ಹಾರಂಗಿ ಡ್ಯಾಂ ಬಳಿ ಸೆಲ್ಫೀ ತೆಗೆವಾಗ ನದಿಗೆ ಬಿದ್ದ ಪ್ರವಾಸಿಗ !

Published : Aug 04, 2023, 10:18 AM IST
ಹಾರಂಗಿ ಡ್ಯಾಂ ಬಳಿ ಸೆಲ್ಫೀ ತೆಗೆವಾಗ ನದಿಗೆ ಬಿದ್ದ ಪ್ರವಾಸಿಗ !

ಸಾರಾಂಶ

ಇಲ್ಲಿನ ಹಾರಂಗಿ ಅಣೆಕಟ್ಟು ಮುಂಭಾಗದಲ್ಲಿ ಪ್ರವಾಸಿಗರೊಬ್ಬರು ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ. ಬೆಂಗಳೂರಿನ ಉದ್ಯಮಿ ಸಂದೀಪ್‌ (40) ನೀರುಪಾಲಾಗಿರುವವರು

ಕುಶಾಲನಗರ (ಆ.4) :  ಇಲ್ಲಿನ ಹಾರಂಗಿ ಅಣೆಕಟ್ಟು ಮುಂಭಾಗದಲ್ಲಿ ಪ್ರವಾಸಿಗರೊಬ್ಬರು ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ.

ಬೆಂಗಳೂರಿನ ಉದ್ಯಮಿ ಸಂದೀಪ್‌ (40) ನೀರುಪಾಲಾಗಿರುವವರು. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನಾಲ್ವರು ಪ್ರವಾಸಿಗರು ಗೋಣಿಕೊಪ್ಪ, ಮಡಿಕೇರಿ ನಂತರ ಗುರುವಾರ ಸಂಜೆ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿದರು. ಅಣೆಕಟ್ಟೆಯ ಎದುರುಗಡೆ ಇರುವ ಸೇತುವೆಯಲ್ಲಿ ಸೆಲ್ಫೀ ತೆಗೆಯುವ ಸಂದರ್ಭ ಸಂದೀಪ್‌ ನದಿಗೆ ಬಿದ್ದಿರುವುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್‌ ಮತ್ತು ಅಗ್ನಿಶಾಮಕ ತಂಡ ಸಂದೀಪ್‌ಗಾಗಿ ಶೋಧ ನಡೆಸಲಾಯಿತು.

ಸೆಲ್ಫಿ ಗೀಳಿದ್ರೆ ಒಳ್ಳೇದೆ..'ಸ್ವಂತಿ' ಕ್ಲಿಕ್ಕಿಸಿ ಖುಷ್ ಖುಷಿಯಾಗಿರಿ

ಜಮೀನು ವಿಚಾರಕ್ಕೆ ಮಾರಾಮಾರಿ

ಕುದೂ​ರು: ಜಮೀನು ವಿಚಾರವಾಗಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಕುದೂರು ಹೋಬ​ಳಿಯ ಹೊನ್ನಾಪುರ ಗ್ರಾಮದಲ್ಲಿ ನಡೆ​ದಿ​ರು​ವುದು ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಗೋಮಾಳ ಜಮೀ​ನನ್ನು ಪ್ರಶ್ನಿಸಿ ನಡು ರಸ್ತೆ​ಯ​ಲ್ಲಿಯೇ ಓರ್ವ ಪುರುಷ ಹಾಗೂ ಮೂವರು ಮಹಿ​ಳೆ​ಯರ ನಡುವೆ ಗಲಾಟೆ ನಡೆ​ದಿದೆ.

ಜಮೀನು ವಿವಾದ: ಎರಡು ಕುಟುಂಬಗಳ ನಡುವೆ ಮಾರಾಮಾರಿ, ಕೊಲೆಯಲ್ಲಿ ಅಂತ್ಯ!

ಈ ಮಾರಾ​ಮಾ​ರಿಯ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿ​ದೆ. ಲಿಂಗಾಯತ ಸಮುದಾಯದವರು ಹಲ್ಲೆ ಮತ್ತು ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಮುದಾಯದವರು ದೂರು ಸಲ್ಲಿ​ಸಿ​ದರೆ, ವಿನಾಕಾರಣ ಮಹಿಳೆ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ದಲಿತ ಸಮುದಾಯದ ವಿರುದ್ಧ ಲಿಂಗಾ​ಯತ ಸಮು​ದಾ​ಯ​ದವರು ಪ್ರತಿ ದೂರು ಸಲ್ಲಿ​ಸಿ​ದ್ದಾರೆ. ಸದ್ಯ ಎರಡೂ ಕಡೆಯ ಪ್ರಕರಣದ ಕುರಿತು ಕುದೂರು ಪೊಲೀಸರು ಪರಿಶೀಲನೆ ನಡೆ​ಸು​ತ್ತಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!