ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: 3 ಕೋಟಿಯ ಬಂಗ್ಲೆ ಕಟ್ತಿದ್ದ ಬ್ಲೂಟೂತ್‌ ಮಂಜು​..!

Published : May 03, 2022, 12:34 PM IST
ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: 3 ಕೋಟಿಯ ಬಂಗ್ಲೆ ಕಟ್ತಿದ್ದ ಬ್ಲೂಟೂತ್‌ ಮಂಜು​..!

ಸಾರಾಂಶ

*  ಪಿಎ​ಸ್‌ಐ ಅಕ್ರ​ಮ​ದಲ್ಲಿ ಬಂಧಿತ ಎಂಜಿ​ನಿ​ಯರ್‌ ಈತ *  ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರ​ಣಾದ ಮಂಜು​ನಾ​ಥ್‌ *  ಸಿಐಡಿ ವಿಚಾರಣೆಯಲ್ಲಿ ಸತ್ಯಾಂಶ ಬಯ​ಲು  

ಕಲಬುರಗಿ(ಮೇ.03):  ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಬ್ಲೂಟೂತ್‌ ತಜ್ಞ ಎಂದೇ ಕರೆ​ಯ​ಲ್ಪ​ಡುವ ಇಲ್ಲಿನ ಅಮರ್ಜಾ ನೀರಾವರಿ ಯೋಜನೆಯ ಕಿರಿಯ ಎಂಜಿನಿಯರ್‌(JE​) ಮಂಜುನಾಥ್‌ ಮೇಳಕುಂದಿ(Manjunath Melakundi) 3 ಕೋಟಿಗೂ ಹೆಚ್ಚು ​ವೆಚ್ಚ ಮಾಡಿ ಕಲ​ಬು​ರ​ಗಿಯ(Kalanuragi) ಜಯ​ನ​ಗ​ರ​ದಲ್ಲಿ ಐಷಾ​ರಾಮಿ ಮನೆ​ಕಟ್ಟುತ್ತಿ​ರುವ ವಿಚಾರ ಬೆಳ​ಕಿಗೆ ಬಂದಿ​ದೆ.

ಅಫಜಲ್ಪುರದ ಮೇಳಕುಂದಾ ಮೂಲದ ಮಂಜು​ನಾ​ಥ್‌​ನದ್ದು ಗೌರವಸ್ಥ ಕುಟುಂಬ, ಇವರ ತಂದೆ ವಿಶ್ವನಾಥ್‌ ನಿವೃತ್ತ ಎಎಸ್‌ಐ. ಚಿಕ್ಕ ವಯಸ್ಸಿನಲ್ಲಿಯೇ ನೀರಾವರಿ ಇಲಾಖೆಯಲ್ಲಿ ಜೆಇ ಹುದ್ದೆ ಅಲಂಕ​ರಿ​ಸಿ​ರುವ ಮಂಜು​ನಾಥ್‌ ವೈಭವದ ಬದುಕು ಕಟ್ಟಿಕೊ​ಳ್ಳಬೇಕೆಂಬ ಹಂಬಲದಿಂದ ಹಣದ ಹಿಂದೆ ಬಿದ್ದು, ಅಕ್ರಮಗಳ(Scam) ರೂವಾರಿಯಾದನೆಂಬ ವಿಚಾ​ರ ಸಿಐಡಿ(CID) ವಿಚಾರಣೆಯಲ್ಲಿ ಬಯ​ಲಾ​ಗಿ​ದೆ.

PSI Recruitment Scam ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!

ಮಂಜು​ನಾಥ್‌ ಅಂದು​ಕೊಂಡಂತೆ ನಡೆ​ದಿ​ದ್ದ​ರೆ ತಾನು ನಿರ್ಮಿ​ಸು​ತ್ತಿ​ರುವ ಭವ್ಯ ಮನೆಯ ಒಳಡಿಸೈನ್‌ (ಇಂಟಿರೀಯರ್‌), ಪೀಠೋ​ಪ​ಕ​ರ​ಣ​ಗ​ಳಿ​ಗಾ​ಗಿ ಹಾಂಗ್‌ಕಾಂಗ್‌(HongKong), ಚೈನಾಗೆ(China) ತೆರ​ಳು​ವ​ವ​ನಿ​ದ್ದ​ನಂತೆ. ಅಷ್ಟ​ರ​ಲ್ಲಾ​ಗಲೇ ಪಿಎ​ಸ್‌ಐ ಪರೀಕ್ಷೆ ಅಕ್ರಮ(PSI Recruitment Scam) ಬಹಿ​ರಂಗ​ಗೊಂಡು ಎಲ್ಲವೂ ಬದ​ಲಾ​ಯಿತು. 21 ದಿನ​ ಕಾಲ ತಲೆ​ಮೆ​ರೆ​ಸಿ​ಕೊಂಡಿದ್ದ ಮಂಜು​ನಾಥ್‌ ಕೊನೆಗೆ ಭಾನು​ವಾರ ಸಿಐಡಿ ಕಚೇ​ರಿಗೆ ಬಂದು ಶರ​ಣಾ​ಗ​ಬೇ​ಕಾ​ಯಿ​ತು.
ಕೆಲ ವರ್ಷ​ಗಳ ಹಿಂದೆ​ಯಷ್ಟೇ ಸೇವೆಗೆ ಸೇರಿ​ಕೊಂಡಿ​ದ್ದರೂ ಇಷ್ಟೊಂದು ಐಷಾ​ರಾಮಿ ಮನೆ ನಿರ್ಮಿ​ಸು​ತ್ತಿ​ರುವುದು ಸಿಐಡಿ ಪೊಲೀ​ಸ​ರಿಗೆ ಅಚ್ಚರಿ ಮೂಡಿ​ಸಿದೆ. ಪರೀಕ್ಷೆ ಅಕ್ರ​ಮ​ದ​ಲ್ಲಿ ಸಂಪಾ​ದಿ​ಸಿದ ಹಣ​ವನ್ನೇ ಇದ​ಕ್ಕಾಗಿ ಬಳ​ಸಿದ್ದಾನಾ ​ಎಂಬ ಕುರಿತು ಅಧಿ​ಕಾ​ರಿ​ಗ​ಳು ವಿಚಾ​ರಣೆ ನಡೆ​ಸು​ತ್ತಿ​ದ್ದಾರೆ ಎನ್ನ​ಲಾ​ಗಿ​ದೆ.

ಮದುವೆ ದಿನ ದಾಳಿ ಬೆದರಿಕೆಗೆ ಹೆದರಿ ಶರ​ಣಾದ ಮಂಜು​ನಾ​ಥ್‌!

ಪಿಎಸ್‌ಐ ಪರೀಕ್ಷೆ ಅಕ್ರ​ಮ​ ಬಹಿ​ರಂಗ​ವಾದ ಬಳಿಕ 21 ದಿನ ತಲೆ​ಮ​ರೆ​ಸಿ​ಕೊಂಡಿದ್ದ ಆರೋಪಿ ಮಂಜು​ನಾಥ್‌ ದಿಢೀರ್‌ ಶರ​ಣಾ​ಗುವ ಹಿಂದೆ ಸಿಐಡಿ ಪೊಲೀ​ಸರ ಧಮಕಿ ಕೆಲಸ ಮಾಡಿದೆ. ಮಂಜು​ನಾಥ್‌ ಶರ​ಣಾ​ಗದೇ ಹೋದರೆ ಆತನ ಕುಟುಂಬದಲ್ಲಿ ನಡೆ​ಯ​ಬೇ​ಕಿದ್ದ ಮದುವೆ ದಿನದಂದೇ ಹಲವರನ್ನು ವಿಚಾ​ರ​ಣೆಗೆ ಕರೆ​ದೊ​ಯ್ಯು​ವು​ದಾಗಿ ಸಿಐಡಿ ಪೊಲೀ​ಸ​ರು ಎಚ್ಚ​ರಿ​ಸಿದ್ದರು. ಇದ​ರಿಂದ ಹೆದರಿ ಮಂಜು​ನಾಥ್‌ ತಾನಾ​ಗಿಯೇ ಬಂದು ಶರ​ಣಾ​ಗಿ​ದ್ದಾನೆ ಎನ್ನ​ಲಾ​ಗಿ​ದೆ.

PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು

ಮಂಜುನಾಥ್‌ ಮನೆಯಲ್ಲಿ ಆತ​ನ ಚಿಕ್ಕಪ್ಪನ ಮದುವೆ(Marriage) ನಿಶ್ಚಯವಾಗಿತ್ತು, ವಾರದೊಳಗೆ ಮದುವೆ ಇರೋದು ಗಮನಕ್ಕೆ ಬಂದಾಗ ಸಿಐಡಿ ತಂಡ ಮನೆಗೆ ತೆರಳಿತ್ತು. ಮಂಜುನಾಥ ತಾನಾ​ಗಿಯೇ ಬಂದು ಶರ​ಣಾ​ಗದೇ ಹೋದಲ್ಲಿ ಮದುವೆ ದಿನವೇ ಕಾರ್ಯಾಚರಣೆ ನಡೆಸಿ ಹಲವರನ್ನು ವಿಚಾರಣೆಗೆ ಕರೆದೊಯ್ಯುತ್ತೇವೆಂಬ ಎಚ್ಚ​ರಿಕೆ ನೀಡಿತ್ತು. ತಲೆ​ಮ​ರೆ​ಸಿ​ಕೊಂಡು ಓಡಾ​ಡು​ತ್ತಿದ್ದ ಮಂಜು​ನಾ​ಥ್‌ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದಾಗ ಈ ವಿಚಾ​ರವನ್ನು ತಂದೆ ವಿಶ್ವನಾಥ್‌ ತಿಳಿ​ಸಿ​ದ್ದಾರೆ. ಒಂದು ವೇಳೆ ನೀನು ಶರ​ಣಾ​ಗ​ದಿ​ದ್ದರೆ ನಾವು ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವು​ದಾಗಿ ಹೇಳಿ​ದ್ದಾ​ರೆ. ಇದ​ರಿಂದ ಮಂಜು​ನಾಥ್‌ ಪೊಲೀ​ಸ​ರಿಗೆ ಶರ​ಣಾಗಲು ನಿರ್ಧ​ರಿ​ಸಿ​ದ ಎನ್ನ​ಲಾ​ಗಿ​ದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿಗೆ ಯತ್ನಾಳ್ ತಿರುಗೇಟು
ಕರಾವಳಿಗೆ ಡಿಕೆಶಿ ಮೆಗಾ ಪ್ಲಾನ್: 300 ಕಿ.ಮೀ ವ್ಯಾಪ್ತಿಯಲ್ಲಿ 'ನ್ಯೂ ಟೂರಿಸಂ ಪಾಲಿಸಿ' ಘೋಷಣೆ!