ಬಿಜೆಪಿ ಶಾಸಕರ ವಿರುದ್ಧ ಬಿಜೆಪಿಗರಿಂದಲೇ ಪರ್ಸೆಂಟೇಜ್ ಆರೋಪ

Published : Feb 02, 2019, 02:01 PM ISTUpdated : Feb 02, 2019, 05:50 PM IST
ಬಿಜೆಪಿ ಶಾಸಕರ ವಿರುದ್ಧ ಬಿಜೆಪಿಗರಿಂದಲೇ ಪರ್ಸೆಂಟೇಜ್ ಆರೋಪ

ಸಾರಾಂಶ

ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆರೋಪಗಳ ಸುರುಮಳೆಯನ್ನೇ ಸುರಿಸಿದ್ದಾರೆ.

ಕೊಪ್ಪಳ :  ಕೊಪ್ಪಳದಲ್ಲಿ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರ್ ವಿರುದ್ಧ ಹರಿಹಾಯ್ದಿದ್ದು,  ಶಾಸಕರು‌ ಮಾಡೊದೆಲ್ಲಾ ಪರ್ಸೆಂಟೇಜ್ ಗಾಗಿ ಎಂದು ಆರೋಪಿಸಿದ್ದಾರೆ.  

"

ಸ್ಥಳೀಯರು ಹಾಜರಿಲ್ಲದ ವೇಳೆ ಬಸವರಾಜ ದಡೇಸೂಗೂರ್ ಕಾಮಗಾರಿಯೊಂದಕ್ಕೆ ಪೂಜೆ ಸಲ್ಲಿಸಿ ತೆರಳಿದ್ದ ಹಿನ್ನೆಲೆಯಲ್ಲಿ ಈ ಆರೋಪ ಹೇಳಿ ಬಂದಿದೆ. 

ಪಂಚಮಸಾಲಿ ವಾಟ್ಸಪ್ ಗ್ರೂಪ್ ಅಲ್ಲಿ ಶಾಸಕರ ವಿರುದ್ಧ ತೀವ್ರ ಚರ್ಚೆ ನಡೆದಿದ್ದು,  ಶಾಸಕ ಬಸವರಾಜ ದಡೇಸುಗೂರ್ ವಿರುದ್ಧ ನೇರವಾಗಿಯೇ ಪರ್ಸೆಂಟೇಜ್  ಆರೋಪ ಮಾಡಿದ್ದಾರೆ. 

70% ಕಮಿಷನ್ 20% ಕಾಮಗಾರಿ 10% ಕಾಂಟ್ರಕ್ಟರ್ ಇದು ಕಾಮಗಾರಿ ನೀಡಬೇಕಾದ ಕಮಿಷನ್ ಎಂದು ಹೇಳಿದ್ದು, ಕಮಿಷನ್ ಕೊಟ್ಟೋರಿಗೆ ಮಾತ್ರ ಕೆಲಸ ಕೊಡುತ್ತಾರೆ. ಇಲ್ಲಿ‌ ಎಲ್ಲಾ ನಡೆಯುತ್ತಿರುವುದು ದುಡ್ಡಿನ ಮೇಲೆ. ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ.  ಪರ್ಸೆಂಟೇಜ್ ಇದ್ದರೆ ಅವರೊಇಗೆ ಜನರು ಬೇಡ ಎಂದು ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ