LIVE NOW
Published : Feb 11, 2026, 06:49 AM ISTUpdated : Feb 11, 2026, 10:07 AM IST

Karnataka News Live: Koppal - ಗವಿಸಿದ್ದೇಶ್ವರ ಮಠದ ಶಾಖೆಗಳಿಗೆ ಉತ್ತರಾಧಿಕಾರಿಗಳ ನೇಮಕ; ಬಿಸರಳ್ಳಿ, ಕಡಲಬಾಳು ಮಠಕ್ಕೆ ಪೀಠಾಧಿಪತಿಗಳ ಆಯ್ಕೆ

ಸಾರಾಂಶ

ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಹೈಕಮಾಂಡ್‌ ನಾಯಕರು ವಿಳಂಬ ಮಾಡದೇ ತಮ್ಮ ನಿರ್ಣಯ ತಿಳಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಆರ್‌.ವಿ.ದೇಶಪಾಂಡೆ ಆಗ್ರಹಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ಅಧಿಕಾರ ಹಂಚಿಕೆ ಕುರಿತಂತೆ ಹೈಕಮಾಂಡ್‌ ನಿರ್ಣಯವೇ ಅಂತಿಮ ಎಂದು ಸಿಎಂ ಮತ್ತು ಡಿಸಿಎಂ ತಿಳಿಸಿದ್ದಾರೆ. ಹೀಗಾಗಿ ವಿಳಂಬ ಮಾಡದೇ ಹೈಕಮಾಂಡ್‌ ನಾಯಕರು ನಿರ್ಣಯ ಹೇಳಬೇಕು. ಗೊಂದಲ ಹೆಚ್ಚುವಂತಾಗಬಾರದು. ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ನಿರ್ಧಾರ ಮಾಡಬೇಕು ಎಂದರು. 

ಯಾವುದೇ ವಿಚಾರವಾದರೂ ಏನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎಂಬುದನ್ನು ಮಾತನಾಡುವ ವ್ಯಕ್ತಿಗೆ ತಿಳಿದಿರಬೇಕು. ಯಾವ ರೀತಿ ಮಾತನಾಡಬೇಕು ಎಂದು ನಾವು ಹೇಳಲು ಆಗುವುದಿಲ್ಲ. ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಆಗುವ ಅವಶ್ಯಕತೆಯೇ ಇಲ್ಲ ಎಂದರು.

10:07 AM (IST) Feb 11

Koppal - ಗವಿಸಿದ್ದೇಶ್ವರ ಮಠದ ಶಾಖೆಗಳಿಗೆ ಉತ್ತರಾಧಿಕಾರಿಗಳ ನೇಮಕ; ಬಿಸರಳ್ಳಿ, ಕಡಲಬಾಳು ಮಠಕ್ಕೆ ಪೀಠಾಧಿಪತಿಗಳ ಆಯ್ಕೆ

Koppal Gavisiddheshwara Mutt ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಬಿಸರಳ್ಳಿ ಹಾಗೂ ಕಡಲಬಾಳು ಶಾಖಾ ಮಠಗಳಿಗೆ ನೂತನ ಪೀಠಾಧಿಪತಿಗಳನ್ನು ನೇಮಿಸಲಾಗಿದೆ.

Read Full Story

09:12 AM (IST) Feb 11

ತಮನ್ನಾ ಬರ್ತಿದ್ದಂತೆ 22 ವರ್ಷ ಹಿಂದಿನ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ವೈರಲ್

ನಟಿ ತಮನ್ನಾ ಭಾಟಿಯಾ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್‌ನ ಹೊಸ ರಾಯಭಾರಿಯಾಗಿದ್ದಾರೆ. ಈ ನೇಮಕಾತಿ ಮತ್ತು ಅವರ ಸಂಭಾವನೆ ಚರ್ಚೆಗೆ ಕಾರಣವಾಗಿದ್ದು, ಇದೇ ವೇಳೆ 22 ವರ್ಷಗಳ ಹಿಂದಿನ ಸೋಪಿನ ಕಪ್ಪು-ಬಿಳುಪು ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

09:09 AM (IST) Feb 11

Promise Day - ನಿಮ್ಮ ಪಾರ್ಟನರ್‌ಗೆ ಎಂದಿಗೂ ಈ ಮಾತುಗಳನ್ನು ಕೊಡಬೇಡಿ!

Promise Day ಫೆಬ್ರವರಿ 11ರಂದು ಪ್ರಾಮಿಸ್ ಡೇ ಆಚರಿಸಲಾಗುತ್ತದೆ. ಈ ದಿನ ಪ್ರೀತಿ ಮತ್ತು ಬದ್ಧತೆಯನ್ನು ಸಂಭ್ರಮಿಸಲಾಗುತ್ತದೆ. ಆದರೆ, ನಿಮ್ಮ ಸಂಗಾತಿಗೆ ಸುಳ್ಳು ಅಥವಾ ಈಡೇರಿಸಲಾಗದ ಮಾತುಗಳನ್ನು ಕೊಡಬೇಡಿ. ಬದಲಿಗೆ, ಸಂಬಂಧವನ್ನು ಗಟ್ಟಿಮಾಡುವಂತಹ ನಿಜವಾದ ಮಾತುಗಳನ್ನು ನೀಡಿ.

Read Full Story

08:50 AM (IST) Feb 11

ಪೊಲೀಸರ ಕಣ್ತಪ್ಪಿಸಿ ವಿಧಾನಸೌಧ ಸೇರಿದ್ವಾ ಬಂಗಾರದ ಒಡವೆಗಳು? ಕಳ್ಳ ಸಿಕ್ಕಿಬಿದ್ದರೂ ಬಗೆಹರಿಯದ ನಿಗೂಢ ಪ್ರಶ್ನೆಗಳು!

ಬೆಂಗಳೂರಿನ ವಿಧಾನಸೌಧದಲ್ಲಿನ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮರೆತುಹೋದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಗ್ರೂಪ್ ಡಿ ನೌಕರನನ್ನು ಬಂಧಿಸಿರುವ ಪೊಲೀಸರು, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Read Full Story

08:23 AM (IST) Feb 11

Haveri - ಅಂಕಲ್ ಮಮ್ಮಿಗೆ ಫೋನ್ ಕೊಡಿ - ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!

ಹಾವೇರಿಯ ರಾಣೆಬೆನ್ನೂರು ತಾಲೂಕಿನಲ್ಲಿ, ಇಬ್ಬರು ಮಕ್ಕಳ ತಾಯಿಯಾದ ಮಹಿಳೆಯೊಬ್ಬಳು 2.5 ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದು ಯುವಕನೊಬ್ಬನನ್ನು ಮದುವೆಯಾಗಿದ್ದಾಳೆ. ಮದುವೆಯಾದ ವಾರದಲ್ಲೇ ಆಕೆಯ ಮಕ್ಕಳು ಫೋನ್ ಮಾಡಿದಾಗ ವಂಚನೆ ಬಯಲಾಗಿದ್ದು, ಪರಾರಿಯಾಗಲು ಯತ್ನಿಸಿದ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

08:11 AM (IST) Feb 11

'ಸಾರಾಯಿ ಕುಡಿಬೇಡ ಅಮ್ಮ..' ಎಂದಿದ್ದಕ್ಕೆ ಮಗಳನ್ನೇ ಕೊಂದ ತಾಯಿ!

ಯಾದಗಿರಿಯ ರಾಜೀವಗಾಂಧಿ ನಗರದಲ್ಲಿ, ಮದ್ಯಪಾನ ಮಾಡುವುದನ್ನು ವಿರೋಧಿಸಿದ್ದಕ್ಕೆ ತಾಯಿಯೊಬ್ಬಳು ತನ್ನ 11 ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಮಗಳ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದು, ಪೊಲೀಸ್ ತನಿಖೆಯ ವೇಳೆ ಕೊಲೆ ರಹಸ್ಯ ಬಯಲಾಗಿದೆ.
Read Full Story

08:00 AM (IST) Feb 11

ಮನೆಯೊಂದು ಮೂರು ಬಾಗಿಲಾದ ಮೈಸೂರು JDS - ಅಪ್ಪನ ವಿರುದ್ಧವೇ ಮಗ? GTDಗೆ HDK ಬಿಗ್‌ ಶಾಕ್!

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ, ಕುಮಾರಸ್ವಾಮಿಯವರು ಹೊಸ ಅಭ್ಯರ್ಥಿಯ ಸುಳಿವು ನೀಡಿದ್ದು, ಜಿ.ಟಿ.ಡಿ ಪುತ್ರ ಹರೀಶ್ ಗೌಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೆಡಿಎಸ್ ಟಿಕೆಟ್ ತಂದೆಗೋ ಅಥವಾ ಮಗನಿಗೋ ಎಂಬ ಕುತೂಹಲ ಮೂಡಿದೆ.

Read Full Story

07:41 AM (IST) Feb 11

Haveri - 'ಓದಿಕೊ' ಎಂದಿದ್ದಕ್ಕೆ ಮನನೊಂದ SSLC ವಿದ್ಯಾರ್ಥಿನಿ ದುರಂತ ಅಂತ್ಯ!

ಹಾವೇರಿ ಜಿಲ್ಲೆಯ ಮರೋಳ ಗ್ರಾಮದಲ್ಲಿ, ಪರೀಕ್ಷೆಯ ಒತ್ತಡ ಮತ್ತು ಪೋಷಕರ ಬುದ್ಧಿಮಾತಿನಿಂದ ಮನನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

Read Full Story

07:34 AM (IST) Feb 11

ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಬಿಎಂಆರ್‌ಸಿಎಲ್‌ನಲ್ಲಿ ಗೊಂದಲ- ಆದಾಯ ಸಾಕಾಗ್ತಿಲ್ಲ

ಮೆಟ್ರೋ ಪ್ರಯಾಣ ದರ ಶೇ.5ರಷ್ಟು ಹೆಚ್ಚಳಕ್ಕೆ ಸದ್ಯಕ್ಕೆ ತಡೆಬಿದ್ದಿದ್ದು ಜನತೆ ನಿರಾಳರಾಗಿದ್ದಾರೆ. ಆದರೆ, ದರ ಏರಿಕೆ ವಿಚಾರದಲ್ಲಿ ಆಡಳಿತಾತ್ಮಕ ದ್ವಂದ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿಲುಕಿದೆ.

Read Full Story

07:28 AM (IST) Feb 11

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ - ಹೊಸ ನಿಯಮದಲ್ಲೇನಿದೆ?

ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಅಶ್ಲೀಲ ಮತ್ತು ಮಾನಹಾನಿಕರ ಚಿತ್ರಗಳನ್ನು ರಚಿಸುವ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ‘ಯಾವುದೇ ಎಐ ಕಂಟೆಂಟ್‌ ಇದ್ದರೆ ‘ಎಐ’ ಎಂಬ ಲೇಬಲ್‌ ಕಡ್ಡಾಯವಾಗಿ ನಮೂದಿಸಬೇಕು.

Read Full Story

07:20 AM (IST) Feb 11

ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್‌ ಜಾಲ ಭೇದಿಸಿದ ಕರಾವಳಿ ಪಡೆ

ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಸಮುದ್ರ ಮತ್ತು ವಾಯು ಆಧರಿತ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್‌ ತೈಲ ಕಳ್ಳಸಾಗಣೆ ಜಾಲವೊಂದನ್ನು ಸೋಮವಾರ ಭೇದಿಸಿದೆ. ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಜಾಲ ಭೇದಿಸಿದ್ದು ಇದೇ ಮೊದಲು.

Read Full Story

07:11 AM (IST) Feb 11

ಗ್ರಾಪಂ ಸದಸ್ಯರ ಆರಂಭದ 15 ತಿಂಗಳು ಅವಿಶ್ವಾಸಕ್ಕಿಲ್ಲ ಅವಕಾಶ - ಹೈಕೋರ್ಟ್ ಹೇಳಿದ್ದೇನು?

ಗ್ರಾಮ ಪಂಚಾಯಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ 15 ತಿಂಗಳ ನಂತರವೇ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೋಲಾರ ಜಿಲ್ಲೆಯ ಗ್ರಾಪಂ ಅಧ್ಯಕ್ಷರೊಬ್ಬರ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆ ನಿಗದಿಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Read Full Story

07:10 AM (IST) Feb 11

ಜ। ನರವಣೆ ಆತ್ಮಚರಿತ್ರೆ ಬಗ್ಗೆ ರಾಹುಲ್‌ ವರ್ಸಸ್ ಪೆಂಗ್ವಿನ್‌

ಗಲ್ವಾನ್ ಸಂಘರ್ಷದ ವೇಳೆ ಮೋದಿ ಸರ್ಕಾರ ಅನುಸರಿಸಿದ ನೀತಿ ಪ್ರಶ್ನಿಸಲಾಗಿದೆ ಎನ್ನಲಾದ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

Read Full Story

More Trending News