ಕಾಫಿನಾಡಲ್ಲಿ ಅಪರೂಪದ ಹಾವು 'Bamboo pit viper' ಪತ್ತೆ, ಹಾವಿನ ವಿಶೇಷ ಏನು ಗೊತ್ತಾ?

Published : Oct 07, 2023, 07:14 PM IST
ಕಾಫಿನಾಡಲ್ಲಿ ಅಪರೂಪದ ಹಾವು 'Bamboo pit viper'  ಪತ್ತೆ, ಹಾವಿನ ವಿಶೇಷ ಏನು ಗೊತ್ತಾ?

ಸಾರಾಂಶ

ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್  ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸೆರೆ ಸಿಕ್ಕಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.7): ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್  ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸೆರೆ ಸಿಕ್ಕಿದೆ.

ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹಾಗೇ ಹೀರಿಕೊಳ್ಳುವ ಏಕೈಕ ಉರಗ :

ಉರಗ ಸಂತತಿಯಲ್ಲೇ ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹಾಗೇ ಹೀರಿಕೊಳ್ಳುವ ಏಕೈಕ ಉರಗ ಬ್ಯಾಂಬೋ ಫಿಟ್ ವೈಫರ್ ಹಾವು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಪತ್ತೆಯಾಗಿದೆ. ಕಳಸ ಪಟ್ಟದ ಕಳಸೇಶ್ವರ ದೇಗುಲದ ಪಕ್ಕದ ಚಂದ್ರು ಭಟ್ ಎಂಬುವರ ಮನೆಯ ಗಿಡದಲ್ಲಿದ್ದ ಈ ಅಪರೂಪದ ಹಾವನ್ನ ಉರಗ ತಜ್ಞ ರಿಜ್ವಾನ್ ಸೆರೆ ಹಿಡಿದಿದ್ದಾರೆ. 

 

ಗುಹೆಯೊಂದರಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯ ಶೂ ಪತ್ತೆ

ಈ ಹಾವು ಕಚ್ಚಿದರೆ ಸಾಯುವುದಿಲ್ಲ. ಆದರೆ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವೂ ಸಂಭವಿಸಬಹುದು. ಈ ಅಪರೂಪದ  ಹಾವಿನ ತಳಿ ಅಳಿವಿನಂಚಿನ ಜೀವಿಯಾಗಿದ್ದು, ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ಈ ಹಾವು ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ. ಮನೆ ಮಾಲೀಕ ಚಂದ್ರು ಭಟ್ ಮನೆ ಅಂಗಳದ ಗಿಡದ ಮೇಲಿದ್ದ ಹಾವನ್ನ ಕಂಡು ಮನೆಯುವರು ಆತಂಕದಿಂದ ಉರಗ ತಜ್ಞ ರಿಜ್ವಾನ್ ಗೆ ಫೋನ್ ಮಾಡಿದ್ದಾರೆ.

ಬ್ಯಾಂಬೋ ಪಿಟ್ ವೈಫರ್ : 

ಸ್ಥಳಕ್ಕೆ ಬಂದ ರಿಜ್ವಾನ್ ಹಾವಿನ ವಿಶೇಷತೆ ತಿಳಿಸಿ ಎಚ್ಚರಿಕೆಯಿಂದ ಹಾವನ್ನ ಸರೆ ಹಿಡಿದಿದ್ದಾರೆ. ಈ ಬ್ಯಾಂಬೋ ಫಿಟ್ ವೈಫರ್ ಉರಗ ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವಾಗಿದೆ. ಈ ಸುಂದರ ಹಾವನ್ನ ಕಂಡು ಮನೆ ಮಾಲೀಕ ಹಾಗೂ ಸ್ಥಳಿಯರು ಖುಷಿ ಪಟ್ಟಿದ್ದಾರೆ. ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ. ಆದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅಪರೂಪದ ಹಾವಿನ ಸೌಂದರ್ಯ ನೋಡಿ ಸ್ಥಳೀಯರು ಖುಷಿ ಪಟ್ಟಿದ್ದಾರೆ. ಉರಗ ತಜ್ಞ ರಿಜ್ವಾನ್ ವರು ಈ ಅಪರೂಪದ ಹಾವನ್ನ ಸೆರೆ ಹಿಡಿದು, ಕಳಸ ಅರಣ್ಯದೊಳಕ್ಕೆ ಬಿಟ್ಟುಬಂದಿದಾರೆ.

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ