Mar 28, 2025, 11:13 PM IST
Karnataka News Live 28th March ಎಲ್ಲವೂ ದುಬಾರಿ : CSK vs RCB: ತಮಿಳರ ಕೋಟೆಯಲ್ಲಿ ಕನ್ನಡಿಗರ ಕಮಾಲ್, 17 ವರ್ಷಗಳ ಬಳಿಕ ಚೆನ್ನೈ ತಂಡವನ್ನ ಚೆಪಾಕ್ನಲ್ಲಿ ಮಣಿಸಿದ ಆರ್ಸಿಬಿ!


ಬೆಂಗಳೂರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಐಆರ್ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆ ನೀಡಿದೆ. ಕೆಂಆರ್ಸಿ ಆದೇಶದ ಪರಿಣಾಮ ಏ.1ರಿಂದ 2025-26 ಅನ್ವಯವಾಗುವಂತೆ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್ ಗೆ ಬರೋಬ್ಬರಿ 25 ರು. ಹೆಚ್ಚಳ ಆಗಲಿದೆ. ಇದರಿಂದಾಗಿ 3 ಕಿ.ವ್ಯಾಟ್ ಸಾಮರ್ಥದ ವಿದ್ಯುತ್ ಸಂಪರ್ಕ ಹೊಂದಿದ್ದು, ಮಾಸಿಕ 100 ಯುನಿಟ್ ವಿದ್ಯುತ್ ಬಳಸುತ್ತಿರುವ ಗ್ರಾಹಕನಿಗೆ ಪ್ರತಿ ಯುನಿಟ್ಗೆ 36 ಪೈಸೆ ಹೆಚ್ಚಳದಿಂದ 36 ರು. ಹೊರೆಯಾಗಲಿದೆ. ಇದೀಗ 10 ಪೈಸೆ ಕಡಿತದಿಂದ 10 ರು. ಹೊರೆ ಕಮ್ಮಿ ಆಗಲಿದ್ದು, 100 ಯುನಿಟ್ಗೆ 26 ರು. ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇನ್ನು 3 ಕಿ.ವ್ಯಾಟ್ಗೆ ಪ್ರತಿ ಕಿ.ವ್ಯಾಟ್ಗೆ ಮಾಸಿಕ 120 ರು.ಗಳಂತೆ 360 ರು. ನಿಗದಿತ ಶುಲ್ಕ ಪಾವತಿಸುತ್ತಿದ್ದವರು ಇದೀಗ ಪ್ರತಿ ಕಿ.ವ್ಯಾಟ್ಗೆ 145 ರು.ಗಳಂತೆ 435 ರು. ಪಾವತಿ ಮಾಡಬೇಕಾಗಿದ್ದು 75 ರು. ಹೊರೆ ತಗುಲ ಲಿದೆ. ಹೀಗಾಗಿ 101 ರು. ಹೊರೆಯಾಗಲಿದೆ.ಇದರ ಜೊತೆಗೆ ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ವೇಳೆ ಹೊಸ ಶಾಕ್ ನೀಡಿದೆ. ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ಗೆ ನಾಲ್ಕು ರು. ಹೆಚ್ಚಳ ಮಾಡಿದೆ. ಈ ದರ ಹೆಚ್ಚಳ ಏ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.
11:13 PM
CSK vs RCB: ತಮಿಳರ ಕೋಟೆಯಲ್ಲಿ ಕನ್ನಡಿಗರ ಕಮಾಲ್, 17 ವರ್ಷಗಳ ಬಳಿಕ ಚೆನ್ನೈ ತಂಡವನ್ನ ಚೆಪಾಕ್ನಲ್ಲಿ ಮಣಿಸಿದ ಆರ್ಸಿಬಿ!
ಚೆನ್ನೈನಲ್ಲಿ RCB ಐತಿಹಾಸಿಕ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ CSK ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿದೆ. ರಜತ್ ಪಾಟೀದಾರ್ ನೇತೃತ್ವದ ತಂಡದ ಅದ್ಭುತ ಪ್ರದರ್ಶನ.
ಪೂರ್ತಿ ಓದಿ10:44 PM
PM Kisan Update: ಈ ರಾಜ್ಯದ ರೈತರಿಗೆ ಸಿಗಲಿದೆ ವರ್ಷಕ್ಕ 9 ಸಾವಿರ ಹಣ? ಯಾವಾಗ ಬರಲಿದೆ 20ನೇ ಕಂತು..
PM Kisan 20th Installment Update: ಪಿಎಂ ಕಿಸಾನ್ ನಿಧಿ ಯೋಜನೆಯಡಿ, ರೈತರು ಈಗ 20 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ, ಒಂದು ರಾಜ್ಯದ ರೈತರು ವಾರ್ಷಿಕ 6000 ರೂ.ಗಳ ಬದಲಿಗೆ 9000 ರೂ.ಗಳನ್ನು ಪಡೆಯುಲಿದ್ದಾರೆ.
ಪೂರ್ತಿ ಓದಿ
9:20 PM
CSK vs RCB: ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ಸ್ ಬಲ, ಚೆನ್ನೈಗೆ 197 ಗುರಿ ನೀಡಿದ ಆರ್ಸಿಬಿ!
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 196 ರನ್ ಗಳಿಸಿದೆ. ರಜತ್ ಪಾಟಿದಾರ್ ಅರ್ಧಶತಕ ಮತ್ತು ಕೊನೆಯಲ್ಲಿ ಟಿಮ್ ಡೇವಿಡ್ ಸಿಕ್ಸರ್ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿದೆ.
ಪೂರ್ತಿ ಓದಿ9:08 PM
CSK vs RCB: ಧೋನಿ ಮಿಂಚಿನ ಸ್ಟಂಪಿಂಗ್ಗೆ ಅಚ್ಚರಿ ಬಿದ್ದ ಕ್ರಿಕೆಟ್ ಜಗತ್ತು!
ಚೆನ್ನೈ vs ಆರ್ಸಿಬಿ ಪಂದ್ಯದಲ್ಲಿ ಧೋನಿ ಮಿಂಚಿನ ಸ್ಟಂಪಿಂಗ್ ಮಾಡಿದ್ದಾರೆ. 43 ವರ್ಷ ವಯಸ್ಸಿನಲ್ಲೂ ಧೋನಿ ವಿಕೆಟ್ ಕೀಪಿಂಗ್ ಚುರುಕುತನಕ್ಕೆ ಕ್ರಿಕೆಟ್ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ.
ಪೂರ್ತಿ ಓದಿ8:44 PM
ಡಿಸೆಂಬರ್ ವೇಳೆಗೆ ಕಂಟೋನ್ಮೆಂಟ್-ವೈಟ್ಫೀಲ್ಡ್ ಹಳಿ ಚತುಷ್ಪಥ ಪೂರ್ಣ, ಧ್ವಂಸವಾಗಲಿದೆ ಬೈಯ್ಯಪ್ಪನಹಳ್ಳಿ ಮೆಟ್ರೋ FOB!
ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ರೈಲ್ವೆ ಮಾರ್ಗದ ಚತುಷ್ಪಥ ರೈಲ್ವೆ ಟ್ರ್ಯಾಕ್ ಯೋಜನೆಯು ಡಿಸೆಂಬರ್ 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಮೇಲಿನ ಸ್ಕೈವಾಕ್ ಅನ್ನು ಕೆಡವಲು ನೈಋತ್ಯ ರೈಲ್ವೆ ಯೋಜಿಸುತ್ತಿದೆ.
ಪೂರ್ತಿ ಓದಿ8:34 PM
ಗೋಬಿ ಮಹೇಶ್ನ ವಿವಾದಾತ್ಮಕ ಕೃತ್ಯ: ಹಿಂದೂ ಹುಡುಗಿ ಮುಸ್ಲಿಂ ಯುವಕನೊಂದಿಗಿನ ಮದುವೆಗೆ ಹಿಂದೂ ಸಂಘಟನೆಗಳ ತೀವ್ರ ಆಕ್ಷೇಪ
ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ಗೆ ಹಿಂದೂಗಳೇ ಬೆಂಬಲ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ಮದುವೆಗೆ ಬೆಂಬಲ ನೀಡಿದ ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವೆಂದು ಗೋಬಿ ಮಹೇಶ್ ದೂರು ದಾಖಲಿಸಿದ್ದಾರೆ.
ಪೂರ್ತಿ ಓದಿ8:13 PM
ಕೊಡಗು: ನಡುರಾತ್ರಿ ನರಮೇಧ, ವರ್ಷದ ಹಿಂದೆ ವರಿಸಿದ್ದವನೇ ನಾಲ್ವರನ್ನೂ ಮುಗಿಸಿದನಾ?
ಕೊಡಗಿನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ನಾಲ್ವರು ಮಲಗಿದ್ದಲ್ಲೇ ಹತ್ಯೆಯಾಗಿದ್ದು, ಕುಟುಂಬದ ಸದಸ್ಯನೋರ್ವ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪೂರ್ತಿ ಓದಿ7:59 PM
ಬೆಂಗಳೂರು-ತುಮಕೂರು ಪ್ಲ್ಯಾಂಟ್ಗೆ ಪ್ರಚಂಡ ಬಂಪರ್, ಇತಿಹಾಸದಲ್ಲೇ ಅತಿದೊಡ್ಡ ಆರ್ಡರ್ ಪಡೆದ ಎಚ್ಎಎಲ್!
ಪ್ರಚಂಡ್ ವಿಮಾನವು ಆಕಾಶದಿಂದ ನೆಲಕ್ಕೆ ಮತ್ತು ಆಕಾಶದಿಂದ ಆಕಾಶಕ್ಕೆ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಶತ್ರುಗಳ ವಾಯು ರಕ್ಷಣಾ ಕಾರ್ಯಾಚರಣೆಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಪೂರ್ತಿ ಓದಿ7:41 PM
ವಿದೇಶದಲ್ಲಿ ಪುನೀತ್ ರಾಜ್ಕುಮಾರ್ ಪಾಸ್ಪೋರ್ಟ್ ಪಡೆದ ಆಫೀಸರ್; ಪಕ್ಕದಲ್ಲಿದ್ದ ಹೆಸರು ನೋಡಿ ಗಾಬರಿ ಆಗಿದ್ದು ಯಾಕೆ?
ಅಪ್ಪು ವಿದೇಶದಲ್ಲಿ ಪ್ರಯಾಣ ಮಾಡುವಾಗ ಅಣ್ಣಾವ್ರ ಅಭಿಮಾನಿ ಸಿಕ್ಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪಾಸ್ಪೋರ್ಟ್ನಲ್ಲಿ ಏನಿತ್ತು......
ಪೂರ್ತಿ ಓದಿ7:36 PM
ಕೇವಲ 10 ಗ್ರಾಂ ಮರದ ತುಂಡಿಗೆ 1 ಕೆಜಿ ಚಿನ್ನದ ಬೆಲೆ! ಭಾರತದಲ್ಲೂ ಬೆಳೆಯುತ್ತೆ ಈ ಮರ!
ಕೈನಮ್ ಎಂಬ ಅಗರ್ವುಡ್ ಪ್ರಭೇದದ ಮರವು ಜಗತ್ತಿನ ಅತ್ಯಂತ ದುಬಾರಿ ಮರವಾಗಿದ್ದು, 10 ಗ್ರಾಂ ಮರದ ತುಂಡಿಗೆ 1 ಕೆಜಿ ಚಿನ್ನದ ಬೆಲೆ ಇದೆ. ಈ ಮರವು ಆಗ್ನೇಯ ಏಷ್ಯಾ, ಭಾರತ, ಚೀನಾ, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸುಗಂಧ ದ್ರವ್ಯ ಉದ್ಯಮಕ್ಕೆ ಅತ್ಯಗತ್ಯವಾಗಿದೆ.
ಪೂರ್ತಿ ಓದಿ7:24 PM
2025 ರಿಂದ ವರ್ಷದಲ್ಲಿ ಮೂರು ಬಾರಿ ಸಿಎ ಫೈನಲ್ಸ್ ಪರೀಕ್ಷೆ: ICAI
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2025 ರಿಂದ ಸಿಎ ಫೈನಲ್ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸಲು ನಿರ್ಧರಿಸಿದೆ. ಈ ಹಿಂದೆ ವರ್ಷಕ್ಕೆ ಎರಡು ಬಾರಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು.
ಪೂರ್ತಿ ಓದಿ7:21 PM
ಹುಬ್ಬಳ್ಳಿಗೆ ಯುಗಾದಿ ಹಬ್ಬಕ್ಕೆ ವಿಶೇಷ ರೈಲು ಬಿಟ್ಟ ಭಾರತೀಯ ರೈಲ್ವೆ ಇಲಾಖೆ!
ಯುಗಾದಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಕಾರಣ, ದಕ್ಷಿಣ ಮಧ್ಯ ರೈಲ್ವೆಯು ಗುಂಟೂರು ಮತ್ತು ಎಸ್.ಎಸ್.ಎಸ್. ಹುಬ್ಬಳ್ಳಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಸಂಚರಿಸಲಿವೆ.
ಪೂರ್ತಿ ಓದಿ6:40 PM
Myanmar earthquake 2025: ಬಹುಮಹಡಿ ಕಟ್ಟಡದಲ್ಲಿದ್ದಾಗ ಭೂಕಂಪ ಸಂಭವಿಸಿದರೆ ತಕ್ಷಣ ಏನು ಮಾಡಬೇಕು?
ಮ್ಯಾನ್ಮಾರ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡದಲ್ಲಿರುವಾಗ ಹೇಗೆ ಸುರಕ್ಷಿತವಾಗಿರಬೇಕೆಂದು ಈ ಲೇಖನ ವಿವರಿಸುತ್ತದೆ. ಭೂಕಂಪ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳು, ನಂತರದ ಸುರಕ್ಷತಾ ಕ್ರಮಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಪೂರ್ತಿ ಓದಿ6:36 PM
ಯುಗಾದಿ ಗಿಫ್ಟ್ ನೀಡಿದ ಸರ್ಕಾರ, ನೌಕರರ ಡಿಎ ಶೇ.2 ರಷ್ಟು ಏರಿಕೆ, ಎಷ್ಟಾಗಲಿದೆ ಗೊತ್ತಾ ಪ್ರತಿ ತಿಂಗಳ ವೇತನ?
ಕೇಂದ್ರ ಸರ್ಕಾರವು ಯುಗಾದಿ ಹಬ್ಬದ ಸಂದರ್ಭದಲ್ಲಿ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಿಸಿದೆ. ಈ ನಿರ್ಧಾರದಿಂದ 1.15 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಸರ್ಕಾರದ ಖಜಾನೆಗೆ 6614 ಕೋಟಿ ರೂಪಾಯಿ ಹೊರೆಯಾಗಲಿದೆ.
ಪೂರ್ತಿ ಓದಿ6:22 PM
ಮುಂಬೈ ನೋಡಲು ಮನೆಬಿಟ್ಟ ಮಗ 14 ವರ್ಷಗಳ ಬಳಿಕ ಸಿಕ್ಕ: ಇಲ್ಲಿ ಹೆತ್ತಮ್ಮ, ಅಲ್ಲಿ ಸಾಕಮ್ಮ... ಭಾವುಕ ಘಟನೆ ಇಲ್ಲಿದೆ...
14 ವರ್ಷಗಳ ಹಿಂದೆ ಕಾಣಿಯಾಗಿದ್ದ ಬಾಲಕನೊಬ್ಬ ಈಗ ಯುವಕನಾಗಿ ಹೆತ್ತವರ ಮುಂದೆ ಕಾಣಿಸಿಕೊಂಡಿದ್ದಾರೆ. ಅತ್ತ ಇಷ್ಟು ವರ್ಷ ಸಾಕಿದ ಅಮ್ಮ- ಇತ್ತ ಹೆತ್ತವರು... ಭಾವುಕ ಕಥೆ ಇಲ್ಲಿದೆ..
6:05 PM
Insomnia in Teens: ಹದಿಹರೆಯದವರಲ್ಲಿ ನಿದ್ರೆ: ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು
ಹದಿಹರೆಯದವರಲ್ಲಿ ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೀವನಶೈಲಿ ಬದಲಾವಣೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.
ಪೂರ್ತಿ ಓದಿ6:01 PM
ಥೈಲ್ಯಾಂಡ್-ಮಯನ್ಮಾರ್ ಭೂಕಂಪದ Impact: ಗುಜರಾತ್ಗೆ ಆಗಲಿದೆ ಬೆಟ್ಟದಷ್ಟು ನಷ್ಟ!
ಮಯನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಭೂಕಂಪದಿಂದ ಗುಜರಾತ್ ಮೂಲದ ಕಂಪನಿಗಳ ರಫ್ತಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜವಳಿ, ಔಷಧ, ರಾಸಾಯನಿಕ ರಫ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಸಾಗಣೆ ಮತ್ತು ಪಾವತಿಗಳ ಮೇಲೆ ಪರಿಣಾಮ ಬೀರಬಹುದು.
ಪೂರ್ತಿ ಓದಿ5:29 PM
Myanmar earthquake 2025: ಭೂಕಂಪಗಳು ಹೇಗೆ ಸಂಭವಿಸುತ್ತವೆ? ಅದರ ತೀವ್ರತೆ ಮತ್ತು ವಿನಾಶ ಸಂಪೂರ್ಣ ವಿವರ ಇಲ್ಲಿದೆ
ಮ್ಯಾನ್ಮಾರ್ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಬ್ಯಾಂಕಾಕ್ನಲ್ಲೂ ಕಂಪನ ಉಂಟಾಗಿದೆ. ಎರಡು ಬಾರಿ ಭೂಮಿ ಕಂಪಿಸಿದ ಪರಿಣಾಮವಾಗಿ ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಪೂರ್ತಿ ಓದಿ5:09 PM
ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...
ಹೆಚ್ಚು ಬಾಡಿಗೆಯನ್ನು ಪಾವತಿಸುತ್ತಿದ್ದರೆ ಟಿಡಿಎಸ್ ಸಲ್ಲಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ಭಾರಿ ದಂಡ ಇಲ್ಲವೇ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಡಿಟೇಲ್ಸ್ ಇಲ್ಲಿದೆ...
4:57 PM
ಯತ್ನಾಳ್ ಉಚ್ಚಾಟನೆ: ನಾವು ಜೊತೆಗಿದ್ದೇವೆ ಎಂಬ ಸಂದೇಶ ಸಾರಿದ ಟೀಂ, ಸಭೆಯ ನಿರ್ಣಯಗಳೇನು?
ಬೆಂಗಳೂರಿನಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಯತ್ನಾಳ್ ತಂಡವು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿತು ಮತ್ತು ಪಕ್ಷದ ಹೈಕಮಾಂಡ್ನ ಕೆಲವು ನಿರ್ಣಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ವಿಜಯೇಂದ್ರ ವಿರುದ್ಧ ಹೋರಾಟ ಮುಂದುವರೆಸಲು ಮತ್ತು ಯತ್ನಾಳ್ ಉಚ್ಛಾಟನೆ ಮರುಪರಿಶೀಲನೆಗೆ ಮನವಿ ಮಾಡಲು ನಿರ್ಧರಿಸಲಾಯಿತು.
ಪೂರ್ತಿ ಓದಿ4:41 PM
ಐವಿಎಫ್ ಸಹಾಯವಿಲ್ಲದೇ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಜರ್ಮನಿಯ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪೂರ್ತಿ ಓದಿ4:27 PM
ಭೂಕಂಪವಾಗುವುದಕ್ಕೂ ಮುಂಚೆ ಸಿಗುವ 10 ಸುಳಿವುಗಳು, ಅರ್ಥ ಮಾಡಿಕೊಂಡರೆ ಜೀವ ಉಳಿಯುತ್ತೆ!
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ಭೂಕಂಪದಿಂದ ಭಾರಿ ಹಾನಿಯಾಗಿದೆ! ಭೂಕಂಪದ ಮುಂಚೆ ಎಚ್ಚರಿಸುವ 10 ವಿಷಯಗಳು ನಿಮಗೆ ಗೊತ್ತಾ? ಸೂಚನೆ ಅರ್ಥ ಮಾಡಿಕೊಂಡರೆ ಜೀವ ಉಳಿಸಬಹುದು.
ಪೂರ್ತಿ ಓದಿ4:00 PM
ಕೊಡಗಿನಲ್ಲಿ ಬರ್ಬರ ಹತ್ಯೆ, ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ!
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಕತ್ತಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಿರೀಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪೂರ್ತಿ ಓದಿ3:45 PM
ಶಿಂಧೆ ವಿರುದ್ಧ ಅವಹೇಳನ: ಮಹಾರಾಷ್ಟ್ರ ಕೇಸ್ಗೆ ಮದ್ರಾಸ್ ಹೈಕೋರ್ಟ್ಗೆ ಕಮ್ರಾ ಅರ್ಜಿ ಸಲ್ಲಿಸಿದ್ದೇಕೆ?
ಹಾಸ್ಯನಟ ಕುನಾಲ್ ಕಮ್ರಾ, ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹಾಸ್ಯ ಮಾಡಿದ ಕಾರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೇಕೆ ಕಮ್ರಾ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ3:32 PM
ಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಪ್ರಿಮಿಯಂ MPV ಕಾರು, ಇನ್ನೋವಾ ಕ್ರೈಸ್ಟಾಗಿಂತ ಕಡಿಮೆ ಬೆಲೆ
ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕ್ಯಾರೆನ್ಸ್ ಆಧಾರಿತ ಈ ಕಾರು ಇನ್ನೋವಾ ಕ್ರೈಸ್ಟಾ ಕಾರಿಗೆ ಪೈಪೋಟಿ ನೀಡಲಿದೆ. ವಿಶೇಷ ಅಂದರೆ ಇದರ ಬೆಲೆ ಕಡಿಮೆ.
3:19 PM
10 ಸೆಕೆಂಡ್ಗಳಲ್ಲಿ ವಿನಾಶ! ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋಗ
ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ವಿಡಿಯೋ: ಮಾರ್ಚ್ 28 ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ಗೆ ಕರಾಳ ದಿನವಾಗಿತ್ತು. 7.7 ತೀವ್ರತೆಯ ಭೂಕಂಪ ಎಲ್ಲವನ್ನೂ ನಾಶ ಮಾಡಿತು. ಭೂಕಂಪದ ಲೈವ್ ವಿಡಿಯೋಗಳು ಇಲ್ಲಿವೆ.
ಪೂರ್ತಿ ಓದಿ3:17 PM
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಗೈರು?
ವರದಿಗಳ ಪ್ರಕಾರ, ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಪೂರ್ತಿ ಓದಿ2:57 PM
ಹೆಚ್ಚುತ್ತಿರುವ ಕ್ಯಾನ್ಸರ್ಗೆ ಲಿಪ್ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್ ಉದ್ಯಮದ ಶಾಕಿಂಗ್ ಡಿಟೇಲ್ಸ್ ಇಲ್ಲಿದೆ...
ಪ್ರತಿದಿನವೂ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದು ಕೆಲವರಿಗೆ ಅನಿವಾರ್ಯ ಆಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಸಂಬಂಧಿಸಿದ ಶಾಕಿಂಗ್ ವರದಿ ಬಂದಿದೆ. ಇಲ್ಲಿದೆ ನೋಡಿ ಡಿಟೇಲ್ಸ್...
2:57 PM
AI ಈ 3 ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ಬಿಲ್ ಗೇಟ್ಸ್! ಯಾವುವು ಈ ಕೆಲಸಗಳು?
ಕೃತಕ ಬುದ್ಧಿಮತ್ತೆ ಅನೇಕ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬ ವಾದದ ನಡುವೆ, ಬಿಲ್ ಗೇಟ್ಸ್ AIನಿಂದ ಯಾವುದೇ ಪರಿಣಾಮ ಬೀರದ 3 ಉದ್ಯೋಗಗಳ ಬಗ್ಗೆ ಮಾತನಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಮೂರು ಮಾನವ ಉದ್ಯೋಗದ ಮೇಲೆ AI ಪರಿಣಾಮ ಬೀರುವುದಿಲ್ಲ ಎಂದುಹೇಳಿದ್ದಾರೆ.
ಪೂರ್ತಿ ಓದಿ2:51 PM
ನಟಿ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗ, ಜೊತೆಗಿರುವುದು ಯಾರು?
ಬಾಲಿವುಡ್ ನಟಿ ದಿಶಾ ಪಟಾನಿ ಡೇಟಿಂಗ್, ರಿಲೇಶನ್ಶಿಪ್ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗವಾಗಿದೆ. ದಿಶಾ ಪಟಾನಿ ಯಾರ ಜೊತೆಗೆ ಡಿನ್ನರ್ ಡೇಟ್ನಲ್ಲಿದ್ದಾರೆ?
ಪೂರ್ತಿ ಓದಿ1:36 PM
ವೃದ್ಧ ದಂಪತಿ ₹6 ಲಕ್ಷ ಕೊಟ್ಟರೂ ಬೆದರಿಕೆ ನಿಲ್ಲಿಸದ ಸೈಬರ್ ವಂಚಕರು; ಮಾನಕ್ಕೆ ಹೆದರಿ ಪ್ರಾಣವನ್ನೇ ಬಿಟ್ಟರು!
ಬೆಳಗಾವಿಯಲ್ಲಿ ಸೈಬರ್ ವಂಚಕರ ಬೆದರಿಕೆಗೆ ಹೆದರಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 6 ಲಕ್ಷ ರೂ. ಪಡೆದರೂ ಮತ್ತೆ ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂರ್ತಿ ಓದಿ1:36 PM
ಎಕ್ಸ್ ಗರ್ಲ್ಫ್ರೆಂಡ್ ಜೊತೆ ಗಂಡನ ಫೋಟೋ: ಎಣ್ಣೆ ಬಿಸಿ ಮಾಡಿ ಗಂಡನ ಖಾಸಗಿ ಭಾಗಕ್ಕೆ ಎರಚಿದ ಪತ್ನಿ
ಕೇರಳದಲ್ಲಿ ಪತ್ನಿಯೊಬ್ಬಳು ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗಂಡನ ಮೊಬೈಲ್ನಲ್ಲಿ ಮಾಜಿ ಗೆಳತಿಯ ಫೋಟೋ ನೋಡಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ. ಗಂಡನ ಸ್ಥಿತಿ ಗಂಭೀರವಾಗಿದೆ.
ಪೂರ್ತಿ ಓದಿ1:29 PM
ಮ್ಯಾನ್ಮಾರ್ನಲ್ಲಿ ಎರಡು ಪ್ರಬಲ ಭೀಕರ ಭೂಕಂಪ: ಸಾವು ನೋವು ಅಪಾರ ನಷ್ಟ!
ಮ್ಯಾನ್ಮಾರ್ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲೂ ಕಂಪನದ ಅನುಭವವಾಗಿದೆ. ಬ್ಯಾಂಕಾಕ್ನಲ್ಲಿ ನಿರ್ಮಾಣ ಹಂತದ ಕಟ್ಟಡ ಮತ್ತು ಮ್ಯಾನ್ಮಾರ್ನಲ್ಲಿ ಸೇತುವೆಯೊಂದು ಕುಸಿದಿದೆ.
ಪೂರ್ತಿ ಓದಿ1:16 PM
ಯತ್ನಾಳ್ ಉಚ್ಚಾಟನೆಯಿಂದ ಶಾಕ್, ನಮೋ ಆ್ಯಪ್ನಲ್ಲಿ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿದ ಬೆಂಬಲಿಗರು
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಇದೀಗ ಯತ್ನಾಳ್ ಬೆಂಬಲಿಗರು ನಮೋ ಆ್ಯಪ್ ಮೂಲಕ ಮಾಡಿಕೊಂಡಿದ್ದ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ.
ಪೂರ್ತಿ ಓದಿ12:52 PM
ಶಾಸಕ ಯತ್ನಾಳ್ ಉಚ್ಚಾಟನೆ: 174 ಮಂದಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ 174 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಪೂರ್ತಿ ಓದಿ12:43 PM
ಜಮ್ಮು ಕಾಶ್ಮೀರದಲ್ಲಿ ಕೇರಳದ ಯೋಧ ಹಾಗೂ ಪತ್ನಿ ಸಾವು
ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಹಾಗೂ ಅವರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಈ ದಂಪತಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಯುತ್ತಿದೆ.
ಪೂರ್ತಿ ಓದಿ12:34 PM
ಬೆಂಗಳೂರು 2025ರ ಬೆಸ್ಟ್ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಪ್ರಶಸ್ತಿ ಪ್ರದಾನ! ಯಾರಿಗೆ ಯಾವ ಅವಾರ್ಡ್ ಸಿಕ್ತು ನೋಡಿ!
ಬೆಂಗಳೂರು ಹೋಟೆಲ್ ಅಸೋಸಿಯೇಷನ್ಸ್ 2025ನೇ ಸಾಲಿನ ಫುಡ್ ಅವಾರ್ಡ್ಸ್ನಲ್ಲಿ ಬ್ರಾಹ್ಮಿನ್ಸ್ ಕಾಫಿ ಬಾರ್ ಅತ್ಯುತ್ತಮ ಇಡ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಉಳಿದಂತೆ ಬೆಂಗಳೂರಿನ ಬೆಸ್ಟ್ ದೋಸೆ ಹಾಗೂ ಫಿಲ್ಟರ್ ಕಾಫಿ ಸೇರಿದಂತೆ ವಿವಿಧ ಆಹಾರಗಳ ಪ್ರಶಸ್ತಿ ವಿತರಣೆ ಮಾಹಿತಿ ಇಲ್ಲಿದೆ ನೋಡಿ..
ಪೂರ್ತಿ ಓದಿ12:33 PM
ಎಂಪೂರಾನ್ ಹಿಂದೂಗಳ ವಿರುದ್ಧ ನಡೆಸಿದ ಷಡ್ಯಂತ್ರ ಸಿನಿಮಾ, ಮೋಹನಲಾಲ್, ಪೃಥ್ವಿರಾಜ್ ಟ್ರೋಲ್
ಮೋಹನ್ಲಾಲ್ ಪೃಥ್ವಿರಾಜ್ ಅಭಿನಯದ ಎಲ್2 ಎಂಪೂರಾನ್ ಸಿನಿಮಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಹಿಂದೂಗಳ ವಿರುದ್ದ ನಡೆಸಿದ ಷಡ್ಯಂತ್ರದ ಪ್ರಚಾರ ಸಿನಿಮಾ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾಗೆ ವಿರೋಧ ಯಾಕೆ?
ಪೂರ್ತಿ ಓದಿ12:26 PM
ಉಚ್ಚಾಟಿತ ಶಾಸಕ ಯತ್ನಾಳ್ ಪರ ಬಿಜೆಪಿಗರ ಅನುಕಂಪ: ಘಟಾನುಘಟಿ ನಾಯಕರು ಹೇಳಿದ್ದೇನು?
ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ಬಿಜೆಪಿಯ ಕೆಲ ನಾಯಕರು ಅನುಕಂಪದ ಮಾತುಗಳನ್ನಾಡಿದ್ದಾರೆ.
ಪೂರ್ತಿ ಓದಿ12:03 PM
ಬೇಸಿಗೆಯಲ್ಲಿ ಜಲಾಶಯ ನಿರ್ವಹಣೆಗೆ ಸಮಿತಿ ರಚನೆ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವ ಹಣಾ ವ್ಯವಸ್ಥೆ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ರಚನೆಗೆ ಸಂಪುಟ ಅನುಮೋದಿಸಿದೆ.
ಪೂರ್ತಿ ಓದಿ11:52 AM
ಹೆಂಡತಿ ಜೊತೆ ಕಿತ್ತಾಟ: ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ಪಾಪಿ ತಂದೆ
ರಾಜಸ್ಥಾನದಲ್ಲಿ ಹೆಂಡತಿಯೊಂದಿಗೆ ಜಗಳವಾಡಿದ ಗಂಡ ತನ್ನ 5 ತಿಂಗಳ ಅವಳಿ ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದಿದ್ದಾನೆ. ನಂತರ ಶವಗಳನ್ನು ಹೂತು ಹಾಕಿದ್ದು, ಸೋದರ ಮಾವನ ದೂರಿನಿಂದ ಪ್ರಕರಣ ಬೆಳಕಿಗೆ ಬಂದಿದೆ.
ಪೂರ್ತಿ ಓದಿ11:39 AM
ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ: ಶಾಸಕ ಯತ್ನಾಳ್
'ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣ ಕಡಿವಾಣ ಹಾಕಿ, ನಿಜವಾದ ಜನಪರ ಕಾಳಜಿ ಇರುವ ನಾಯಕರಿಗೆ ಅವಕಾಶ ನೀಡಬೇಕು' ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಪೂರ್ತಿ ಓದಿ11:32 AM
110 ಗ್ರಾಂ ಬಂಗಾರದ ಜೊತೆಗೆ ಚಿನ್ನದಂಥ ಹೆಣ್ಣು ಕೊಟ್ಟರೂ ತೀರಲಿಲ್ಲ ವರದಕ್ಷಿಣೆ ದಾಹ! ಮಲೆನಾಡ ಮಹಿಳೆ ಸಾವು!
ಚಿಕ್ಕಮಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯನ್ನು ಕೊಲೆ ಮಾಡಲಾಗಿದೆ. 110 ಗ್ರಾಂ ಚಿನ್ನ ನೀಡಿದ್ದರೂ ಕಿರುಕುಳ ನೀಡುತ್ತಿದ್ದರು. ಮೃತದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಮಗುವನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.
ಪೂರ್ತಿ ಓದಿ11:23 AM
ನಮಾಜ್ ರಸ್ತೆಯಲ್ಲಿ ಮಾಡಿದ್ರೆ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ರದ್ದು, ಪೊಲೀಸ್ ಎಚ್ಚರಿಕೆ
ರಂಜಾನ್ನ ಕೊನೆಯ ಶುಕ್ರವಾದ ನಮಾಜ್ ಪ್ರಾರ್ಥನೆಯನ್ನು ರಸ್ತೆಯಲ್ಲಿ ಮಾಡಿದರೆ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ರದ್ದುಗೊಳಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
11:18 AM
ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್ಗೆ ಬೇಲ್ ಇಲ್ಲ, ಕಾರಣವೇನು?
ದುಬೈನಿಂದ ಬೆಂಗಳೂರಿಗೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ಗೆ ನಗರದ 61ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಪೂರ್ತಿ ಓದಿ10:47 AM
ಯುಗಾದಿಗೆ ಬೆಲೆ ಏರಿಕೆ ಹೋಳಿಗೆ, ಮಹಾದೇವಪ್ಪನಿಗೂ ಶಾಕು-ಕಾಕಾ ಪಾಟೀಲಗೂ ಶಾಕು,ಕಾಂಗ್ರೆಸ್ ತಿವಿದ HDK
ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ದರ ಏರಿಕೆಯನ್ನು ಖಂಡಿಸಿದ ರೀತಿ. ಒಂದೇ ಟ್ವೀಟ್ ಮೂಲಕ ಹೆಚ್ಡಿಕೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಪೂರ್ತಿ ಓದಿ10:37 AM
ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ಬೋಲ್ಡ್ ನಟ್ ತೆಗೆಯಲು ಅಗ್ನಿಶಾಮಕ ಸಿಬ್ಬಂದಿಯ ಕರೆಸಿದ ವೈದ್ಯರು!
ಕೇರಳದಲ್ಲಿ ವ್ಯಕ್ತಿಯೊಬ್ಬನ ಗುಪ್ತಾಂಗದಲ್ಲಿ ಬೋಲ್ಟ್ ನಟ್ ಸಿಲುಕಿಕೊಂಡಿದ್ದು, ವೈದ್ಯರು ಅಗ್ನಿ ಶಾಮಕ ದಳದ ಸಹಾಯ ಕೋರಿದ್ದಾರೆ. ಕುಡಿದು ಮಲಗಿದ್ದಾಗ ಯಾರೋ ಬೋಲ್ಟ್ ನಟ್ ಹಾಕಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ನಟ್ ತೆಗೆದು ರಕ್ಷಿಸಿದ್ದಾರೆ.
ಪೂರ್ತಿ ಓದಿ10:07 AM
ನಟ್ಟು ಬೋಲ್ಟು ಮತ್ತು ಸ್ವಂತ ಫಾಲ್ಟು: ನಿರಾಸೆ ಮಾಡದ ಪುನೀತ್ ರಾಜ್ಕುಮಾರ್, ದರ್ಶನ್
2025ನೇ ವರ್ಷದಲ್ಲಿ ಚಿತ್ರರಂಗವು ಯಶಸ್ವಿಯಾಗಿ 12 ವಾರಗಳನ್ನು (ಮಾರ್ಚ್ 21) ಪೂರೈಸಿರುವುದು ಗೊತ್ತಿರುವ ಸಂಗತಿ. ಇಷ್ಟೂ ವಾರಗಳಲ್ಲಿ ಇಲ್ಲಿವರೆಗೂ ಬಿಡುಗಡೆ ಆಗಿರುವ ಒಟ್ಟು ಚಿತ್ರಗಳು 66.
ಪೂರ್ತಿ ಓದಿ9:53 AM
ಚಿತ್ರರಂಗಕ್ಕೆ ಬರುವ ಮೊದಲು ನನ್ನ ಕ್ರಶ್ ನಟ ಯಶ್: ಮನದ ಕಡಲು ನಟಿ ಅಂಜಲಿ ಅನೀಶ್
ನಾನು ಈಗ ನಟಿಸಿರುವ ‘ಮನದ ಕಡಲು’ ರೀತಿಯ ಪಾತ್ರ ಮಾಡುವಾಸೆ ಇತ್ತು. ಅದು ಈಡೇರಿದೆ. ಸಿನಿಮಾ ಪೂರ್ತಿ ಸ್ಟೋರಿ ಕ್ಯಾರಿ ಮಾಡುವ ಪಾತ್ರ ಮಾಡಬೇಕು. ಚಿತ್ರರಂಗದ ದಿಕ್ಕನ್ನೇ ಬದಲಾಯಿಸುವ ಸಿನಿಮಾಗಳಲ್ಲಿ ನಟಿಸುವಾಸೆ ಎಂದರು ನಟಿ ಅಂಜಲಿ ಅನೀಶ್.
ಪೂರ್ತಿ ಓದಿ9:52 AM
ಮುಕೇಶ್ ಅಂಬಾನಿಗೆ ಜಾಕ್ಪಾಟ್, ಒಂದೂವರೆ ತಿಂಗಳಲ್ಲಿ 100 ಮಿಲಿಯನ್ ಬಂಪರ್
ಮುಕೇಶ್ ಅಂಬಾನಿ ಕೇವಲ ಒಂದೂವರೆ ತಿಂಗಳಲ್ಲಿ ಜಾಕ್ಪಾಟ್ ಹೊಡೆದಿದ್ದಾರೆ. ಜಿಯೋಹಾಟ್ಸ್ಟಾರ್ ಮೂಲಕ ಮುಕೇಶ್ ಅಂಬಾನಿ ಊಹೆಗೂ ನಿಲುಕದ ಆದಾಾಯ ಗಳಿಸುತ್ತಿದ್ದಾರೆ. 45 ದಿನದಲ್ಲಿ ಅಂಬಾನಿ ಬರೆದ ಹೊಸ ದಾಖಲೆ ಏನು?
ಪೂರ್ತಿ ಓದಿ9:41 AM
ಮದುವೆ ಆಗುವುದಾಗಿ ನಕಲಿ ಐಎಎಸ್ನಿಂದ ಬ್ಲ್ಯಾಕ್ಮೇಲ್: 3.50 ಲಕ್ಷ ಸುಲಿಗೆ!
ವೈವಾಹಿಕ ವೆಬ್ಸೈಟ್ನಲ್ಲಿ ಪರಿಚಿತನಾದ ವ್ಯಕ್ತಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿ 42 ವರ್ಷದ ಮಹಿಳೆಯಿಂದ ₹3.50 ಲಕ್ಷ ಪಡೆದು ಬಳಿಕ ಹೆಚ್ಚಿನ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ತಿ ಓದಿ9:32 AM
IPL 2025: ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಗೆಲ್ಲುತ್ತಾ RCB?
ಐಪಿಎಲ್ನಲ್ಲಿಂದು ಚೆನ್ನೈನಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿಟ್ಟಿದ್ದು, ಮತ್ತೊಂದು ಗೆಲುವಿಗಾಗಿ ಸೆಣಸಾಡಲಿವೆ. ಚೆಪಾಕ್ ಪಿಚ್ ಸ್ಪಿನ್ನರ್ಗಳಿಗೆ ನೆರವಾಗುವ ಸಾಧ್ಯತೆಯಿದೆ.
ಪೂರ್ತಿ ಓದಿ9:32 AM
ಪತಿಯೇ ಪತ್ನಿಯನ್ನು ಕೊಂದು ಮೃತದೇಹವನ್ನು ಟ್ರ್ಯಾಲಿ ಸೂಟ್ಕೇಸ್ನಲ್ಲಿ ತುಂಬಿದ!
ರಾಜಧಾನಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ದುಷ್ಟನೊಬ್ಬ ತನ್ನ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ಗೆ ತುಂಬಿದ ಘಟನೆ ಹಸಿರಾಗಿರುವಾಗಲೇ ಪತಿಯೇ ಪತ್ನಿಯನ್ನು ಚಾಕುನಿಂದ ಇರಿದು ಕೊಲೆ.
ಪೂರ್ತಿ ಓದಿ9:23 AM
ಮಾರ್ಚ್ನಲ್ಲಿ 69% ಹೆಚ್ಚು ಮಳೆ, ಇನ್ನೂ ಒಂದು ವಾರ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಈ ವರ್ಷ ಮಾರ್ಚ್ನಿಂದ ಪೂರ್ವ ಮುಂಗಾರು ಮಳೆ ಆರಂಭಗೊಂಡಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಸರಾಸರಿ 8.8 ರಷ್ಟು ಮಳೆಯಾಗಬೇಕು.
ಪೂರ್ತಿ ಓದಿ9:08 AM
ವಿಶ್ವದ ಶ್ರೀಮಂತರ ಪೈಕಿ ಅದಾನಿ-ರೋಶ್ನಿ ನಾಡರ್ ದಾಖಲೆ , ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್
ಶ್ರೀಮಂತರ ಪೈಕಿ ಗೌತಮ್ ಅದಾನಿ ಹಾಗೂ ಹೆಚ್ಸಿಎಲ್ನ ರೋಶ್ನಿ ನಾಡರ್ ಆದಾಯ ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವದ ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ. ಹೊಸ ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ?
9:05 AM
ರಷ್ಯಾ ಅಧ್ಯಕ್ಷ ಪುಟಿನ್ ಶೀಘ್ರ ಸಾವು: ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಭವಿಷ್ಯ
ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಪ್ರಕಾರ, ಪುಟಿನ್ ಶೀಘ್ರದಲ್ಲೇ ಸಾವನ್ನಪ್ಪಲಿದ್ದು, ಉಕ್ರೇನ್-ರಷ್ಯಾ ಯುದ್ಧ ಕೊನೆಗೊಳ್ಳಲಿದೆ.
ಪೂರ್ತಿ ಓದಿ8:59 AM
IPL 2025: ಸನ್ರೈಸರ್ಸ್ ಆರ್ಭಟಕ್ಕೆ ಆರ್ಭಟಕ್ಕೆ ಲಖನೌ ಸೂಪರ್ ಜೈಂಟ್ಸ್ ಬ್ರೇಕ್!
ಲಖನೌ ಸೂಪರ್ ಜೈಂಟ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರಿನಲ್ಲಿ ಸೋಲಿಸಿದೆ. ಲಖನೌ 5 ವಿಕೆಟ್ಗಳಿಂದ ಗೆದ್ದು ಬೀಗಿದೆ. ಪೂರನ್ ಮತ್ತು ಮಾರ್ಷ್ ಅವರ ಭರ್ಜರಿ ಆಟ ಲಖನೌ ಗೆಲುವಿಗೆ ಕಾರಣವಾಯಿತು.
ಪೂರ್ತಿ ಓದಿ8:58 AM
ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 15 ಕುಸಿತ: ಈಗ ಇರೋದು ಎಷ್ಟು ಗೊತ್ತಾ?
ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ 2024 ವರದಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ 393 ಹುಲಿಗಳಿವೆ. ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಹುಲಿ ಸಂಖ್ಯೆ ಕಡಿಮೆಯಾಗಿದೆ.
ಪೂರ್ತಿ ಓದಿ8:26 AM
ಅಕ್ರಮ ವಲಸೆ ತಡೆ ಮಸೂದೆ 2025 ಲೋಕಸಭೆಯಲ್ಲಿ ಅಂಗೀಕಾರ
ವಿದೇಶಿಯರ ಪ್ರವೇಶ ನಿಯಂತ್ರಿಸುವ ಅಕ್ರಮ ವಲಸೆ ತಡೆ ಮಸೂದೆ 2025 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ವೀಸಾ, ಪಾಸ್ಪೋರ್ಟ್ ದಾಖಲೆಗಳಿಲ್ಲದ ವಿದೇಶಿಯರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ನಿಯಮಗಳಿವೆ.
ಪೂರ್ತಿ ಓದಿ8:08 AM
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ಮತ್ತೆರಡು ಸಂಘಟನೆಗಳ ವಿದಾಯ
ಜಮ್ಮು ಮತ್ತು ಕಾಶ್ಮೀರ ಮೂಲದ ಎರಡು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದವನ್ನು ತೊರೆದಿವೆ. ನವ ಭಾರತ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಲ್ಲಿ ನಾಲ್ಕು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದವನ್ನು ಕೈಬಿಟ್ಟಿವೆ.
ಪೂರ್ತಿ ಓದಿ7:45 AM
ಶಿಶು ಮರಣ ಇಳಿಕೆಯಲ್ಲಿ ಭಾರತದ ಪ್ರಗತಿ: ವಿಶ್ವಸಂಸ್ಥೆ ಪ್ರಶಂಸೆ!
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಶಿಶು ಮರಣ ದರವನ್ನು ಕಡಿಮೆ ಮಾಡುವಲ್ಲಿ ಭಾರತದ ಪ್ರಯತ್ನಗಳು ಮಾದರಿಯಾಗಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವ್ಯವಸ್ಥೆಯಲ್ಲಿನ ಹೂಡಿಕೆ ಮತ್ತು ಆರೋಗ್ಯ ಸೌಲಭ್ಯಗಳ ಹೆಚ್ಚಳದಿಂದ ಮರಣ ದರ ಗಣನೀಯವಾಗಿ ಇಳಿಕೆಯಾಗಿದೆ.
ಪೂರ್ತಿ ಓದಿ7:20 AM
ವಾಹನಗಳ ಪ್ರಮುಖ ಬಿಡಿಭಾಗಗಳ ಟ್ರಂಪ್ ಶೇ.25ರಷ್ಟು ತೆರಿಗೆ: ಹಲವು ಭಾರತೀಯ ಕಂಪನಿಗಳಿಗೆ ಸಂಕಷ್ಟ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ವಾಹನಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಿದ್ದಾರೆ. ಇದರಿಂದ ಭಾರತದ ವಾಹನ ಬಿಡಿಭಾಗಗಳ ರಫ್ತಿಗೆ ಪರೋಕ್ಷವಾಗಿ ಹೊಡೆತ ಬೀಳುವ ಸಾಧ್ಯತೆ ಇದೆ.
ಪೂರ್ತಿ ಓದಿ