vuukle one pixel image
LIVE NOW

Karnataka News Live 22nd March: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ

Karnataka News Live 22nd March MLA Suspend BJP Congress Politics session 2025 News Updates sanKarnataka News Live 22nd March MLA Suspend BJP Congress Politics session 2025 News Updates san

ಬೆಂಗಳೂರು (ಮಾ.11): ಹನಿಟ್ರ್ಯಾಪ್‌, ಮುಸ್ಲಿಂ ಮೀಸಲು ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಸ್ಪೀಕರ್‌ ಯುಟಿ ಖಾದರ್‌ ಅವರಿದ್ದ ಪೀಠಕ್ಕೆ ನುಗ್ಗಿ ಅವರ ಮುಖದ ಮೇಲೆ ಬಿಜೆಪಿ ಸದಸ್ಯರು ಕಾಗದ ಎಸೆದಿದ್ದಾರೆ. ಇದರ ಬೆನ್ನಲ್ಲಯೇ ಸ್ಪೀಕರ್‌ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸಭಾಧ್ಯಕ್ಷರಿಗೆ ಅಗೌರವ ತೋರಿದ್ದಕ್ಕೆ ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದ್ದು, ಮಾರ್ಷಲ್‌ಗಳು 18 ಶಾಸಕರುನ್ನು ಎತ್ತಿ ಹೊರಹಾಕಿದ್ದಾರೆ. ಒಂದೇ ಬಾರಿಗೆ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲಾಗಿದೆ.
 

11:37 PM

ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ

ಕೆಕೆಆರ್ ವಿರುದ್ದ ಚೇಸಿಂಗ್ ಮಾಡುತ್ತಿರುವ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ನೇರವಾಗಿ ಬಂದು ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ಘಟನೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಪೂರ್ತಿ ಓದಿ

10:54 PM

ಭರ್ಜರಿ ಗೆಲುವಿನೊಂದಿಗೆ ಐಪಿಎಲ್ 2025 ಆರಂಭಿಸಿದ ಆರ್‌ಸಿಬಿ, ಈ ಸಲಾ ನಮ್ದೇ ಆಟ, ನಮ್ಗೆ ಕಿರೀಟ

ಕೆಕೆಆರ್ ವಿರುದ್ಧದ ಐಪಿಎಲ್ 2025 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಹಲವು ಆವೃತ್ತಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಈ ಸಲಾ ನಮ್ದೆ  ಆಟ, ನಮ್ಗೆ ಕಿರೀಟ.

ಪೂರ್ತಿ ಓದಿ

10:46 PM

ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತ: ನದಿಗೆ ಹಾರಿ ಯುವಕ ಸಾವಿಗೆ ಶರಣು!

ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತಗಳ ಸರಣಿಗೆ ಕಾರಣವಾಗುತ್ತಿದೆ. ಒಂದೇ ವಾರದ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಇಬ್ಬರು ಯುವಕರು ಸೇರಿ ನಾಲ್ಕು ಮೃತದೇಹ ಪತ್ತೆಯಾಗಿದೆ. 

ಪೂರ್ತಿ ಓದಿ

10:22 PM

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ, 4 ವರ್ಷ ತನಿಖೆ ಬಳಿಕ ಸಾವಿನ ಕಾರಣ ಬಿಚ್ಚಿಟ್ಟ ಸಿಬಿಐ ವರದಿ

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಮಾಪ್ತಿ ವರದಿಯನ್ನು ಸಿಬಿಐ ಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಸುಶಾಂತ್ ಸಾವಿಗೆ ಕಾರಣವನ್ನು ಹೇಳಿದೆ. ಅಷ್ಟಕ್ಕೂ ನಿಗೂಢ ಪ್ರಕರಣ ಕುರಿತು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದ್ದೇನು?

ಪೂರ್ತಿ ಓದಿ

10:05 PM

ರಾವಣ ಸಾಯುವ ಮೊದಲು ಹೇಳಿದ್ದು ಈ ಮೂರು ಮಾತುಗಳು.. ಬದುಕಿದ್ದಾಗಲೇ ಅರಿವಾಗಿಬಿಟ್ಟರೆ..!?

ಈ ಮೂರು ನುಡಿ ಮುತ್ತುಗಳನ್ನು ರಾವಣ ತಾನು ಸಾಯುವುದಕ್ಕಿಂತ ಮುಂಚೆ ಹೇಳಿದ್ದಾನೆ ಎನ್ನಲಾಗಿದೆ. ಈ ಮೂರೂ ಮಾತುಗಳಿಗೆ ಸಾಕಷ್ಟು ಉತ್ತಮ ಅರ್ಥವಿದೆ. ಜೊತೆಗೆ, ಸಾಯುವ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ.. ಇಲ್ಲಿ.. 

ಪೂರ್ತಿ ಓದಿ

9:24 PM

ಆರ್‌ಸಿಬಿಗೆ 175 ರನ್ ಟಾರ್ಗೆಟ್, ಐಪಿಎಲ್ 2015ರ ಮೊದಲ ಗೆಲುವು ಪಕ್ಕಾ?

ಐಪಿಎಲ್ 2025 ಟೂರ್ನಿಯ ಉದ್ಘಟನಾ ಪಂದ್ಯದಲ್ಲಿ ಕೆಕೆಆರ್ 174 ರನ್ ಸಿಡಿಸಿದೆ. ಇದೀಗ ಗೆಲುವಿಗೆ ಆರ್‌ಸಿಬಿ 175 ರನ್ ಚೇಸ್ ಮಾಡಬೇಕಿದೆ. ಇದೀಗ ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಪಕ್ಕಾ ಎನ್ನುತ್ತಿದೆ.

ಪೂರ್ತಿ ಓದಿ

8:40 PM

ಅಂಬಾನಿ, ಅದಾನಿ ಅಲ್ಲ, 2025ರ ಬಿಲೇನಿಯರ್ ಪೈಕಿ ಈ 94 ವರ್ಷದ ಉದ್ಯಮಿಗೆ ಮಾತ್ರ ಲಾಭ

2025ರ ಬಿಲೇನಿಯರ್ ಪೈಕಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ವಿಶ್ವದ ಹಲವು ದಿಗ್ಗಜರ ಸಂಪತ್ತು ಕುಸಿತ ಕಂಡಿದೆ. ಆದರೆ ಈ 94 ವರ್ಷದ ಉದ್ಯಮಿಯ ಸಂಪತ್ತು ಬರೋಬ್ಬರಿ 21.5 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. 

ಪೂರ್ತಿ ಓದಿ

8:02 PM

ಉದ್ಯೋಗ ಪರೀಕ್ಷೆ ಪೇಪರ್‌ ಲೀಕ್ ಪ್ರಕರಣ: ರಾಜಸ್ಥಾನದಲ್ಲಿ 86 ಸರ್ಕಾರಿ ನೌಕರರ ವಜಾ!

ರಾಜಸ್ಥಾನದಲ್ಲಿ ಪೇಪರ್ ಲೀಕ್ ಪ್ರಕರಣದಲ್ಲಿ ಭಾರಿ ಕ್ರಮ! 86 ಸರ್ಕಾರಿ ನೌಕರರ ವಜಾ, 189 ಜನರ ಮೇಲೆ ತನಿಖೆ ಮುಂದುವರೆದಿದೆ. ಈ ವಂಚನೆ ಹೇಗೆ ಬಯಲಾಯಿತು ಎಂದು ತಿಳಿಯಿರಿ.

ಪೂರ್ತಿ ಓದಿ

7:51 PM

ಯುವಕರು ರಾಜಕಾರಣಕ್ಕೆ ಬರಲಿ: ಸಚಿವ ಸಂತೋಷ್ ಲಾಡ್

ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಹೊಸತನದ ಗಾಳಿ ಬೀಸಬೇಕಾದರೆ ಯುವಕರು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. 

ಪೂರ್ತಿ ಓದಿ

7:47 PM

ಮುಂಬೈ ಚೋಕ್ಸಿ ಸಹೋದರರ ಮೇಲೆ ಇಡಿ ದಾಳಿ! ಕೋಟಿಗಟ್ಟಲೆ ಆಸ್ತಿ ಪತ್ತೆ, ಕಪ್ಪು ಹಣದ ಸತ್ಯ ಬಯಲಾಗುತ್ತಾ?

ಇಡಿ ಚೋಕ್ಸಿ ಸಹೋದರರ ವಿರುದ್ಧ ಕಪ್ಪು ಹಣದ ಪ್ರಕರಣದಲ್ಲಿ ದೂರು ದಾಖಲಿಸಿದೆ. ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಒಂದು ಆಫ್‌ಶೋರ್ ಘಟಕವನ್ನು ಹೊಂದಿದ್ದಾರೆ ಮತ್ತು ಸಿಂಗಾಪುರದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂಬುದು ಆರೋಪ.

ಪೂರ್ತಿ ಓದಿ

7:43 PM

ಯಶ್ ಒಂದೇ ಒಂದು ಪೋಸ್ಟರ್‌ಗೆ ರಣಬೀರ್ ಕಪೂರ್, ಆಲಿಯಾ, ವಿಕ್ಕಿ ಕೌಶಾಲ್ ಕಂಗಾಲು

ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್‌ಗೆ ಬಾಲಿವುಡ್ ಕಂಗಾಲಾಗಿದೆ. ಘಟಾನುಘಟಿ ಸ್ಟಾರ್ಸ್ ರಣಬೀರ್ ಕಪೂರ್, ಅಲಿಯಾ ಭಟ್, ವಿಕ್ಕಿ ಕೌಶಾಲ್ ಇದೀಗ ಆತಂಕಗೊಂಡಿದ್ದಾರೆ.

ಪೂರ್ತಿ ಓದಿ

7:24 PM

ಪುರಾತನ ದೈವಾರಾಧನೆ 'ಕೋಲ' ಡಾಕ್ಯುಮೆಂಟರಿ ಬಿಡುಗಡೆ; ಮೊದಲ ವಿಭಿನ್ನ ಪ್ರಯತ್ನಕ್ಕೆ ಜೈಕಾರ!

'ಕೋಲ' ಹೆಸರಿನ ಈ ಡಾಕ್ಯುಮೆಂಟರಿ ಬಿಡುಗಡೆ ಬಳಿಕ ಬಹಳಷ್ಟು ಮೆಚ್ಚುಗೆ ಗಳಿಸುತ್ತಿದೆ. ಕಾರಣ, ರಿಷಬ್ ಶೆಟ್ಟಿಯವರ 'ಕಾಂತಾರ'ದ ಮಾದರಿಯಲ್ಲೇ ಇದರಲ್ಲಿ ಕೂಡ ದೈವಾರಾಧನೆ ಬಗ್ಗೆ ಹೇಳಲಾಗಿದೆ. ಜೊತೆಗೆ, ಇದು ಸಿನಿಮಾ..

ಪೂರ್ತಿ ಓದಿ

7:23 PM

IPL 2025ರ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ?

ಐಪಿಎಲ್ 2025 ಟೂರ್ನಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಪೂರ್ತಿ ಓದಿ

7:08 PM

ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ, ಬಾಂಧವ್ಯ ಕಣ್ಮರೆ: ಕೇಂದ್ರ ಸಚಿವ ಎಚ್‌ಡಿಕೆ ಬೇಸರ

ಆಧುನಿಕ ಭರಾಟೆಯ ನಡುವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಪೂರ್ತಿ ಓದಿ

7:01 PM

ಯಾವುದೇ ಕೃಷಿ ವಿಶ್ವವಿದ್ಯಾಲಯಗಳನ್ನು ಮುಚ್ಚಲ್ಲ: ಸಚಿವ ಚಲುವರಾಯಸ್ವಾಮಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು. ವಿಧೇಯಕ ಮಂಡಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯಿಂದ ಅನೇಕರು ಸಚಿವರಾಗಿದ್ದಾರೆ. 

ಪೂರ್ತಿ ಓದಿ

6:58 PM

ಅಂತೂ ಇಂತೂ ಮಳೆ ಕಂಡ ಬೆಂಗಳೂರಿಗರು, ವರುಣನ ಆರ್ಭಟಕ್ಕೆ ಅವಾಂತರವೋ ಅವಾಂತರ!

ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದು, ಆಲಿಕಲ್ಲು ಮಳೆಯಾಗಿದೆ. ಯಲಹಂಕದಲ್ಲಿ ರಸ್ತೆಗಳು ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ಗೋಡೆ ಕುಸಿದಿದೆ.

ಪೂರ್ತಿ ಓದಿ

6:30 PM

ಮಕರ ರಾಶಿಯವರನ್ನು ಬಿಟ್ಟು ಹೋಗುವ ಸಾಡೇಸಾತಿ: ಯಾವ ರಾಶಿಗೆ ಕಾದಿದೆ ಗ್ರಹಚಾರ? ಯಾರು ನಿರಾಳ?

ಇದೇ ಮಾರ್ಚ್​ 29ರಂದು ಶನಿ ಗ್ರಹವು ತನ್ನ ದಾರಿಯನ್ನು ಬದಲಿಸಿದ್ದಾನೆ. ಯಾರಿಗೆ ಸಾಡೇಸಾತಿ ಆರಂಭವಾಗಲಿದೆ? ಯಾರು ನಿರಾಳರಾಗಲಿದ್ದಾರೆ? ಯಾರಿಗೆ ಕಾದಿದೆ ಗ್ರಹಚಾರ? ಇಲ್ಲಿದೆ ಡಿಟೇಲ್ಸ್​
 

ಪೂರ್ತಿ ಓದಿ

5:48 PM

ಈ ಎರಡು IPL ತಂಡಗಳು ಭಾರತ-ಪಾಕಿಸ್ತಾನ ಇದ್ದಂಗೆ ಎಂದ ಹರ್ಭಜನ್ ಸಿಂಗ್!

2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹರ್ಭಜನ್ ಸಿಂಗ್ ಈ ಎರಡು ತಂಡಗಳನ್ನು ಭಾರತ-ಪಾಕಿಸ್ತಾನ ತಂಡಗಳಿಗೆ ಹೋಲಿಸಿದ್ದಾರೆ.

ಪೂರ್ತಿ ಓದಿ

5:43 PM

ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ; ಮತ್ತೆ ಯಾವಾಗ?

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್​​ಗೆ ಬೇಸರದ ಸುದ್ದಿ ಇದೆ. ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ಟಾಕ್ಸಿಕ್ ನೋಡಲು ಇನ್ನೂ ಒಂದು ವರ್ಷ..

ಪೂರ್ತಿ ಓದಿ

5:42 PM

Yash Toxic Movie Release Date: ಬಹುನಿರೀಕ್ಷಿತ ʼಟಾಕ್ಸಿಕ್ʼ‌ ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದ ನಟ ಯಶ್!‌

ನಟ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾದ ರಿಲೀಸ್‌ ದಿನಾಂಕವನ್ನು ಸೋಶಿಯಲ್‌ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಪೂರ್ತಿ ಓದಿ

5:38 PM

ಮೃತ ವ್ಯಕ್ತಿ ಆಹಾರ ಸೇವನೆ ಮಾಡೋದು ನಿಜನಾ? ಈ ಪ್ರಯೋಗ ಮಾಡಿ ನೋಡಿ ಎಂದ ಘೋಸ್ಟ್​ ಹಂಟರ್​ ಇಮ್ರಾನ್​

 ಮೃತಪಟ್ಟ ಬಳಿಕ 12, 14... ಹೀಗೆ ಕೆಲ ದಿನಗಳ ಬಳಿಕ ಅವರ ಇಷ್ಟದ ಆಹಾರಗಳನ್ನು ಇಡುವ ಸಂಪ್ರದಾಯವಿದೆ. ಆಗ ಏನಾಗುತ್ತೆ? ಆಹಾರ ಸೇವನೆ ಮಾಡ್ತಾರಾ ಎನ್ನುವ ಪ್ರಶ್ನೆಗೆ ಪ್ರಯೋಗವೊಂದನ್ನು ಮಾಡಿನೋಡುವಂತೆ ಹೇಳಿದ್ದಾರೆ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​.
 

ಪೂರ್ತಿ ಓದಿ

5:28 PM

ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ

ಹಾಲಿವುಡ್‌ನಿಂದ ಕಾಪಿ ಹೊಡೆದ್ರೂ ಪರ್ವಾಗಿಲ್ಲ, ಆದರೆ ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಈ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರೆ. ಕಾರಣ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಈ ಹಾಡು.
 

ಪೂರ್ತಿ ಓದಿ

5:06 PM

ಪ್ರತ್ಯರ್ಥ ಚಿತ್ರ ವಿಮರ್ಶೆ: ಹೊಸ ಹುಡುಗರ ಕುತೂಹಲಕರ ಸಸ್ಪೆನ್ಸ್ ಥಿಲ್ಲ‌ರ್‌ ಪ್ರೇಮಕತೆ

ಪ್ರೇಮಕತೆಯಲ್ಲಿ ಒಂದು ಮಹಾ ತಿರುವು ಎದುರಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಶುರು ಮಾಡುತ್ತಾರೆ. ಆ ತನಿಖೆಯಲ್ಲಿ ಅಚ್ಚರಿದಾಯಕ ಅಂಶಗಳೆಲ್ಲಾ ಎದುರಾಗುತ್ತಾ ಹೋಗುತ್ತವೆ.  ಇಲ್ಲಿ ಪ್ರೇಮದ ನವಿರುತನವಿದೆ. 

ಪೂರ್ತಿ ಓದಿ

4:46 PM

Narayana Narayana Film Review: ದುರಾಸೆಯ, ಅತಿಯಾಸೆಯ ಕಥನ. ಇದ್ದಕ್ಕಿದ್ದಂತೆ ಶ್ರೀಕೃಷ್ಣ ಪರಮಾತ್ಮ ಪ್ರತ್ಯಕ್ಷ

ಈ ಕತೆ ಆರಂಭವಾಗುವುದು ಹಳ್ಳಿಯ ನಾಲ್ವರು ಗೆಳೆಯರಿಂದ. ಅವರ ಪೋಕರಿತನ, ಪ್ರೇಮ ಪ್ರಸಂಗಗಳು, ಒದ್ದಾಟಗಳು, ಹಾರಾಟಗಳು, ಒಟ್ಟಾರೆ ಹಗುರ ಸನ್ನಿವೇಶಗಳು ಕತೆಯನ್ನು ಮಧ್ಯಂತರಕ್ಕೆ ತಲುಪಿಸುತ್ತವೆ.

ಪೂರ್ತಿ ಓದಿ

4:43 PM

ಆ ನಿರ್ದೇಶಕ ನನ್ನ...ಸೆಟ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಹಾಟ್ ನಟಿ ಅವನೀತ್

ಬಂಟಿ ನಿನ್ನ ಸಾಬೂನ್ ಸ್ಲೋನಾ ಎಂದು ಜಾಹೀರಾತು ಮೂಲಕ ಎಲ್ಲರ ಮನೆಗಿದ್ದ ಹುಡುಗಿ ಇದೀಗ ಹಾಟ್ ಬ್ಯೂಟಿಯಾಗಿ ಹಲವು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅವನೀತ್ ಇದೀಗ ಸೆಟ್‌ನಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಪೂರ್ತಿ ಓದಿ

3:51 PM

ಬೇಸಿಗೆಯಲ್ಲಿ ಒಂದು ತಿಂಗಳು ಜೀರಿಗೆ ನೀರು ಕುಡಿದು ನೋಡಿ, ಪ್ರಯೋಜನಗಳು ಬೆಟ್ಟದಷ್ಟು!

ಈ ಜೀರಿಗೆಯನ್ನು ಕುದಿಸಿ ನೀರನ್ನು ಮುಖ್ಯವಾಗಿ ಈ ಬೇಸಿಗೆಯಲ್ಲಿ ಒಂದು ತಿಂಗಳು ತೆಗೆದುಕೊಂಡರೆ.. ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಈಗ ತಿಳಿಯೋಣ..

ಪೂರ್ತಿ ಓದಿ

3:29 PM

ಆರ್‌ಸಿಬಿ, ಸಿಎಸ್‌ಕೆ ಕೈಬಿಟ್ಟ ಸೆಹ್ವಾಗ್; ಇದೇ ನಾಲ್ಕು ತಂಡಗಳು ಪ್ಲೇ ಆಫ್‌ಗೇರಲಿವೆ ಎಂದ ವೀರೂ!

ಐಪಿಎಲ್ 2025ರ ಪ್ಲೇ ಆಫ್ ಪ್ರವೇಶಿಸುವ ತಂಡಗಳ ಬಗ್ಗೆ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ವಿರೇಂದ್ರ ಸೆಹ್ವಾಗ್ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದಿಲ್ಲ ಎಂದಿದ್ದಾರೆ, ಆದರೆ ಹರ್ಷಾ ಭೋಗ್ಲೆ ಆರ್‌ಸಿಬಿ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

3:26 PM

ಭಾರತೀಯ ರೈಲ್ವೆಯಲ್ಲಿ LHB ಕೋಚ್‌-ICF ಕೋಚ್‌ ಎಂದರೇನು? ಆಕ್ಸಿಡೆಂಟ್‌ ಆದಾಗ ಹೆಚ್ಚಿನ ರಕ್ಷಣೆ ಸಿಗುವುದೆಲ್ಲಿ?

ಭಾರತೀಯ ರೈಲ್ವೆಯಲ್ಲಿ LHB ಮತ್ತು ICF ಕೋಚ್‌ಗಳು ಬಳಕೆಯಲ್ಲಿದ್ದು, ಇವೆರಡರ ನಡುವೆ ಹಲವು ವ್ಯತ್ಯಾಸಗಳಿವೆ. LHB ಕೋಚ್‌ಗಳು ಸುರಕ್ಷತೆ, ವೇಗ ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದು, ICF ಕೋಚ್‌ಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ.

ಪೂರ್ತಿ ಓದಿ

3:06 PM

ಕೆಬಿಸಿ ಮೂಲಕ ನಿಜಕ್ಕೂ ಕರೋಡ್‌ಪತಿಯಾಗಿದ್ದು ಅಮಿತಾಬ್ ಬಚ್ಚನ್, 150 ಎಪಿಸೋಡ್‌ನಿಂದ ಗಳಿಸಿದ್ದೆಷ್ಟು?

ಕೌನ ಬನೇಗಾ ಕರೋಡ್‌ಪತಿ? ಈ ರಿಯಾಲಿಟಿ ಶೋ ಮೂಲಕ ಸ್ಪರ್ಧಿಗಳು ಯಾರೆಲ್ಲಾ ಕೋಟ್ಯಾಧೀಶರಾಗಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ಹೋಸ್ಟ್ ಅಮಿತಾಬ್ ಬಚ್ಚನ್ ನಿಜಕ್ಕೂ ಕರೋಡ್‌ಪತಿಯಾಗಿದ್ದಾರೆ. ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಕೆಬಿಸಿ16ನೇ ಒಂದೇ ಆವತ್ತಿ ಮೂಲಕ ಅಮಿತಾಬ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

ಪೂರ್ತಿ ಓದಿ

2:39 PM

ಬಾಯಿಗೆ ಬಂದಂತೆ ಮಾತು... ಐಪಿಎಲ್‌ 2025 ಕಾಮೆಂಟರಿ ಟೀಮ್‌ನಿಂದ ಇರ್ಫಾನ್‌ ಪಠಾಣ್‌ ಕಿಕ್‌ಔಟ್!

ಐಪಿಎಲ್ 2025ರ ಕಾಮೆಂಟರಿ ತಂಡದಿಂದ ಇರ್ಫಾನ್ ಪಠಾಣ್ ಅವರನ್ನು ಕೈಬಿಡಲಾಗಿದೆ. ಕೆಲವು ಆಟಗಾರರ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇದೀಗ ಇರ್ಫಾನ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಪೂರ್ತಿ ಓದಿ

1:19 PM

'ರಾಜಣ್ಣ ಅಂಥವರಲ್ಲ, ಹಲೋ ಅಂದ್ರೆ ವಾಟ್ ಅಂತಾರೆ..', ಡಿಕೆಶಿ ಹನಿಟ್ರ್ಯಾಪ್ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು!

ಸಚಿವ ಎಂಬಿ ಪಾಟೀಲ್ ಅವರು ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಒಂದು ಕೆಟ್ಟ ಚಾಳಿ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

1:09 PM

ಈಗ ಖರೀದಿಸಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡ್ತೀರಿ! ಈ 10 ಷೇರುಗಳು ಭರ್ಜರಿ ರಿಟರ್ನ್ ನೀಡೋದು ಗ್ಯಾರಂಟಿ!

 ಷೇರು ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಾಣುತ್ತಿದೆ. ವಿದೇಶಿ ಹೂಡಿಕೆ ಹೆಚ್ಚಳದಿಂದ ಹೂಡಿಕೆಗೂ ಅವಕಾಶ ಸಿಗುತ್ತಿದೆ. ಈ ಚೇತರಿಕೆಯ ವಾತಾವರಣದಲ್ಲಿ, ಬ್ರೋಕರೇಜ್ ಹೌಸ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡಬಲ್ಲ 10 ಫಂಡಮೆಂಟಲ್‌ ಸ್ಟ್ರಾಂಗ್‌ ಆಗಿರುವ ಷೇರುಗಳನ್ನು ಹೆಸರಿಸಿದ್ದಾರೆ.

ಪೂರ್ತಿ ಓದಿ

12:59 PM

ಕಾರ್‌ ದೈತ್ಯ ಟೋಯೋಟಾ ಬಿಗ್‌ ಪ್ಲ್ಯಾನ್‌, ದೇಶದ ಮೊಟ್ಟಮೊದಲ R&D ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ!

ಟೊಯೋಟಾ ಮೋಟಾರ್ ಕಾರ್ಪೋರೇಷನ್ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಇದು ಭಾರತದಲ್ಲಿ ಟೊಯೋಟಾದ ಮೊದಲ ಆರ್‌ & ಡಿ ಘಟಕವಾಗಿದ್ದು, 2027ರ ವೇಳೆಗೆ ಇಂಜಿನಿಯರ್‌ಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ.

ಪೂರ್ತಿ ಓದಿ

12:54 PM

FIR ಗೆ ಮೊದಲು ದಾಖಲೆ ಸಂಗ್ರಹಿಸೋದು ತಪ್ಪು: ಹೈಕೋರ್ಟ್ ಮಹತ್ವದ ತೀರ್ಪು!

ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸುವ ಮುನ್ನ ದಾಖಲೆ ಸಂಗ್ರಹಿಸುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ. ಪೂರ್ವಾನುಮತಿ ಪಡೆಯದೆ ತನಿಖೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪೂರ್ತಿ ಓದಿ

12:23 PM

ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!

ಸಚಿವ ರಾಜಣ್ಣ ಹನಿಟ್ರ್ಯಾಪ್ ಕುರಿತು ಮಾತನಾಡಿದ ಮಹದೇವಪ್ಪ, ಹನಿಟ್ರ್ಯಾಪ್ ಮಾಡುವವರಿಗೆ ಸಿಎಂ ಪರ ವಿರುದ್ಧ ಎಂಬುದು ಇರೋಲ್ಲ. ಸಿದ್ದರಾಮಯ್ಯ ಅವರೇ ಮುಂದಿನ ಮೂರು ಬಜೆಟ್ ಮಂಡಿಸುತ್ತಾರೆ ಎಂದರು. ಹನಿ ಟ್ರ್ಯಾಪ್ ಮಾಡೋರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಪೂರ್ತಿ ಓದಿ

12:20 PM

ಐಪಿಎಲ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಡಬಲ್ ಶಾಕ್!

ಕೆ.ಎಲ್.ರಾಹುಲ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದ್ದು, ಲಖನೌ ತಂಡಕ್ಕೆ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ರಾಯಲ್ಸ್‌ನ ಆರಂಭಿಕ 3 ಪಂದ್ಯಗಳಿಗೆ ಸಂಜು ಸ್ಯಾಮ್ಸನ್‌ ಬದಲು ರಿಯಾನ್‌ ಪರಾಗ್‌ ನಾಯಕತ್ವ ವಹಿಸಲಿದ್ದಾರೆ.

ಪೂರ್ತಿ ಓದಿ

12:07 PM

ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್‌ ದಂಧೆ, 'ಮೀಟರ್‌' ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15,568 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲಾಗಿದೆ ಎಂದು ದೂರಲಾಗಿದೆ.

ಪೂರ್ತಿ ಓದಿ

11:51 AM

ಕರ್ನಾಟಕ ಬಂದ್: ಯಾವುದೇ ಅಹಿತರಕರ ಘಟನೆ ಆಗೋಕೆ ನಾವು ಬಿಡೋಲ್ಲ: ಗೃಹ ಸಚಿವ

ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಬಂದ್ ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

11:24 AM

ಸಿಎಂ, ಶಾಸಕರಿಗೆ ಗರಿಷ್ಠ ವೇತನ ಹೊಂದಿರುವ ದೇಶದ ಐದು ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಕರ್ನಾಟಕದ ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದೆ.

ಪೂರ್ತಿ ಓದಿ

11:22 AM

ಕರ್ನಾಟಕ ಬಂದ್: ಎಂದಿನಂತೆ ಸರ್ಕಾರಿ ಸೇವೆ, ಮಧ್ಯಾಹ್ನವಾದ್ರೂ ಚಿತ್ರಮಂದಿರದತ್ತ ಸುಳಿಯದ ಜನ!

ಮರಾಠಿಗರ ಕನ್ನಡ ವಿರೋಧಿ ನೀತಿ ಖಂಡಿಸಿ ವಾಟಾಳ್ ನಾಗರಾಜ್ ಕರೆ ನೀಡಿದ ಕರ್ನಾಟಕ ಬಂದ್ ಇಂದು. ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಚಿತ್ರಮಂದಿರಗಳು ಬೆಂಬಲ ಸೂಚಿಸಿವೆ. ಅಗತ್ಯ ಸೇವೆಗಳು ಲಭ್ಯವಿರುತ್ತವೆ.

ಪೂರ್ತಿ ಓದಿ

10:57 AM

ನೀರಿನಿಂದ ಚೀನಾದ ಮಹಾಗೋಡೆಗೆ ಅಪಾಯ, ನಿಮ್ಮನ್ನು ಬೆಚ್ಚಿಬಿಳಿಸುವ ನೀರಿಗೆ ಸಂಬಂಧಿಸಿದ ಈ 10 ಸತ್ಯಗಳು!

ನೀರಿನ ಬಗ್ಗೆ ಸತ್ಯಗಳು: ವಿಶ್ವ ಜಲ ದಿನದಂದು ನೀರಿನ ಬಗ್ಗೆ ಕೆಲವು ಭಯಾನಕ ಸತ್ಯಗಳನ್ನು ತಿಳಿಯಿರಿ. ನೀರಿನ ಕೊರತೆಯಿಂದ ಸಾವುಗಳು ಮತ್ತು ಹವಾಮಾನ ಬದಲಾವಣೆಯಂತಹ ಅಪಾಯಗಳು ಹೆಚ್ಚುತ್ತಿವೆ.

ಪೂರ್ತಿ ಓದಿ

10:44 AM

1 ಟ್ರೋಫಿ, 10 ಟೀಂ: ಇಂದಿನಿಂದ ಐಪಿಎಲ್ ಮೆಗಾ ಫೈಟ್! ಉದ್ಘಾಟನಾ ಪಂದ್ಯದಲ್ಲಿಂದು ಆರ್‌ಸಿಬಿ vs ಕೆಕೆಆರ್ ಕದನ

17 ವರ್ಷಗಳ ಬಳಿಕ ಮತ್ತೆ RCB ಮತ್ತು KKR ತಂಡಗಳು IPL ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಯಾರಿಗೆ ಗೆಲುವು? ಉದ್ಘಾಟನಾ ಸಮಾರಂಭದ ವಿಶೇಷತೆಗಳೇನು?

ಪೂರ್ತಿ ಓದಿ

10:25 AM

ಟ್ವಿಟರ್‌ನ ಐಕಾನಿಕ್‌ ಬ್ಲ್ಯೂಬರ್ಡ್‌ ಲೋಗೋ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟ!

ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿದ್ದ ನೀಲಿ ಹಕ್ಕಿ ಲೋಗೋವನ್ನು $34,375 ಗೆ ಹರಾಜು ಮಾಡಲಾಗಿದೆ. ಎಲೋನ್ ಮಸ್ಕ್ ಟ್ವಿಟರ್ ಅನ್ನು 'ಎಕ್ಸ್' ಎಂದು ಬದಲಾಯಿಸಿದ ನಂತರ ಈ ಲೋಗೋವನ್ನು ಮಾರಾಟ ಮಾಡಲಾಯಿತು.

ಪೂರ್ತಿ ಓದಿ

10:23 AM

'ಮಂಡ್ಯ ಜನ ಛತ್ರಿಗಳಲ್ಲ, ಛತ್ರಪತಿಗಳು.. ಡಿಕೆಶಿ ವಿರುದ್ಧ ತಿರುಗಿಬಿದ್ದ ರೈತ ಮುಖಂಡರು!

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂಬ ಹೇಳಿಕೆಗೆ ರೈತ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕ್ಷಮೆ ಕೋರಲು ಸೋಮವಾರದವರೆಗೆ ಗಡುವು ನೀಡಿದ್ದು, ಇಲ್ಲದಿದ್ದರೆ ಛತ್ರಿ ಚಳವಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪೂರ್ತಿ ಓದಿ

10:01 AM

ಲಂಚ ಕೇಳಿದರೆ, ಆತನ ಇಡೀ ಭವಿಷ್ಯದ ಜನರೇಷನ್‌ಗೆ ಇರೋದಿಲ್ಲ ಸರ್ಕಾರಿ ನೌಕರಿ: ಯೋಗಿ ಖಡಕ್‌ ವಾರ್ನಿಂಗ್‌

ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಸಮರ ಸಾರಿದ್ದಾರೆ. ಭ್ರಷ್ಟಾಚಾರವನ್ನು ಗೆದ್ದಲಿಗೆ ಹೋಲಿಸಿ, ಅದನ್ನು ನಿರ್ನಾಮ ಮಾಡಲು ಕರೆ ನೀಡಿದ್ದಾರೆ. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ

9:53 AM

ಮಗನ ಸಾಲ ಬಾಕಿ: ಗೃಹಲಕ್ಷ್ಮಿ ಹಣ ಕೊಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್! ಇಲ್ಲಿ ಯಾರದು ತಪ್ಪು ನೀವೇ ಹೇಳಿ

ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ನೀಡಲು ನಿರಾಕರಿಸಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಬಳಿಕ ಹಣ ಬಿಡುಗಡೆ ಮಾಡಲಾಯಿತು.

ಪೂರ್ತಿ ಓದಿ

9:17 AM

ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ತಿರುಪತಿ ದೇವಸ್ಥಾನ, ಆಂಧ್ರ ಸಿಎಂ ಘೋಷಣೆ!

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯ ನಿರ್ಮಿಸಲು ಘೋಷಿಸಿದ್ದಾರೆ. ತಿರುಪತಿ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಲು ಮತ್ತು ಸೆವೆನ್ ಹಿಲ್ಸ್ ಬಳಿ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಪೂರ್ತಿ ಓದಿ

9:13 AM

Iphone ಕಳ್ಳತನ, ತನಿಖೆಗೆ ಇಳಿದಾಗ 70 ಫೋನ್‌ಗಳು ಪತ್ತೆ! ಕದ್ದವರು ಯಾರು ಗೊತ್ತಾ?

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 43 ಲಕ್ಷ ರೂ. ಮೌಲ್ಯದ 70 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರೆದಿದೆ.

ಪೂರ್ತಿ ಓದಿ

8:59 AM

ಗ್ರಾಹಕರೇ ಗಮನಿಸಿ..ಸೋಮವಾರ, ಮಂಗಳವಾರ ಬ್ಯಾಂಕ್ ಮುಷ್ಕರವಿಲ್ಲ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಯೂನಿಯನ್‌ಗಳು ಕರೆ ನೀಡಿದ್ದ ಮುಷ್ಕರವನ್ನು ಮುಂದೂಡಲಾಗಿದೆ. ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪೂರ್ತಿ ಓದಿ

7:58 AM

Karnataka Assembly: ಶಾಸಕರು, ಸಚಿವರ ವೇತನ ಏರಿಕೆ ಮಸೂದೆ, ಚರ್ಚೆ ಇಲ್ಲದೇ ಫಟಾಫಟ್ ಪಾಸ್!

Karnataka assembly: ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿದೆ. ಶಾಸಕರ ವೇತನ 40 ಸಾವಿರದಿಂದ 80 ಸಾವಿರಕ್ಕೆ, ಮುಖ್ಯಮಂತ್ರಿ ವೇತನ 75 ಸಾವಿರದಿಂದ 1.50 ಲಕ್ಷಕ್ಕೆ ಹೆಚ್ಚಳವಾಗಿದೆ.

ಪೂರ್ತಿ ಓದಿ

7:37 AM

ತೀವ್ರ ವಿರೋಧದ ನಡುವೇ ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್‌, ಗೌರ್ನರ್‌ ಒಪ್ಪಿದರೆ ಜಾರಿ!

ವಿಧಾನಮಂಡಲದಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು, ಸದನದಲ್ಲಿ ಗದ್ದಲ ಉಂಟಾಯಿತು.

ಪೂರ್ತಿ ಓದಿ

7:37 AM

ಹಿಂದಿ ಹೇರಲ್ಲ, ಕರ್ನಾಟಕದ ಜತೆ ಕನ್ನಡದಲ್ಲೇ ನನ್ನಿಂದ ಪತ್ರ ವ್ಯವಹಾರ : ಅಮಿತ್‌ ಶಾ ಮಹತ್ವದ ಘೋಷಣೆ!

ಕೇಂದ್ರ ಸಚಿವ ಅಮಿತ್ ಶಾ ಅವರು ಡಿಸೆಂಬರ್‌ನಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೊಂದಿಗೆ ಅಧಿಕೃತ ಸಂವಹನವನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ರಾಜಭಾಷಾ ವಿಭಾಗದಲ್ಲಿ ಹೊಸ ಇಲಾಖೆಯನ್ನು ತೆರೆಯಲಾಗಿದೆ.

ಪೂರ್ತಿ ಓದಿ

7:37 AM

ಆಧಾರ್ ಕೊಡದೇ ಹೋಟೆಲ್‌ ಕೆಲಸಕ್ಕೆ ಸೇರಿದ್ದ ಅಬ್ದುಲ್ ರೆಹಮಾನ್, ಬ್ಯಾಗ್ ತೆಗೆದು ನೋಡಿದಾಗ ಶಾಕ್, ಸ್ಫೋಟಕ ಪತ್ತೆ,, ಏನಿತ್ತು ಸಂಚು?

ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸಗಾರನೊಬ್ಬ ತನ್ನ ಬ್ಯಾಗಿನಲ್ಲಿ ಸ್ಫೋಟಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆತನಿಂದ ಜಪ್ತಿ ಮಾಡಲಾದ ಸ್ಫೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪೂರ್ತಿ ಓದಿ

7:36 AM

ಪಾಕ್ ಇಫ್ತಾರ್ ಕೂಟದಲ್ಲಿ ಮಣಿಶಂಕರ್ ಅಯ್ಯರ್ ಭಾಗಿ, ಮೋದಿಯವರನ್ನ ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ನಿಂದ ದೇಶ ವಿರೋಧಿ ಕೆಲಸ?

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ದೂತಾವಾಸ ಕಚೇರಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಯ್ಯರ್ ಅವರ ಪಾಕ್ ಪ್ರೀತಿಯನ್ನು ಬಿಜೆಪಿ ಖಂಡಿಸಿದೆ.

ಪೂರ್ತಿ ಓದಿ

7:36 AM

'ಮೆರಿಟ್‌ ಆಧಾರದಲ್ಲಿ ಶಿಕ್ಷಣ, ಉದ್ಯೋಗ ತಪ್ಪು, ಇದು ಮೇಲ್ವರ್ಗದವವರಿಗೆ ಅನುಕೂಲ ಆಗುವಂತಿದೆ': ರಾಹುಲ್ ಗಾಂಧಿ

Rahul gandhi on merit system: ಮೆರಿಟ್ ವ್ಯವಸ್ಥೆಯನ್ನು ಟೀಕಿಸಿದ್ದು, ಇದು ಮೇಲ್ವರ್ಗದವರಿಗೆ ಮಾತ್ರ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ. ಜಾತಿ ಗಣತಿಯು ಅಸಮಾನತೆ ಬಯಲಿಗೆಳೆಯಲು ಅವಶ್ಯಕ ಎಂದಿದ್ದಾರೆ.

ಪೂರ್ತಿ ಓದಿ

7:36 AM

ಮೋದಿ ವಿದೇಶ ಪ್ರವಾಸ: 2.5 ವರ್ಷಗಳಲ್ಲಿ ₹258 ಕೋಟಿ ಖರ್ಚು, ಯಾವ ದೇಶಗಳಿಗೆ ಎಷ್ಟು ಖರ್ಚು ಇಲ್ಲಿದೆ ವಿವರ!

ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ 38 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 258 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಮೆರಿಕ ಪ್ರವಾಸಕ್ಕೆ ಅತಿ ಹೆಚ್ಚು ಹಣ ಖರ್ಚಾಗಿದೆ.

ಪೂರ್ತಿ ಓದಿ

7:36 AM

ಹನಿಟ್ರ್ಯಾಪ್ ಪ್ರಕರಣ: ಯಾರೇ ಆಗಿದ್ದರೂ ಸುಮ್ಮನೆ ಬಿಡೋಲ್ಲ, ಮಟ್ಠಹಾಕುತ್ತೇವೆ, ಸಿಎಂ ಖಡಕ್ ವಾರ್ನಿಂಗ್!

Chaos in Karnataka assembly : ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಲಿ, ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ

7:36 AM

ಹನಿಟ್ರ್ಯಾಪ್‌, ಮುಸ್ಲಿಂ ಮೀಸಲು ಬಗ್ಗೆ ಅಸೆಂಬ್ಲಿಯಲ್ಲಿ ಗದ್ದಲ; 18 ಶಾಸಕರಿಗೆ ಸಸ್ಪೆಂಡ್, ಗಲಾಟೆ ಶುರುವಾಗಿದ್ದು ಹೇಗೆ?

ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಹಗರಣ ಮತ್ತು ಮುಸ್ಲಿಂ ಮೀಸಲಾತಿ ವಿರೋಧಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳವರೆಗೆ ಅಮಾನತು ಮಾಡಲಾಗಿದೆ.

ಪೂರ್ತಿ ಓದಿ

11:37 PM IST:

ಕೆಕೆಆರ್ ವಿರುದ್ದ ಚೇಸಿಂಗ್ ಮಾಡುತ್ತಿರುವ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ನೇರವಾಗಿ ಬಂದು ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ಘಟನೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಪೂರ್ತಿ ಓದಿ

10:54 PM IST:

ಕೆಕೆಆರ್ ವಿರುದ್ಧದ ಐಪಿಎಲ್ 2025 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಹಲವು ಆವೃತ್ತಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಈ ಸಲಾ ನಮ್ದೆ  ಆಟ, ನಮ್ಗೆ ಕಿರೀಟ.

ಪೂರ್ತಿ ಓದಿ

10:46 PM IST:

ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತಗಳ ಸರಣಿಗೆ ಕಾರಣವಾಗುತ್ತಿದೆ. ಒಂದೇ ವಾರದ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಇಬ್ಬರು ಯುವಕರು ಸೇರಿ ನಾಲ್ಕು ಮೃತದೇಹ ಪತ್ತೆಯಾಗಿದೆ. 

ಪೂರ್ತಿ ಓದಿ

10:22 PM IST:

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಮಾಪ್ತಿ ವರದಿಯನ್ನು ಸಿಬಿಐ ಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಸುಶಾಂತ್ ಸಾವಿಗೆ ಕಾರಣವನ್ನು ಹೇಳಿದೆ. ಅಷ್ಟಕ್ಕೂ ನಿಗೂಢ ಪ್ರಕರಣ ಕುರಿತು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದ್ದೇನು?

ಪೂರ್ತಿ ಓದಿ

10:05 PM IST:

ಈ ಮೂರು ನುಡಿ ಮುತ್ತುಗಳನ್ನು ರಾವಣ ತಾನು ಸಾಯುವುದಕ್ಕಿಂತ ಮುಂಚೆ ಹೇಳಿದ್ದಾನೆ ಎನ್ನಲಾಗಿದೆ. ಈ ಮೂರೂ ಮಾತುಗಳಿಗೆ ಸಾಕಷ್ಟು ಉತ್ತಮ ಅರ್ಥವಿದೆ. ಜೊತೆಗೆ, ಸಾಯುವ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ.. ಇಲ್ಲಿ.. 

ಪೂರ್ತಿ ಓದಿ

9:24 PM IST:

ಐಪಿಎಲ್ 2025 ಟೂರ್ನಿಯ ಉದ್ಘಟನಾ ಪಂದ್ಯದಲ್ಲಿ ಕೆಕೆಆರ್ 174 ರನ್ ಸಿಡಿಸಿದೆ. ಇದೀಗ ಗೆಲುವಿಗೆ ಆರ್‌ಸಿಬಿ 175 ರನ್ ಚೇಸ್ ಮಾಡಬೇಕಿದೆ. ಇದೀಗ ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಪಕ್ಕಾ ಎನ್ನುತ್ತಿದೆ.

ಪೂರ್ತಿ ಓದಿ

8:40 PM IST:

2025ರ ಬಿಲೇನಿಯರ್ ಪೈಕಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ವಿಶ್ವದ ಹಲವು ದಿಗ್ಗಜರ ಸಂಪತ್ತು ಕುಸಿತ ಕಂಡಿದೆ. ಆದರೆ ಈ 94 ವರ್ಷದ ಉದ್ಯಮಿಯ ಸಂಪತ್ತು ಬರೋಬ್ಬರಿ 21.5 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. 

ಪೂರ್ತಿ ಓದಿ

8:02 PM IST:

ರಾಜಸ್ಥಾನದಲ್ಲಿ ಪೇಪರ್ ಲೀಕ್ ಪ್ರಕರಣದಲ್ಲಿ ಭಾರಿ ಕ್ರಮ! 86 ಸರ್ಕಾರಿ ನೌಕರರ ವಜಾ, 189 ಜನರ ಮೇಲೆ ತನಿಖೆ ಮುಂದುವರೆದಿದೆ. ಈ ವಂಚನೆ ಹೇಗೆ ಬಯಲಾಯಿತು ಎಂದು ತಿಳಿಯಿರಿ.

ಪೂರ್ತಿ ಓದಿ

7:51 PM IST:

ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಹೊಸತನದ ಗಾಳಿ ಬೀಸಬೇಕಾದರೆ ಯುವಕರು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. 

ಪೂರ್ತಿ ಓದಿ

7:47 PM IST:

ಇಡಿ ಚೋಕ್ಸಿ ಸಹೋದರರ ವಿರುದ್ಧ ಕಪ್ಪು ಹಣದ ಪ್ರಕರಣದಲ್ಲಿ ದೂರು ದಾಖಲಿಸಿದೆ. ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಒಂದು ಆಫ್‌ಶೋರ್ ಘಟಕವನ್ನು ಹೊಂದಿದ್ದಾರೆ ಮತ್ತು ಸಿಂಗಾಪುರದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂಬುದು ಆರೋಪ.

ಪೂರ್ತಿ ಓದಿ

7:43 PM IST:

ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್‌ಗೆ ಬಾಲಿವುಡ್ ಕಂಗಾಲಾಗಿದೆ. ಘಟಾನುಘಟಿ ಸ್ಟಾರ್ಸ್ ರಣಬೀರ್ ಕಪೂರ್, ಅಲಿಯಾ ಭಟ್, ವಿಕ್ಕಿ ಕೌಶಾಲ್ ಇದೀಗ ಆತಂಕಗೊಂಡಿದ್ದಾರೆ.

ಪೂರ್ತಿ ಓದಿ

7:24 PM IST:

'ಕೋಲ' ಹೆಸರಿನ ಈ ಡಾಕ್ಯುಮೆಂಟರಿ ಬಿಡುಗಡೆ ಬಳಿಕ ಬಹಳಷ್ಟು ಮೆಚ್ಚುಗೆ ಗಳಿಸುತ್ತಿದೆ. ಕಾರಣ, ರಿಷಬ್ ಶೆಟ್ಟಿಯವರ 'ಕಾಂತಾರ'ದ ಮಾದರಿಯಲ್ಲೇ ಇದರಲ್ಲಿ ಕೂಡ ದೈವಾರಾಧನೆ ಬಗ್ಗೆ ಹೇಳಲಾಗಿದೆ. ಜೊತೆಗೆ, ಇದು ಸಿನಿಮಾ..

ಪೂರ್ತಿ ಓದಿ

7:23 PM IST:

ಐಪಿಎಲ್ 2025 ಟೂರ್ನಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಪೂರ್ತಿ ಓದಿ

7:08 PM IST:

ಆಧುನಿಕ ಭರಾಟೆಯ ನಡುವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಕಣ್ಮರೆಯಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಪೂರ್ತಿ ಓದಿ

7:01 PM IST:

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು. ವಿಧೇಯಕ ಮಂಡಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯಿಂದ ಅನೇಕರು ಸಚಿವರಾಗಿದ್ದಾರೆ. 

ಪೂರ್ತಿ ಓದಿ

6:58 PM IST:

ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದು, ಆಲಿಕಲ್ಲು ಮಳೆಯಾಗಿದೆ. ಯಲಹಂಕದಲ್ಲಿ ರಸ್ತೆಗಳು ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ಗೋಡೆ ಕುಸಿದಿದೆ.

ಪೂರ್ತಿ ಓದಿ

6:30 PM IST:

ಇದೇ ಮಾರ್ಚ್​ 29ರಂದು ಶನಿ ಗ್ರಹವು ತನ್ನ ದಾರಿಯನ್ನು ಬದಲಿಸಿದ್ದಾನೆ. ಯಾರಿಗೆ ಸಾಡೇಸಾತಿ ಆರಂಭವಾಗಲಿದೆ? ಯಾರು ನಿರಾಳರಾಗಲಿದ್ದಾರೆ? ಯಾರಿಗೆ ಕಾದಿದೆ ಗ್ರಹಚಾರ? ಇಲ್ಲಿದೆ ಡಿಟೇಲ್ಸ್​
 

ಪೂರ್ತಿ ಓದಿ

5:48 PM IST:

2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹರ್ಭಜನ್ ಸಿಂಗ್ ಈ ಎರಡು ತಂಡಗಳನ್ನು ಭಾರತ-ಪಾಕಿಸ್ತಾನ ತಂಡಗಳಿಗೆ ಹೋಲಿಸಿದ್ದಾರೆ.

ಪೂರ್ತಿ ಓದಿ

5:43 PM IST:

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್​​ಗೆ ಬೇಸರದ ಸುದ್ದಿ ಇದೆ. ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ಟಾಕ್ಸಿಕ್ ನೋಡಲು ಇನ್ನೂ ಒಂದು ವರ್ಷ..

ಪೂರ್ತಿ ಓದಿ

5:42 PM IST:

ನಟ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾದ ರಿಲೀಸ್‌ ದಿನಾಂಕವನ್ನು ಸೋಶಿಯಲ್‌ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಪೂರ್ತಿ ಓದಿ

5:38 PM IST:

 ಮೃತಪಟ್ಟ ಬಳಿಕ 12, 14... ಹೀಗೆ ಕೆಲ ದಿನಗಳ ಬಳಿಕ ಅವರ ಇಷ್ಟದ ಆಹಾರಗಳನ್ನು ಇಡುವ ಸಂಪ್ರದಾಯವಿದೆ. ಆಗ ಏನಾಗುತ್ತೆ? ಆಹಾರ ಸೇವನೆ ಮಾಡ್ತಾರಾ ಎನ್ನುವ ಪ್ರಶ್ನೆಗೆ ಪ್ರಯೋಗವೊಂದನ್ನು ಮಾಡಿನೋಡುವಂತೆ ಹೇಳಿದ್ದಾರೆ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​.
 

ಪೂರ್ತಿ ಓದಿ

5:28 PM IST:

ಹಾಲಿವುಡ್‌ನಿಂದ ಕಾಪಿ ಹೊಡೆದ್ರೂ ಪರ್ವಾಗಿಲ್ಲ, ಆದರೆ ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಈ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರೆ. ಕಾರಣ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಈ ಹಾಡು.
 

ಪೂರ್ತಿ ಓದಿ

5:06 PM IST:

ಪ್ರೇಮಕತೆಯಲ್ಲಿ ಒಂದು ಮಹಾ ತಿರುವು ಎದುರಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಶುರು ಮಾಡುತ್ತಾರೆ. ಆ ತನಿಖೆಯಲ್ಲಿ ಅಚ್ಚರಿದಾಯಕ ಅಂಶಗಳೆಲ್ಲಾ ಎದುರಾಗುತ್ತಾ ಹೋಗುತ್ತವೆ.  ಇಲ್ಲಿ ಪ್ರೇಮದ ನವಿರುತನವಿದೆ. 

ಪೂರ್ತಿ ಓದಿ

4:46 PM IST:

ಈ ಕತೆ ಆರಂಭವಾಗುವುದು ಹಳ್ಳಿಯ ನಾಲ್ವರು ಗೆಳೆಯರಿಂದ. ಅವರ ಪೋಕರಿತನ, ಪ್ರೇಮ ಪ್ರಸಂಗಗಳು, ಒದ್ದಾಟಗಳು, ಹಾರಾಟಗಳು, ಒಟ್ಟಾರೆ ಹಗುರ ಸನ್ನಿವೇಶಗಳು ಕತೆಯನ್ನು ಮಧ್ಯಂತರಕ್ಕೆ ತಲುಪಿಸುತ್ತವೆ.

ಪೂರ್ತಿ ಓದಿ

4:43 PM IST:

ಬಂಟಿ ನಿನ್ನ ಸಾಬೂನ್ ಸ್ಲೋನಾ ಎಂದು ಜಾಹೀರಾತು ಮೂಲಕ ಎಲ್ಲರ ಮನೆಗಿದ್ದ ಹುಡುಗಿ ಇದೀಗ ಹಾಟ್ ಬ್ಯೂಟಿಯಾಗಿ ಹಲವು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅವನೀತ್ ಇದೀಗ ಸೆಟ್‌ನಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಪೂರ್ತಿ ಓದಿ

3:51 PM IST:

ಈ ಜೀರಿಗೆಯನ್ನು ಕುದಿಸಿ ನೀರನ್ನು ಮುಖ್ಯವಾಗಿ ಈ ಬೇಸಿಗೆಯಲ್ಲಿ ಒಂದು ತಿಂಗಳು ತೆಗೆದುಕೊಂಡರೆ.. ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಈಗ ತಿಳಿಯೋಣ..

ಪೂರ್ತಿ ಓದಿ

3:29 PM IST:

ಐಪಿಎಲ್ 2025ರ ಪ್ಲೇ ಆಫ್ ಪ್ರವೇಶಿಸುವ ತಂಡಗಳ ಬಗ್ಗೆ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ವಿರೇಂದ್ರ ಸೆಹ್ವಾಗ್ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದಿಲ್ಲ ಎಂದಿದ್ದಾರೆ, ಆದರೆ ಹರ್ಷಾ ಭೋಗ್ಲೆ ಆರ್‌ಸಿಬಿ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

3:26 PM IST:

ಭಾರತೀಯ ರೈಲ್ವೆಯಲ್ಲಿ LHB ಮತ್ತು ICF ಕೋಚ್‌ಗಳು ಬಳಕೆಯಲ್ಲಿದ್ದು, ಇವೆರಡರ ನಡುವೆ ಹಲವು ವ್ಯತ್ಯಾಸಗಳಿವೆ. LHB ಕೋಚ್‌ಗಳು ಸುರಕ್ಷತೆ, ವೇಗ ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದು, ICF ಕೋಚ್‌ಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ.

ಪೂರ್ತಿ ಓದಿ

3:06 PM IST:

ಕೌನ ಬನೇಗಾ ಕರೋಡ್‌ಪತಿ? ಈ ರಿಯಾಲಿಟಿ ಶೋ ಮೂಲಕ ಸ್ಪರ್ಧಿಗಳು ಯಾರೆಲ್ಲಾ ಕೋಟ್ಯಾಧೀಶರಾಗಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ಹೋಸ್ಟ್ ಅಮಿತಾಬ್ ಬಚ್ಚನ್ ನಿಜಕ್ಕೂ ಕರೋಡ್‌ಪತಿಯಾಗಿದ್ದಾರೆ. ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಕೆಬಿಸಿ16ನೇ ಒಂದೇ ಆವತ್ತಿ ಮೂಲಕ ಅಮಿತಾಬ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

ಪೂರ್ತಿ ಓದಿ

2:39 PM IST:

ಐಪಿಎಲ್ 2025ರ ಕಾಮೆಂಟರಿ ತಂಡದಿಂದ ಇರ್ಫಾನ್ ಪಠಾಣ್ ಅವರನ್ನು ಕೈಬಿಡಲಾಗಿದೆ. ಕೆಲವು ಆಟಗಾರರ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇದೀಗ ಇರ್ಫಾನ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಪೂರ್ತಿ ಓದಿ

1:19 PM IST:

ಸಚಿವ ಎಂಬಿ ಪಾಟೀಲ್ ಅವರು ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಒಂದು ಕೆಟ್ಟ ಚಾಳಿ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

1:09 PM IST:

 ಷೇರು ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಾಣುತ್ತಿದೆ. ವಿದೇಶಿ ಹೂಡಿಕೆ ಹೆಚ್ಚಳದಿಂದ ಹೂಡಿಕೆಗೂ ಅವಕಾಶ ಸಿಗುತ್ತಿದೆ. ಈ ಚೇತರಿಕೆಯ ವಾತಾವರಣದಲ್ಲಿ, ಬ್ರೋಕರೇಜ್ ಹೌಸ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡಬಲ್ಲ 10 ಫಂಡಮೆಂಟಲ್‌ ಸ್ಟ್ರಾಂಗ್‌ ಆಗಿರುವ ಷೇರುಗಳನ್ನು ಹೆಸರಿಸಿದ್ದಾರೆ.

ಪೂರ್ತಿ ಓದಿ

12:59 PM IST:

ಟೊಯೋಟಾ ಮೋಟಾರ್ ಕಾರ್ಪೋರೇಷನ್ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಇದು ಭಾರತದಲ್ಲಿ ಟೊಯೋಟಾದ ಮೊದಲ ಆರ್‌ & ಡಿ ಘಟಕವಾಗಿದ್ದು, 2027ರ ವೇಳೆಗೆ ಇಂಜಿನಿಯರ್‌ಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ.

ಪೂರ್ತಿ ಓದಿ

12:54 PM IST:

ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸುವ ಮುನ್ನ ದಾಖಲೆ ಸಂಗ್ರಹಿಸುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ. ಪೂರ್ವಾನುಮತಿ ಪಡೆಯದೆ ತನಿಖೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪೂರ್ತಿ ಓದಿ

12:23 PM IST:

ಸಚಿವ ರಾಜಣ್ಣ ಹನಿಟ್ರ್ಯಾಪ್ ಕುರಿತು ಮಾತನಾಡಿದ ಮಹದೇವಪ್ಪ, ಹನಿಟ್ರ್ಯಾಪ್ ಮಾಡುವವರಿಗೆ ಸಿಎಂ ಪರ ವಿರುದ್ಧ ಎಂಬುದು ಇರೋಲ್ಲ. ಸಿದ್ದರಾಮಯ್ಯ ಅವರೇ ಮುಂದಿನ ಮೂರು ಬಜೆಟ್ ಮಂಡಿಸುತ್ತಾರೆ ಎಂದರು. ಹನಿ ಟ್ರ್ಯಾಪ್ ಮಾಡೋರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಪೂರ್ತಿ ಓದಿ

12:20 PM IST:

ಕೆ.ಎಲ್.ರಾಹುಲ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದ್ದು, ಲಖನೌ ತಂಡಕ್ಕೆ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ರಾಯಲ್ಸ್‌ನ ಆರಂಭಿಕ 3 ಪಂದ್ಯಗಳಿಗೆ ಸಂಜು ಸ್ಯಾಮ್ಸನ್‌ ಬದಲು ರಿಯಾನ್‌ ಪರಾಗ್‌ ನಾಯಕತ್ವ ವಹಿಸಲಿದ್ದಾರೆ.

ಪೂರ್ತಿ ಓದಿ

12:07 PM IST:

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15,568 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲಾಗಿದೆ ಎಂದು ದೂರಲಾಗಿದೆ.

ಪೂರ್ತಿ ಓದಿ

11:51 AM IST:

ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಬಂದ್ ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

11:24 AM IST:

ಕರ್ನಾಟಕದ ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದೆ.

ಪೂರ್ತಿ ಓದಿ

11:22 AM IST:

ಮರಾಠಿಗರ ಕನ್ನಡ ವಿರೋಧಿ ನೀತಿ ಖಂಡಿಸಿ ವಾಟಾಳ್ ನಾಗರಾಜ್ ಕರೆ ನೀಡಿದ ಕರ್ನಾಟಕ ಬಂದ್ ಇಂದು. ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಚಿತ್ರಮಂದಿರಗಳು ಬೆಂಬಲ ಸೂಚಿಸಿವೆ. ಅಗತ್ಯ ಸೇವೆಗಳು ಲಭ್ಯವಿರುತ್ತವೆ.

ಪೂರ್ತಿ ಓದಿ

10:57 AM IST:

ನೀರಿನ ಬಗ್ಗೆ ಸತ್ಯಗಳು: ವಿಶ್ವ ಜಲ ದಿನದಂದು ನೀರಿನ ಬಗ್ಗೆ ಕೆಲವು ಭಯಾನಕ ಸತ್ಯಗಳನ್ನು ತಿಳಿಯಿರಿ. ನೀರಿನ ಕೊರತೆಯಿಂದ ಸಾವುಗಳು ಮತ್ತು ಹವಾಮಾನ ಬದಲಾವಣೆಯಂತಹ ಅಪಾಯಗಳು ಹೆಚ್ಚುತ್ತಿವೆ.

ಪೂರ್ತಿ ಓದಿ

10:44 AM IST:

17 ವರ್ಷಗಳ ಬಳಿಕ ಮತ್ತೆ RCB ಮತ್ತು KKR ತಂಡಗಳು IPL ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಯಾರಿಗೆ ಗೆಲುವು? ಉದ್ಘಾಟನಾ ಸಮಾರಂಭದ ವಿಶೇಷತೆಗಳೇನು?

ಪೂರ್ತಿ ಓದಿ

10:25 AM IST:

ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿದ್ದ ನೀಲಿ ಹಕ್ಕಿ ಲೋಗೋವನ್ನು $34,375 ಗೆ ಹರಾಜು ಮಾಡಲಾಗಿದೆ. ಎಲೋನ್ ಮಸ್ಕ್ ಟ್ವಿಟರ್ ಅನ್ನು 'ಎಕ್ಸ್' ಎಂದು ಬದಲಾಯಿಸಿದ ನಂತರ ಈ ಲೋಗೋವನ್ನು ಮಾರಾಟ ಮಾಡಲಾಯಿತು.

ಪೂರ್ತಿ ಓದಿ

10:23 AM IST:

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂಬ ಹೇಳಿಕೆಗೆ ರೈತ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕ್ಷಮೆ ಕೋರಲು ಸೋಮವಾರದವರೆಗೆ ಗಡುವು ನೀಡಿದ್ದು, ಇಲ್ಲದಿದ್ದರೆ ಛತ್ರಿ ಚಳವಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪೂರ್ತಿ ಓದಿ

10:01 AM IST:

ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಸಮರ ಸಾರಿದ್ದಾರೆ. ಭ್ರಷ್ಟಾಚಾರವನ್ನು ಗೆದ್ದಲಿಗೆ ಹೋಲಿಸಿ, ಅದನ್ನು ನಿರ್ನಾಮ ಮಾಡಲು ಕರೆ ನೀಡಿದ್ದಾರೆ. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ

9:53 AM IST:

ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ನೀಡಲು ನಿರಾಕರಿಸಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಬಳಿಕ ಹಣ ಬಿಡುಗಡೆ ಮಾಡಲಾಯಿತು.

ಪೂರ್ತಿ ಓದಿ

9:17 AM IST:

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯ ನಿರ್ಮಿಸಲು ಘೋಷಿಸಿದ್ದಾರೆ. ತಿರುಪತಿ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಲು ಮತ್ತು ಸೆವೆನ್ ಹಿಲ್ಸ್ ಬಳಿ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಪೂರ್ತಿ ಓದಿ

9:13 AM IST:

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 43 ಲಕ್ಷ ರೂ. ಮೌಲ್ಯದ 70 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರೆದಿದೆ.

ಪೂರ್ತಿ ಓದಿ

8:59 AM IST:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಯೂನಿಯನ್‌ಗಳು ಕರೆ ನೀಡಿದ್ದ ಮುಷ್ಕರವನ್ನು ಮುಂದೂಡಲಾಗಿದೆ. ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪೂರ್ತಿ ಓದಿ

7:58 AM IST:

Karnataka assembly: ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿದೆ. ಶಾಸಕರ ವೇತನ 40 ಸಾವಿರದಿಂದ 80 ಸಾವಿರಕ್ಕೆ, ಮುಖ್ಯಮಂತ್ರಿ ವೇತನ 75 ಸಾವಿರದಿಂದ 1.50 ಲಕ್ಷಕ್ಕೆ ಹೆಚ್ಚಳವಾಗಿದೆ.

ಪೂರ್ತಿ ಓದಿ

7:37 AM IST:

ವಿಧಾನಮಂಡಲದಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು, ಸದನದಲ್ಲಿ ಗದ್ದಲ ಉಂಟಾಯಿತು.

ಪೂರ್ತಿ ಓದಿ

7:37 AM IST:

ಕೇಂದ್ರ ಸಚಿವ ಅಮಿತ್ ಶಾ ಅವರು ಡಿಸೆಂಬರ್‌ನಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೊಂದಿಗೆ ಅಧಿಕೃತ ಸಂವಹನವನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ರಾಜಭಾಷಾ ವಿಭಾಗದಲ್ಲಿ ಹೊಸ ಇಲಾಖೆಯನ್ನು ತೆರೆಯಲಾಗಿದೆ.

ಪೂರ್ತಿ ಓದಿ

7:37 AM IST:

ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸಗಾರನೊಬ್ಬ ತನ್ನ ಬ್ಯಾಗಿನಲ್ಲಿ ಸ್ಫೋಟಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆತನಿಂದ ಜಪ್ತಿ ಮಾಡಲಾದ ಸ್ಫೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪೂರ್ತಿ ಓದಿ

7:36 AM IST:

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ದೂತಾವಾಸ ಕಚೇರಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಯ್ಯರ್ ಅವರ ಪಾಕ್ ಪ್ರೀತಿಯನ್ನು ಬಿಜೆಪಿ ಖಂಡಿಸಿದೆ.

ಪೂರ್ತಿ ಓದಿ

7:36 AM IST:

Rahul gandhi on merit system: ಮೆರಿಟ್ ವ್ಯವಸ್ಥೆಯನ್ನು ಟೀಕಿಸಿದ್ದು, ಇದು ಮೇಲ್ವರ್ಗದವರಿಗೆ ಮಾತ್ರ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ. ಜಾತಿ ಗಣತಿಯು ಅಸಮಾನತೆ ಬಯಲಿಗೆಳೆಯಲು ಅವಶ್ಯಕ ಎಂದಿದ್ದಾರೆ.

ಪೂರ್ತಿ ಓದಿ

7:36 AM IST:

ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ 38 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 258 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಮೆರಿಕ ಪ್ರವಾಸಕ್ಕೆ ಅತಿ ಹೆಚ್ಚು ಹಣ ಖರ್ಚಾಗಿದೆ.

ಪೂರ್ತಿ ಓದಿ

7:36 AM IST:

Chaos in Karnataka assembly : ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಲಿ, ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ

7:36 AM IST:

ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಹಗರಣ ಮತ್ತು ಮುಸ್ಲಿಂ ಮೀಸಲಾತಿ ವಿರೋಧಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳವರೆಗೆ ಅಮಾನತು ಮಾಡಲಾಗಿದೆ.

ಪೂರ್ತಿ ಓದಿ