ಪಾವಗಡ: ಆ್ಯಂಬುಲೆನ್ಸ್‌ ಸಿಗದ್ದಕ್ಕೆ ಬೈಕ್‌ನಲ್ಲಿ ಶವ ಸಾಗಿಸಿದ ಮಕ್ಕಳು!

Published : Sep 19, 2024, 12:48 PM ISTUpdated : Sep 19, 2024, 01:00 PM IST
ಪಾವಗಡ: ಆ್ಯಂಬುಲೆನ್ಸ್‌ ಸಿಗದ್ದಕ್ಕೆ ಬೈಕ್‌ನಲ್ಲಿ ಶವ ಸಾಗಿಸಿದ ಮಕ್ಕಳು!

ಸಾರಾಂಶ

 ಎಷ್ಟೇ ಪರದಾಟ ನಡೆಸಿದರೂ ಶವ ಸಾಗಿ ಸಲು ಆ್ಯಂಬುಲೆನ್ಸ್ ಹಾಗೂ ಯಾವುದೇ ವಾಹನ ಸಿಗದ ಕಾರಣ ಮಕ್ಕಳು ತಮ್ಮ ದ್ವಿಚಕ್ರ ವಾಹನದಲ್ಲಿಯೇ ಮೃತಪಟ್ಟಿರುವ ವೃದ್ಧ ತಂದೆಯ ಮೃತದೇಹವನ್ನು ಕರೆದೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ.

ಪಾವಗಡ (ಸೆ.19):  ಎಷ್ಟೇ ಪರದಾಟ ನಡೆಸಿದರೂ ಶವ ಸಾಗಿ ಸಲು ಆ್ಯಂಬುಲೆನ್ಸ್ ಹಾಗೂ ಯಾವುದೇ ವಾಹನ ಸಿಗದ ಕಾರಣ ಮಕ್ಕಳು ತಮ್ಮ ದ್ವಿಚಕ್ರ ವಾಹನದಲ್ಲಿಯೇ ಮೃತಪಟ್ಟಿರುವ ವೃದ್ಧ ತಂದೆಯ ಮೃತದೇಹವನ್ನು ಕರೆದೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕಿನ ದಳವಾಯಿಹಳ್ಳಿ ಗ್ರಾಮದ ವೃದ್ಧ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರನ್ನು ಕಳೆದ ಮಂಗಳವಾರ ತಾಲೂಕಿನ ವೈ.ಎನ್ ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ತಂದೆ. ಆದರೆ ಸ್ವಗ್ರಾಮಕ್ಕೆ ಶವ ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ಗಾಗಿ ಪರದಾಡಿದ್ದ ಮಕ್ಕಳು. ಯಾವುದೇ ವಾಹನ ಆಂಬುಲೆನ್ಸ್ ಸಿಗದ ಕಾರಣ ಕೊನೆಗೆ ವಿಧಿಯಿಲ್ಲದೇ ಮೃತದೇಹವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸ್ವಗ್ರಾಮ ದಳವಾಯಿಗೆ ಹೋಗಿದ್ದ ಮಕ್ಕಳು. 

ಎದೆನೋವು ಎಂದರೂ ಗದರಿಸಿ ಕೂರಿಸಿದ ಶಿಕ್ಷಕ. ತರಗತಿಯಲ್ಲೇ ವಿದ್ಯಾರ್ಥಿ ಸಾವು!

ಘಟನೆ ಬಗ್ಗೆ ಮಾಹಿತಿ ತಿಳಿದು ಪ್ರತಿಕ್ರಿಯಿಸಿ ಪಾವಗಡ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ಕಿರಣ್, ಸರ್ಕಾರದ ಅನುಮತಿ ಇಲ್ಲದ ಕಾರಣ ಶವ ಸಾಗಿರಸಲು ಸರ್ಕಾರಿ ಆಂಬುಲೆನ್ಸ್ ಕಳಿಸಲು ಸಾಧ್ಯವಾಗಲಿಲ್ಲ. ರೋಗಿಗಳನ್ನು ಕರೆ ತರಲು ಮಾತ್ರ ಆ್ಯಂಬುಲೆನ್ಸ್ ಕಳುಹಿಸಲಾಗುತ್ತದೆ. ಯಾರಾದರೂ ಮೃತರಾದರೆ ಅವರ ಮನೆಯವರು ತಮ್ಮ ಸ್ವಂತ ಖರ್ಚಿನಲ್ಲಿ ಬೇರೆ ವಾಹನ ಮಾಡಿಕೊಂಡು ತಮ ಗ್ರಾಮಗಳಿಗೆ ಶವ ಸಾಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!