ಪಾವಗಡ: ಗಣೇಶನ ಮೆರವಣಿಗೆಗೆ ಮುಸ್ಲಿಮರಿಂದ ಉಪಹಾರ ವಿತರಣೆ

Published : Sep 19, 2024, 02:35 PM IST
 ಪಾವಗಡ: ಗಣೇಶನ ಮೆರವಣಿಗೆಗೆ ಮುಸ್ಲಿಮರಿಂದ ಉಪಹಾರ ವಿತರಣೆ

ಸಾರಾಂಶ

ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದ ಆನೇಕ ಯುವಕರಿಂದ ಸುಮಾರು ಎಂಟುನೂರಕ್ಕಿಂತ ಹೆಚ್ಚು ಮಂದಿಗೆ ಕೇಸರಿಬಾತ್‌, ಪಲಾವ್‌ ಹಾಗೂ ಕುಡಿವ ನೀರಿನ ಪಾಕೇಟ್‌ ವಿತರಿಸಿ ಶುಭಕೋರಿದ ಪ್ರಸಂಗ ತಾಲೂಕಿನ ವೈ.ಎನ್‌. ಹೊಸಕೋಟೆ ಗ್ರಾಮದಲ್ಲಿ ನಡೆಯಿತು.

ಪಾವಗಡ (ಸೆ.19) : ಹಿಂದೂ ಮಹಾ ಗಣಪತಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದ ಆನೇಕ ಯುವಕರಿಂದ ಸುಮಾರು ಎಂಟುನೂರಕ್ಕಿಂತ ಹೆಚ್ಚು ಮಂದಿಗೆ ಕೇಸರಿಬಾತ್‌, ಪಲಾವ್‌ ಹಾಗೂ ಕುಡಿವ ನೀರಿನ ಪಾಕೇಟ್‌ ವಿತರಿಸಿ ಶುಭಕೋರಿದ ಪ್ರಸಂಗ ತಾಲೂಕಿನ ವೈ.ಎನ್‌. ಹೊಸಕೋಟೆ ಗ್ರಾಮದಲ್ಲಿ ನಡೆಯಿತು.

ತಾಲೂಕಿನ ವೈ.ಎನ್‌. ಹೊಸಕೋಟೆಯ ಹಿಂದೂ ಮಹಾ ಗಣಪತಿ ವಿಸರ್ಜನೆಯ ವೇಳೆ ವೈ.ಎನ್‌.ಹೊಸಕೋಟೆಯ ಹಳೇ ಸರ್ಕಾರಿ ಆಸ್ಪತ್ರೆಯ ಮಸೀದಿ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಅಪಾರ ಸಂಖ್ಯೆಯ ಮುಸ್ಲಿಂ ಯುವಕರು ಒಂದೆಡೆ ಸೇರಿ ಹಿಂದೂ ಮಹಾ ಗಣಪತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಆನೇಕ ಮಂದಿ ಹಿಂದೂಗಳಿಗೆ ಕೇಸರಿಬಾತ್‌ ಹಾಗೂ ಬಿಸಿಬಿಸಿ ಪಲಾವ್‌, ಕುಡಿಯುವ ನೀರಿನ ಪಾಕೇಟ್‌ಗಳನ್ನು ವಿತರಿಸಿ ಗಣಪತಿ ಹಬ್ಬದ ಶುಭಾಶಯ ಕೋರಿದ್ದಾರೆ. ಪುರಬೀದಿಯ ಪ್ರಮುಖ ರಸ್ತೆಗಳ ಮೂಲಕ ಶಾಂತಿ ರೀತಿಯಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆ ಕಾರ್ಯಕ್ರಮ ನಡೆಸಿದರು.

ಮುಸ್ಲಿಮರಿಂದ ದರ್ಗಾ ಗಲ್ಲಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ!

ರಾತ್ರಿ 7 ಗಂಟೆಯ ಬಳಿಕ ಮೇಗಳಪಾಳ್ಯಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಕೆರೆಯೊಂದರಲ್ಲಿ ಗಣೇಶನ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.

ತುಮಕೂರು ಜಿಲ್ಲಾ ಅಡಿಷನಲ್‌ ಎಸ್‌ಪಿ ಖಾದರ್‌, ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಹಾಗೂ ನಗರ ಸಿಪಿಐ ಸುರೇಶ್‌, ಪಿಎಸ್ಐ ಮಾಳಪ್ಪನಾಲ್ವಡಿ ಸೇರಿದಂತೆ 80ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತಿನಲ್ಲಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ