ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ ಈ ಅನುಮಾನಕ್ಕೆಕಾರಣವಾಗಿದೆ.
ವರದಿ - ರಕ್ಷಾ ಕಟ್ಟೆಬೆಳಗುಳಿ
ಬೆಂಗಳೂರು (ಡಿ.6) : ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ ಈ ಅನುಮಾನಕ್ಕೆಕಾರಣವಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಗೆ ನಿಜಕ್ಕೂ ವಾಸ್ತುದೋಷ ಇದೆಯೇ, ವಾಸ್ತುದೋಷದ ಕಾರಣದಿಂದಲೇ ಐಎಎಸ್ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಯೇ? ಹೌದು ಎಂತಿದ್ದಾರೆ ಕೆಲವು ಅಧಿಕಾರಿಗಳು. ಅದಕ್ಕೆ ಇಂಬು ಕೊಡುವಂತೆ ಕೆಲವು ಘಟನೆ ಉದಾಹರಣೆ ಕೊಡುತ್ತಾರೆ.
ಜಿಲ್ಲಾಧಿಕಾರಿ ಹುದ್ದೆಗೆ ಕುಳಿತವರೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿ ಅಮಾನತ್ತು ಆಗುತ್ತಿರುವುದೇ ಚರ್ಚೆಗೆ ಕಾರಣವಾಗಿದೆ. ಬ್ಯಾಕ್ ಟು ಬ್ಯಾಕ್ ಅಕ್ರಮದಲ್ಲಿ ತಗ್ಲಾಕೊಂಡು ಸೆಸ್ಪೆಂಡ್, ಜೈಲು ಪಾಲಾಗ್ತಿದ್ದಾರೆ. ಇದಕ್ಕೆಲ್ಲ ವಾಸ್ತುದೋಷವೇ ಕಾರಣ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ.
ವಾಸ್ತು ದೋಷ ನಿವಾರಣೆಗೆ ವಿಘ್ನನಿವಾರಕನ ಸರಳ ಪರಿಹಾರ!
ಸಾಮಾಜಿಕ ಕಾರ್ಯಕರ್ತರ ಸಾಯಿ ದತ್ತ ಅವರು, 'ಡಿಸಿ ಕಚೇರಿ ವಾಸ್ತುದೋಷ ನಿವಾರಣೆಗೆ ಕಚೇರಿಯಲ್ಲಿ ಸಂಬಂಧಪಟ್ಟ ಪೂಜೆ ನೆರವಿಸಬೇಕೆಂದು' ಕಂದಾಯ ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ನಗರದ ಡಿಸಿಯಾದವರು ಆತ್ಮಹತ್ಯೆ, ಅಮಾನತು, ಜೈಲು ಪಾಲಾಗೋದಕ್ಕೆ ವಾಸ್ತುದೋಷವೆ ಕಾರಣ ಆಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಾಯಿ ದತ್ತ, 2013ರಲ್ಲಿ ಎಂ.ಕೆ. ಅಯ್ಯಪ್ಪ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ಶುರುವಾದ ಈ ಕಳಂಕ ಪರ್ವ ಈಗಲೂ ಮುಂದುವರಿದಿದ್ದು ನಗರ ಜಿಲ್ಲಾಧಿಕಾರಿ ಹುದ್ದೆಗೆ ಬರುವವರಿಗೆ ಈ ಆತಂಕ ಮುಂದುವರಿದಿದೆ. ಡಿಸಿ ಕಚೇರಿಯ ಮುಂಭಾಗದಲ್ಲಿ ಕಂದಾಯ ಇಲಾಖೆ ನಿರ್ಮಾಣವಾದ ನಂತರ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಐಎಎಸ್ ಅಧಿಕಾರಿಗಳು ಸಾಲು ಸಾಲು ಅಕ್ರಮಗಳ ಕಳಂಕ ಎದುರಿಸುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಜಿಲ್ಲಾಧಿಕಾರಿ ಹುದ್ದೆ ಸ್ವೀಕರಿಸುವುದಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಡಿಸಿ ಕಚೇರಿ ವಾಸ್ತುದೋಷ- ಕಂಟಕಕ್ಕೆ ಸಿಲುಕಿದವರ ಪಟ್ಟ!
ಇವೆಲ್ಲ ಘಟನೆಗಳಿಂದ ಅನುಮಾನಗೊಂಡು ನಗರ ಜಿಲ್ಲಾಧಿಕಾರಿ ಹುದ್ದೆಗೆ ವಾಸ್ತುದೋಷವೇ ಕಾರಣ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪತ್ರ ಬರೆದಿದ್ದಾರೆ. ಕಂದಾಯ ಸಚಿವರಿಗೆ ಪತ್ರ ಬರೆದು, ಸಾರ್ವಜನಿಕರ ಭಾವನೆಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳ ಕಚೇರಿ ವಾಸ್ತುದೋಷ ನಿವಾರಣೆಗೆ ಮನವಿ ಮಾಡಿಕೊಂಡಿದ್ದಾರೆ.
ಕಂದಾಯ ಸಚಿವರು ಇದನ್ನೆಲ್ಲ ನಂಬುತ್ತಾರಾ? ನಂಬಿ ವಾಸ್ತು ದೋಷ ನಿವಾರಣೆಗೆ ಜಿಲ್ಲಾಧಿಕಾರಿ ಕಚೇರಿಗೆ ವಿಶೇಷ ಪೂಜೆ ಮಾಡಿಸುತ್ತಾರಾ? ಕಾದು ನೋಡಬೇಕು.