
ಬೆಂಗಳೂರು (ಜೂ.8): ರಾಜ್ಯ ರಾಜಕಾರಣದಲ್ಲಿ ಸದಾ ತಮ್ಮದೇ ವಿಭಿನ್ನ ಶೈಲಿಯಿಂದ ಗಮನ ಸೆಳೆಯುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರ ದೈವಭಕ್ತಿ ಮತ್ತು ಜ್ಯೋತಿಷ್ಯದ ಮೇಲಿನ ಬಲವಾದ ನಂಬಿಕೆ ಈಗ ಆಡಳಿತದ ಕೇಂದ್ರ ಕಚೇರಿ ವಿಧಾನಸೌಧದಲ್ಲೂ ಪ್ರತಿಫಲಿಸುತ್ತಿದೆ.
ಹೌದು, ಡಿಕೆಶಿ ಅವರ ಆಡಳಿತಾವಧಿಯಲ್ಲಿ ಈಗ ಎಲ್ಲವೂ ಪಕ್ಕಾ ವಾಸ್ತು ಪ್ರಕಾರವೇ ಬದಲಾಗುತ್ತಿದ್ದು, ಸಭೆ-ಸಮಾರಂಭಗಳ ದಿಕ್ಸೂಚಿಯೇ ಬದಲಾಗಿದೆ! ಡಿ.ಕೆ. ಶಿವಕುಮಾರ್ ಅವರಿಗೆ ದೇವರು, ವಾಸ್ತು ಹಾಗೂ ಜ್ಯೋತಿಷ್ಯದ ಮೇಲೆ ಅಪಾರವಾದ ನಂಬಿಕೆ ಇರುವುದು ಗುಟ್ಟಾಗಿ ಉಳಿದಿಲ್ಲ. ಅವರ ಈ ನಡೆ ಈಗ ಸರ್ಕಾರದ ಪ್ರಮುಖ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತಿದೆ.
ಜೈಲಿನಿಂದ Darshan Thoogudeepa ರಿಲೀಸ್ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!
ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಪಕ್ಕಾ ಶುಭ ಮುಹೂರ್ತವನ್ನೇ ನಿಗದಿಪಡಿಸಿದ್ದ ಅವರು, ಅಂದಿನಿಂದ ಇಂದಿನವರೆಗೆ ಪ್ರತಿಯೊಂದು ಹೆಜ್ಜೆಯನ್ನೂ ಜ್ಯೋತಿಷ್ಯದ ಆಧಾರದ ಮೇಲೆಯೇ ಇಡುತ್ತಿದ್ದಾರೆ.