ಏನ್‌ ಐಡಿಯಾ ಗುರು! ಮೈಸೂರಿನ ಈ ರೈತ 4 ಎಕರೆ ಜಮೀನು ಸುತ್ತಲೂ ಮಾಡೆಲ್‌ಗಳ ಫೋಟೋ ಹಾಕಿದ್ದಾನೆ ಏಕೆ ಗೊತ್ತಾ?

Published : Feb 21, 2025, 11:05 AM ISTUpdated : Feb 21, 2025, 11:14 AM IST
ಏನ್‌ ಐಡಿಯಾ ಗುರು! ಮೈಸೂರಿನ ಈ ರೈತ 4 ಎಕರೆ ಜಮೀನು ಸುತ್ತಲೂ ಮಾಡೆಲ್‌ಗಳ ಫೋಟೋ ಹಾಕಿದ್ದಾನೆ ಏಕೆ ಗೊತ್ತಾ?

ಸಾರಾಂಶ

ನಂಜನಗೂಡಿನ ರೈತರೊಬ್ಬರು ತಮ್ಮ ಬಾಳೆ ತೋಟವನ್ನು ದೃಷ್ಟಿಯಿಂದ ರಕ್ಷಿಸಲು ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿದ್ದಾರೆ. ಈ ವಿಚಿತ್ರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ.

ನಂಜನಗೂಡು (ಫೆ.21): ಫಲವತ್ತಾದ ಬಾಳೆ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರೈತನೊಬ್ಬ ತನ್ನ ಜಮೀನಿನ ಸುತ್ತಲೂ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಕ್ಕರಹಟ್ಟಿ ನಿವಾಸಿ ಸೋಮೇಶ್ ಎನ್ನುವವರೇ ಮಾಡೆಲ್‌ಗಳ ಭಾವಚಿತ್ರ ಅಳವಡಿಸಿರುವ ರೈತ. ಸೋಮೇಶ್ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಬೆಳೆ ಫಲವತ್ತಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ತನ್ನ ಬೆಳೆಗಳಿಗೆ ಜನರ ದೃಷ್ಟಿ ಬೀಳಬಾರದೆಂಬ ಉದ್ದೇಶದಿಂದ ಜಮೀನಿನ ಸುತ್ತಲೂ ಸುಮಾರು 10 ಸ್ಥಳಗಳಲ್ಲಿ ಮಾಡೆಲ್‌ಗಳ ಅರೆ ಬೆತ್ತಲೆ ಭಾವಚಿತ್ರ ಅಳವಡಿಸಿದ್ದಾರೆ.

ರಸ್ತೆ ಮಾರ್ಗದಲ್ಲಿ ಸಾಗುವ ಜನರು ಬಾಳೆ ಗಿಡದತ್ತ ಕಣ್ಣು ಹಾಯಿಸದೆ ಸುತ್ತಲೂ ಅಳವಡಿಸಿರುವ ಮಾಡೆಲ್ ಫೋಟೋಗಳನ್ನು ಕಣ್ತುಂಬಿಕೊಂಡು ಸಾಗುತ್ತಿದ್ದು, ಕೆಲ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದರಿಂದ ಕೆಲವರಿಗೆ ಇರಿಸು ಮುರಿಸು ಉಂಟಾಗಿ ಗ್ರಾಮಸ್ಥರನ್ನೂ ಕೆರಳಿಸಿದೆ.

ಇದನ್ನೂ ಓದಿ:  ಜಮೀನಿಗೆ ಕೂಲಿ ಕೆಲಸಕ್ಕೆ ಬಂದ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ಹರಪನಹಳ್ಳಿ ರೈತ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!