ದಾವಣಗೆರೆಯಲ್ಲಿ ಶಾಂತಿಯುತವಾಗಿ ಜರುಗಿದ ಸಂಭ್ರಮದ ಈದ್ ಮಿಲಾದ್

Published : Sep 28, 2023, 09:12 PM IST
ದಾವಣಗೆರೆಯಲ್ಲಿ ಶಾಂತಿಯುತವಾಗಿ ಜರುಗಿದ ಸಂಭ್ರಮದ ಈದ್ ಮಿಲಾದ್

ಸಾರಾಂಶ

ನಗರದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಪ್ರವಾದಿ ಮುಹಮ್ಮದ್ ರವರ ಜನ್ಮ ದಿನ ಹಿನ್ನಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಯಿತು. 

ವರದಿ: ವರದರಾಜ್ 

ದಾವಣಗೆರೆ (ಸೆ.28): ನಗರದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಪ್ರವಾದಿ ಮುಹಮ್ಮದ್ ರವರ ಜನ್ಮ ದಿನ ಹಿನ್ನಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಯಿತು. 

 ಇಂದು ದಾವಣಗೆರೆ ನಗರದ ಆಝಾದ್ ನಗರದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾಕಷ್ಟು ಮುಸ್ಲಿಂ ಬಾಂಧವರು ಭಾಗಿಯಾಗಿ ಮೆಕ್ಕಾ ಮದೀನಾ ಮಾದರಿಗಳೊಂದಿಗೆ ನಾತ್ ಗಳು, ಸಲಾಂಗಳನ್ನು ಹಾಡುತ್ತ ಮುನ್ನಡೆದರು. ಇನ್ನು ಈ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರ ಇಸ್ಲಾಂ ಧ್ವಜಗಳ ಮಧ್ಯೆ ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜ ಕಂಡು ಬಂದಿದ್ದು ವಿಶೇಷವಾಗಿತ್ತು. ಹಸಿರು ಧ್ವಜಗಳ ಮಧ್ಯೆ ನಮ್ಮ ರಾಷ್ಟ್ರೀಯ ಧ್ವಜ ಮೆರವಣಿಗೆಯುದ್ದಕ್ಕೂ ಮುಸ್ಲಿಂ‌ಬಾಂಧವರು ಪ್ರದರ್ಶಿಸಿ ದೇಶ ಪ್ರೇಮ ಮೆರೆದರು.

ಇಂದು ಈದ್‌ ಮಿಲಾದ್‌: ಸಮ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್, ನವಾಝ್‌ ಅಬ್ಬೆಟ್ಟು

ಮೆರವಣಿಗೆ ಆಝಾದ್ ನಗರದಿಂದ ಆರಂಭವಾಗಿ ಅಹ್ಮದ್ ನಗರ, ಮದೀನ್ ಆಟೋ ನಿಲ್ಧಾಣ ವೃತ್ತ, ಎನ್ ಆರ್ ರಸ್ತೆ, ಕೆಆರ್ ಮಾರುಕಟ್ಟೆ ತಲುಪಿ ಇಸ್ಲಾಂ ಪೇಟೆ, ಗಡಿಯಾರ ಕಂಬ ವೃತ್ತ, ವಸಂತ ರಸ್ತೆ, ಅರುಣ್ ಟಾಕೀಸ್ ಬಳಿ ಬಂದು ಪಿಬಿ ರಸ್ತೆ ಸೇರಿತು ಬಳಿಕ ಗಾಂಧಿ ವೃತ್ತ, ಆಶೋಕ ರಸ್ತೆ, ಮಾಗನಹಳ್ಳಿ ರಸ್ತೆ ಮುಖಾಂತರ ಮಿಲಾದ್ ಮೈದಾನಕ್ಕೆ ಮೆರವಣಿಗೆ ಕೊನೆ ಗೊಂಡಿತ್ತು.

 ಆಝಾದ್ ನಗರದಿಂದ ಮೆರವಣಿಗೆ ಆರಂಭದಿಂದ ಹಿಡಿದು ಕೊನೆಯ ವರೆಗೂ ಈ ವೇಳೆ ಪುಟ್ಟ ಬಾಲಕನೋರ್ವ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು‌. ಮತ್ತೊಂದೆಡೆ ಬಾಷಾ ನಗರ ಮುಖಾಂತರ ಮೆರವಣಿಗೆ ಸಾಗುವ ವೇಳೆಯೂ ಹಸಿರು ಧ್ವಜಗಳ ಮಧ್ಯೆ ರಾಷ್ಟ್ರ ಧ್ವಜ ಪ್ರದರ್ಶನ ಮಾಡಲಾಯಿತು.

 

Mangaluru: ಮೀನುಗಾರಿಕಾ ಬಂದರಿನಲ್ಲಿ 'Eid' ಬ್ಯಾನರ್ ವಿವಾದ: ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!