
ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಗಾಳ ಹಾಕಿದ್ರು ಡಿ.ಕೆ.ಶಿವಕುಮಾರ್. ಇದ್ರ ಜೊತೆಗೆ ಪರಿಷತ್ ಚುನಾವಣೆಗೆ ಐದನೇ ಅಭ್ಯರ್ಥಿಯನ್ನ ಅಖಾಡಕ್ಕಿಳಿಸೋ ಮೂಲಕ ಡಿಕೆ ಮತ್ಯಾವ ದಾಳ ಉರುಳಿಸೋಕೆ ಹೊರಟಿದ್ದಾರೆ ಅನ್ನೋ ಅನುಮಾನ ಜನ್ಮತಾಳಿದೆ.
ಬೆಂಗಳೂರು: 1999 ಹಾಗೂ 2018. ಆ ಎರಡು ವರ್ಷಗಳಲ್ಲಿ ರಾಜ್ಯ ರಾಜಕೀಯಕ್ಕೆ ಸಿಕ್ಕಿದ್ದ ರಣರೋಚಕ ತಿರುವಿಗೆ ಇತಿಹಾಸವೇ ಸಾಕ್ಷಿ. ಇದೀಗ ಆ ಇತಿಹಾಸ ಮತ್ತೆ ಮರುಕಳಿಸಲಿದ್ಯಾ? ಆ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಸೈಲೆಂಟ್ ಆಗಿ ದಾಳಗಳನ್ನ ಉರುಳಿಸ್ತಾಯಿದ್ದಾರಾ? ಒಂದು ವೇಳೆ ಆ ಹಿಸ್ಟರಿ ರಿಪೀಟ್ ಆಗಿ ಬಿಟ್ರೆ ದಳ ಸಾಮ್ರಾಜ್ಯಕ್ಕೆ ಬೀಳುವ ಪೆಟ್ಟೇನು? ಕನಕಾಧಿಪತಿಗೆ ಆಗುವ ಲಾಭವೇನು? ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರ ಪಡೆಗೆ ಗಾಳ ಹಾಕಿದ್ದ ಸಿಎಂ ಡಿಕೆ ಮತ್ತೊಂದು ಮಹಾಯೋಜನೆಯನ್ನ ರೆಡಿ ಮಾಡ್ಕೊಂಡಿದ್ದಾರಾ? ವಿಧಾನ ಪರಿಷತ್ ಚುನಾವಣೆಯಲ್ಲಿಯೇ ಅದಕ್ಕೆ ಫಿಕ್ಸ್ ಆಗಿದ್ಯಾ ಮುಹೂರ್ತ.?
ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಗಾಳ ಹಾಕಿದ್ರು ಡಿ.ಕೆ.ಶಿವಕುಮಾರ್. ಇದ್ರ ಜೊತೆಗೆ ಪರಿಷತ್ ಚುನಾವಣೆಗೆ ಐದನೇ ಅಭ್ಯರ್ಥಿಯನ್ನ ಅಖಾಡಕ್ಕಿಳಿಸೋ ಮೂಲಕ ಡಿಕೆ ಮತ್ಯಾವ ದಾಳ ಉರುಳಿಸೋಕೆ ಹೊರಟಿದ್ದಾರೆ ಅನ್ನೋ ಅನುಮಾನ ಜನ್ಮತಾಳಿದೆ. ಇದಕ್ಕೆ ಪೂರಕವಾಗಿ ಈ ಹಿಂದೆಯೂ ಇಂಥದ್ದೇ ಬೆಳವಣಿಗೆಗಳು ರಾಜ್ಯರಾಜಕೀಯದಲ್ಲಿ ನಡೆದಿದ್ವು.