
ಮೀಸೆ ಚಿಗುರೋಕೂ ಮೊದಲೇ ರಾಜಕೀಯ ಪಗಡೆಯಾಟದಲ್ಲಿ, ದಾಳ ಉರುಳಿಸಿ ಗೆದ್ದ ಭಲೇಚತುರ ನಾಯಕ ಡಿಕೆಶಿ. ಆ ಚಾಣಾಕ್ಷತೆಯೇ ಈಗ, ಸಿಎಮ್ ಗದ್ದುಗೆ ತನಕ ಕರ್ಕೊಂಡ್ ಬಂದಿದೆ. ಪ್ರಮಾಣ ವಚನಕ್ಕೆ ಕ್ಷಣಗಣನೆ ಶುರುವಾಗಿದೆ. ಅಷ್ಟಕ್ಕೂ, ಆ ರಾಜಕೀಯ ರಾಜಮಾರ್ಗ ಪ್ರಯಾಣ ಹೇಗಿತ್ತು? ನೀವೇ ನೋಡಿ..
ಕೆಲವೇ ಕ್ಷಣ. ಇನ್ನೇನು ಕೆಲವೇ ಕ್ಷಣಗಳಲ್ಲಿ, ಹಸ್ತಪಾಳಯದ ಕಟ್ಟಾಳಿಗೆ ಪಟ್ಟಾಭಿಷೇಕ ನೆರವೇರಲಿದೆ. ಸಾಲು ಸಾಲು ಸವಾಲು ಗೆದ್ದ ನಾಯಕ. ಪಕ್ಷ ಕಷ್ಟ ಅಂದಾಗೆಲ್ಲಾ ಹೆಗಲು ಕೊಟ್ಟ ಹಠಗಾರ. ಕಡೆಗೂ ತನಗೆ ಒಲಿದು ಬಂದಿರೋ ಅವಕಾಶನಾ ಅದ್ಭುತವಾಗಿ ಬಳಸಿಕೊಳ್ಳೋಕೆ ಸಿದ್ಧರಾಗಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತ ಡಿಕೆ ಶಿವಕುಮಾರ್, ಸಿಎಮ್ ಕುರ್ಚಿ ಮೇಲೆ ಕೂರೋಕೆ ಸಜ್ಜಾಗಿದಾರೆ. ಆದ್ರೆ, ಅವರ ಈ ಹೋರಾಟ ಶುರುವಾಗಿದ್ದೆಲ್ಲಿಂದ? ಮೊನ್ನೆ ಕಾಂಗ್ರೆಸ್ ಗೆಲ್ತಲ್ಲಾ ಆಗಿಂದಲಾ? ಊಹೂ.. ಕಾಂಗ್ರೆಸ್ ಪಕ್ಷ ಸೇರಿಕೊಂಡ್ರಲಾ, ಅವಾಗಿಂದಲೂ.. ಅಲ್ವೇ ಅಲ್ಲ. ಅದಕ್ಕೂ ಮುಂಚೆ. ಮೀಸೆ ಚಿಗುರೋಕೂ ಮೊದಲೇ ರಾಜಕೀಯ ಪಗಡೆಯಾಟದಲ್ಲಿ, ದಾಳ ಉರುಳಿಸಿ ಗೆದ್ದ ಭಲೇಚತುರ ನಾಯಕ ಡಿಕೆಶಿ. ಆ ಚಾಣಾಕ್ಷತೆಯೇ ಈಗ, ಸಿಎಮ್ ಗದ್ದುಗೆ ತನಕ ಕರ್ಕೊಂಡ್ ಬಂದಿದೆ. ಪ್ರಮಾಣ ವಚನಕ್ಕೆ ಕ್ಷಣಗಣನೆ ಶುರುವಾಗಿದೆ. ಅಷ್ಟಕ್ಕೂ, ಆ ರಾಜಕೀಯ ರಾಜಮಾರ್ಗ ಪ್ರಯಾಣ ಹೇಗಿತ್ತು? ನೀವೇ ನೋಡಿ..