AM (IST) Apr 30
ವರುಣನ ಆರ್ಭಟಕ್ಕೆ ಅಕ್ಷರ ಲೋಕವೇ ತತ್ತರವಾಗಿದೆ. ಚರ್ಚ್ ಸ್ಟ್ರೀಟ್ನ ಐತಿಹಾಸಿಕ ‘ಬುಕ್ ವರ್ಮ್’ ಮಳಿಗೆಗೆ ಮಳೆ ನೀರು ನುಗ್ಗಿ ಸಾವಿರಾರು ಪುಸ್ತಕಗಳು ನೀರು ಪಾಲಾಗಿವೆ. ಮಾಲೀಕನ ಅಸಹಾಯಕ ಮಾತುಗಳು ಕಣ್ಣಿರು ತರಿಸುತ್ತದೆ.
10:13 AM (IST) Apr 30
ಬಿಗ್ ಬಾಸ್ ಖ್ಯಾತಿಯ ರಜತ್, ಸೋಶಿಯಲ್ ಮೀಡಿಯಾ ರೀಲ್ಸ್ಗಾಗಿ ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಪೆಟ್ರೋಲ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯಕ್ಕಾಗಿ ಕಗ್ಗಲೀಪುರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಜನರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲು.
09:40 AM (IST) Apr 30
09:23 AM (IST) Apr 30
09:05 AM (IST) Apr 30
09:03 AM (IST) Apr 30
Kollegal wedding dowry fight ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಪ್ರೇಮ ವಿವಾಹ, ವರದಕ್ಷಿಣೆ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ನಿಂತುಹೋಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆಯಿಂದಾಗಿ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದು, ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
08:46 AM (IST) Apr 30
08:36 AM (IST) Apr 30
ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿದ್ದ ಎಸ್. ರವಿ ಅವರನ್ನು ದಿಢೀರ್ ವರ್ಗಾವಣೆ ಮಾಡಿ, ನೂತನ ಸಾರಥಿಯಾಗಿ ಲಾಭೂ ರಾಮ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ, ಸಚಿವ ಕೆ.ಎನ್. ರಾಜಣ್ಣ ಅವರ ಅಳಿಯ ಎಸ್. ಗಿರೀಶ್ ಅವರಿಗೆ ಪ್ರಭಾವಿ ಕೇಂದ್ರ ವಲಯ ಡಿಐಜಿ ಹುದ್ದೆ ನೀಡಲಾಗಿದೆ.
08:26 AM (IST) Apr 30