ಕರುನಾಡಿಗೆ ತಲುಪಿದ ನಾವಿಕ ಸಂಸ್ಥೆಯ ಆಮ್ಲಜನಕ ಕಾನ್ಸನ್‌ಟ್ರೇಟರ್ಸ್

Published : Jun 01, 2021, 11:04 AM ISTUpdated : Jun 01, 2021, 06:50 PM IST
ಕರುನಾಡಿಗೆ ತಲುಪಿದ ನಾವಿಕ ಸಂಸ್ಥೆಯ ಆಮ್ಲಜನಕ  ಕಾನ್ಸನ್‌ಟ್ರೇಟರ್ಸ್

ಸಾರಾಂಶ

 ಕರ್ನಾಟಕಕ್ಕೆ   ಅಮೆರಿಕೆಯಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು)  ಸಂಸ್ಥೆ ಸಹಾಯ  "ಕರುನಾಡಿಗೆ ಆಮ್ಲಜನಕ"   ಎಂಬ ಯೋಜನೆಯನ್ನು ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಆರಂಭ ಬೆಂಗಳೂರನ್ನು ತಲುಪಿದ  ಆಕ್ಸಿಜನ್  ಕಾನ್ಸನ್‌ಟ್ರೇಟರ್ಸ್  

- ಬೆಂಕಿ ಬಸಣ್ಣ,  ನ್ಯೂಯಾರ್ಕ್

ಬೆಂಗಳೂರು (ಜೂ.01):
 ಕೋರೋನಾ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಸಹಾಯ ಮಾಡುವ ಉದ್ದೇಶದಿಂದ  ಅಮೆರಿಕೆಯಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು)  ಸಂಸ್ಥೆ   "ಕರುನಾಡಿಗೆ ಆಮ್ಲಜನಕ"   ಎಂಬ ಯೋಜನೆಯನ್ನು ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಿದೆ.  

 ನಾವಿಕ ಸಂಸ್ಥೆಯು  ಕಳಿಸಿದ ಆಕ್ಸಿಜನ್  ಕಾನ್ಸನ್‌ಟ್ರೇಟರ್ಸ್ ಇಂದು ಬೆಂಗಳೂರನ್ನು  ತಲುಪಿವೆ.  ರೋಟರಿ ಕ್ಲಬ್ ಸಹಯೋಗದೊಂದಿಗೆ  ಕರ್ನಾಟಕದ ವಿವಿಧ ಜಿಲ್ಲೆಗಳ  ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುತ್ತದೆ  ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ  ತಿಳಿಸಿದ್ದಾರೆ.  

 ಮುಂದಿನ ವಾರದಲ್ಲಿ  ನಾವಿಕ ಸಂಸ್ಥೆ ಕಳಿಸಿದ ನೂರಕ್ಕೂ ಹೆಚ್ಚು  ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್  ಎರಡನೇ ಬ್ಯಾಚ್ ಕರ್ನಾಟಕಕ್ಕೆ ತಲುಪಲಿದ್ದು, ಇವುಗಳನ್ನು ಕರ್ನಾಟಕದ ಅತಿ ಹಿಂದುಳಿದ  ಗ್ರಾಮೀಣ ಪ್ರದೇಶದ  ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುತ್ತದೆ.

ಕೋವಿಡ್ ಸೋಂಕಿತರ ತುರ್ತು ಸೇವೆಗೆ ಆಕ್ಸಿಜನ್ ಬಸ್‌ಗೆ ಸಚಿವ ಸೋಮಶೇಖರ್ ಚಾಲನೆ ..

ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ  ನಾವಿಕ ಸಂಸ್ಥೆ  ರೋಟರಿ ಕ್ಲಬ್ ಜೊತೆ ಕೈಜೋಡಿಸಿ ಜ್ಞಾನ ದೀವಿಗೆ ಅಭಿಯಾನದಲ್ಲಿ ಐದುನೂರಕ್ಕೂ ಹೆಚ್ಚು ಟ್ಯಾಬ್ ಗಳನ್ನು  ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಭಾಗದ ಎಸೆಸೆಲ್ಸಿ ಮಕ್ಕಳಿಗೆ ಹಂಚಿತ್ತು. ಹಾಗೆಯೇ ಈಗ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಕರ್ನಾಟಕದ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ಹಂಚುವ ಯೋಜನೆಯನ್ನು ನಾವಿಕ ಸಂಸ್ಥೆ ನಡೆಸುತ್ತಿದೆ.

ನಾವಿಕ ಸಂಸ್ಥೆಯು ಉಚಿತವಾಗಿ ನೀಡಿದ  ಈ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್  ಕೊರೋನಾ ಮಹಾಮಾರಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ  ಗ್ರಾಮೀಣ ಪ್ರದೇಶದ ಬಡ ಜನರ  ಜೀವ ಉಳಿಸುವ ಸಂಜೀವಿನಿ ಆಗಲಿವೆ.

ಈ ಆಕ್ಸಿಜನ್ ಕನ್ಸೆಂತ್ರೇಟರ್ ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ ರೋಟರಿ ಕ್ಲಬ್ ಸಹಾಯದೊಂದಿಗೆ   "ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಬ್ಯಾಂಕ" ನ್ನು  ಆರಂಭಿಸುವ  ಬಗ್ಗೆಯೂ ಚಿಂತನೆ ನಡೆದಿದೆ. 

ಕರುನಾಡಿಗೆ ಆಮ್ಲಜನಕ ಅಭಿಯಾನದಲ್ಲಿ  ನಾವಿಕ ಸಂಸ್ಥೆಯ ಕಾರ್ಯಕಾರಣಿ ಮತ್ತು ಆಡಳಿತ  ಸಮಿತಿಯ ಜೊತೆಗೆ  ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ  ಸ್ವದೇಶ್ ಮತ್ತು  ಶ್ರೀನಾಥ್,  B&H ಲಾಜೆಸ್ಟಿಕ್ ಕಂಪನಿ  ಮತ್ತು ಬೆಂಗಳೂರಿನ  ಶ್ರೀನಾಥ ವಶಿಷ್ಠ, ತೇಜಸ್, ರಾಜಪ್ಪ ಮತ್ತು ಶಿವಾನಂದ ಮುಂತಾದವರು  ಸಹಕಾರ ನೀಡಿದ್ದಾರೆ. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ