ರೈತರ ಆಕ್ರೋಶಕ್ಕೆ ಕಾರಣವಾದ್ರೂ ಏನು? ಕುಮಾರಸ್ವಾಮಿ ಕೊಟ್ಟ ಮಾತೇನು? ತಪ್ಪಿದ್ದೇಕೆ?

Published : Nov 18, 2018, 05:22 PM ISTUpdated : Nov 18, 2018, 06:10 PM IST
ರೈತರ ಆಕ್ರೋಶಕ್ಕೆ ಕಾರಣವಾದ್ರೂ ಏನು? ಕುಮಾರಸ್ವಾಮಿ ಕೊಟ್ಟ ಮಾತೇನು? ತಪ್ಪಿದ್ದೇಕೆ?

ಸಾರಾಂಶ

ಬೆಳಗಾವಿಯ ಸುವರ್ಣ ಸೌಧ ಮುಂದೆ ರೖತರ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.  ಅಷ್ಟಕ್ಕೂ ಬೆಳಗಾವಿಯಲ್ಲಿ ರೈತರು ಉಗ್ರ ಪ್ರತಿಭಟನೆ ಕೈಗೊಂಡಿದ್ದಾದರೂ ಯಾಕೆ?  ಅನ್ನದಾತರ ಪ್ರತಿಭಟನೆಗೆ ಕಾರಣವಾದರೂ ಏನು? ಇಲ್ಲಿದೆ.

ಬೆಳಗಾವಿ, [ನ.18] ಮಾತು ತಪ್ಪಿದ ಸಿಎಂ ಎಚ್. ಡಿ. ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ಧ ಅನ್ನದಾತರು ಸಿಡಿದೆದ್ದಾರೆ. ಬೆಳಗಾವಿಯ ಸುವರ್ಣ ಸೌಧ ಮುಂದೆ ರೖತರ ಪ್ರತಿಭಟನೆ ವಿಕೋಪಕ್ಕೆ ತಿರುಗಿರುವುದಕ್ಕೆ ಒಂದು ಅಸಲಿ ಕಾರಣ ಇದೆ. 

ಅದೇನೆಂದೆ ರೈತರ ಸಮಸ್ಯೆ ಪರಿಹರಿಸಲು ಹೇಳಿ ಕುಮಾರಸ್ವಾಮಿ ಕೈಕೊಟ್ಟಿದ್ದಾರೆ. ಇದ್ರಿಂದ ರೈತರ ಕೋಪ ನೆತ್ತಿಗೇರಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತರು ಬೆಳಗಾವಿ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡ್ತಿದ್ರು. 

"

'ಗಲಾಟೆ ಮಾಡುತ್ತಿರುವ ಕಬ್ಬು ಬೆಳೆಗಾರರು ರೈತರಲ್ಲ, ಅವ್ರು ಗೂಂಡಾಗಳು'

ನವೆಂಬರ್​​​​​ 19ಕ್ಕೆ ಬೆಳಗಾವಿ ಪ್ರವಾಸ ಮಾಡಿ, ಸಭೆ ನಡೆಸುವ ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ರು. ಇದೀಗ  ನವೆಂಬರ್​​ 20ಕ್ಕೆ ರೈತರನ್ನೆ ಬೆಂಗಳೂರಿಗೆ ಬರುವಂತೆ ತಿಳಿಸಿ, ಸಿಎಂ ಪ್ರವಾಸವನ್ನ ರದ್ದು ಮಾಡಿದ್ದಾರೆ.

 ನಾಳೆ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನ ಬೆಳಗಾವಿ ಪ್ರವಾಸವನ್ನ ರದ್ದು ಪಡಿಸಿದ್ದಾರೆ.  ಇದ್ರಿಂದ  ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಲು ಬಾಗಲಕೋಟೆ, ಬೆಳಗಾವಿ ರೈತರು  ಕುರಿತು ತೀರ್ಮಾನಿಸಿದ್ದಾರೆ. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ