ಅಪ್ಪ ರಾಜಣ್ಣಗೆ ಹನಿಟ್ರ್ಯಾಪ್, ಮಗ ರಾಜೇಂದ್ರಗೆ ಮರ್ಡರ್ ಸುಪಾರಿ; ಈ ಕೇಸಿನ ಹಿಂದಿರೋ ಮಹಾನಾಯಕ ಯಾರು?

Published : Mar 27, 2025, 01:25 PM ISTUpdated : Mar 27, 2025, 01:28 PM IST
ಅಪ್ಪ ರಾಜಣ್ಣಗೆ ಹನಿಟ್ರ್ಯಾಪ್, ಮಗ ರಾಜೇಂದ್ರಗೆ ಮರ್ಡರ್ ಸುಪಾರಿ; ಈ ಕೇಸಿನ ಹಿಂದಿರೋ ಮಹಾನಾಯಕ ಯಾರು?

ಸಾರಾಂಶ

ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ನವೆಂಬರ್‌ನಲ್ಲಿಯೇ ಕೊಲೆಗೆ ಸಂಚು ರೂಪಿಸಲಾಗಿತ್ತು, ಜನವರಿಯಲ್ಲಿ ನಡೆದ ಸಂಭಾಷಣೆಯ ಆಡಿಯೋದಲ್ಲಿ 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ನಾಳೆ ತುಮಕೂರು ಎಸ್‌ಪಿಗೆ ದೂರು ನೀಡಲಿದ್ದಾರೆ.

ಬೆಂಗಳೂರು (ಮಾ.27): ರಾಜ್ಯದಲ್ಲಿ ಇತ್ತೀಚೆಗೆ ಮುನ್ನೆಲೆಗೆ ಬಂದಿದ್ದ ಹನಿಟ್ರ್ಯಾಪ್‌ ಬಗ್ಗೆ ದೂರು ಕೊಡಲು ಬರುವುದಾಗಿ ಹೇಳಿದ್ದ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ನನ್ನ ಮೇಲೆ ಕೊಲೆ ಯತ್ನ ನಡೆದಿದ್ದು, ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ದೂರು ಕೊಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಂದ್ರ ಅವರು, ಇವತ್ತು ನಾನು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅವರನ್ನ ಭೇಟಿ ಮಾಡಿದ್ದೇನೆ. ಒಂದು ವಾರದಿಂದ ಎಲ್ಲಾ ಕಡೆ ಈ ವಿಷಯ ಚರ್ಚೆ ಆಗುತ್ತಿದೆ. ಇದರ ಬಗ್ಗೆ ತನಿಖೆ ಆಗಬೇಕು. ಇದರ ಹಿಂದೆ ಯಾರು ಇದ್ದಾರೆ ಅಂತ ತಿಳಿಬೇಕು. ಇವತ್ತು ನಾನು ದೂರು ಕೊಟ್ಟಿರೋದು, ನವೆಂಬರ್ 16 ರಂದು ನನ್ನ ಮಗಳ ಹುಟ್ಟುಹಬ್ಬ ಇರುತ್ತದೆ. ಶ್ಯಾಮಿಯಾನದವರ ರೂಪದಲ್ಲಿ ನನ್ನ ಮರ್ಡರ್ ಮಾಡೋಕೆ ಮುಂದಾಗಿದ್ದರು. ನನಗೆ ತಡವಾಗಿ ಆ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಜನವರಿಯಲ್ಲಿ ನನ್ನ ಮೇಲೆ ಕೊಲೆ ಯತ್ನ ಆಗಿರುವುದರ ಬಗ್ಗೆ ಆಡಿಯೋ ರೆಕಾರ್ಡ್ ಸಿಗುತ್ತದೆ. ಆ ಆಡಿಯೋ ನಲ್ಲಿ ನನಗೆ ಸುಪಾರಿ ಕೊಟ್ಟ ಸಂದೇಶ ಇರುತ್ತದೆ. ಆ ಆಡಿಯೋ ನಲ್ಲಿ 5 ಲಕ್ಷ ರೂಪಾಯಿಗೆ ಡೀಲ್ ಮಾಡಿದ್ದರು. ಆ ರೆಕಾರ್ಡಿಂಗ್ ನಲ್ಲಿ ಏನಿದೆ ಅನ್ನೋದರ ಬಗ್ಗೆ ನಾನು ಡಿಜಿ ಅವರಿಗೆ ಕಂಪ್ಲೇಂಟ್ ಕೊಟ್ಟಿದೀನಿ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್‌ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ

ನನ್ನನ್ನು ಕೊಲೆ ಮಾಡಲು ಬಂದವರ ಪೈಕಿ ಸೋಮ, ಭರತ್ ಅನ್ನೋ ಹೆಸರುಗಳು ಕೇಳಿ ಬಂದಿವೆ. ಜನವರಿಯಲ್ಲಿ ನನಗೆ ಈ ಮಾಹಿತಿ ಬಂತು. ಇದು ಬೇರೆ ಬೇರೆ ರೀತಿಯ ನಡುವಳಿಕೆಯಿಂದ ಕಂಡುಬರುತ್ತಿದೆ. ನಾಳೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಡುತ್ತೇನೆ. ಆಡಿಯೋ ನಲ್ಲಿ ಇಬ್ಬರು ಮಾತನಾಡಿದ್ದಾರೆ. ಮೊದಲಿನಿಂದಲೂ ನಮ್ಮ ಮನೆಗೆ ಶಾಮಿಯಾನ ಅವರೇ ಹಾಕುತ್ತಿದ್ದರು. ಆದರೆ, ಆ ತಂಡದಲ್ಲಿ ಅವರು ಮಾಲೀಕರಿಗೆ ಗೊತ್ತಿಲ್ಲದೇ ಸೇರಿಕೊಂಡಿದ್ದರು. ಇಬ್ಬರು ಬಂದಿದ್ದರು ಎಂಬ ಮಾಹಿತಿ ನನಗಿದೆ ಎಂದು ತಿಳಿಸಿದರು.

ನನಗೆ ಕೊಲೆ ಬೆದರಿಕೆ ಇದೆ. ಅವತ್ತು ಯಾರು ಯಾರು ಮನೆಗೆ ಬಂದಿದ್ದರು ಅನ್ನೋದು ತನಿಖೆ ಆಗುತ್ತಿದೆ. ನಾನು ಕೊಟ್ಟಿರೋದು ಕೊಲೆ ಬೆದರಿಕೆ ಕಂಪ್ಲೇಂಟ್. ನನ್ನ ತಂದೆ ನೀಡಿರೋದು ಹನಿಟ್ರ್ಯಾಪ್ ಕಂಪ್ಲೇಂಟ್. ನಾನು ಈ ಕಂಪ್ಲೇಂಟ್ ತಗೋಳೋಕೆ ಬರಲ್ಲ ಅಂತ ಡಿಜಿ ಅವರು ಹೇಳಿದ್ದಾರೆ. ಇದೀಗ ನಾನು ತುಮಕೂರು ಎಸ್‌ಪಿಗೆ ಕಚೇರಿಗೆ ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಹನಿಟ್ರ್ಯಾಪ್ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ; ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಬಂದಿದ್ದರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು