ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!

Published : Aug 05, 2023, 01:16 PM IST
ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!

ಸಾರಾಂಶ

ರಾಜ್ಯದಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಇರುವ ಪೈಕಿ ಸರ್ಕಾರದ ಇಲಾಖೆಗಳೇ ಅತಿ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದು, ರಾಜ್ಯದ ನಾಲ್ಕು ಎಸ್ಕಾಂಗಳಿಗೆ ಬರೋಬ್ಬರಿ 12,240 ಕೋಟಿ ರು. ಪಾವತಿ ಮಾಡಬೇಕಾಗಿದೆ.

ಬೆಂಗಳೂರು (ಆ.5) ರಾಜ್ಯದಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಇರುವ ಪೈಕಿ ಸರ್ಕಾರದ ಇಲಾಖೆಗಳೇ ಅತಿ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದ್ದು, ರಾಜ್ಯದ ನಾಲ್ಕು ಎಸ್ಕಾಂಗಳಿಗೆ ಬರೋಬ್ಬರಿ 12,240 ಕೋಟಿ ರು. ಪಾವತಿ ಮಾಡಬೇಕಾಗಿದೆ.

ಬೆಸ್ಕಾಂ ಒಂದಕ್ಕೇ ಬರೋಬ್ಬರಿ 5,653 ಕೋಟಿ ರು. ವಿದ್ಯುತ್‌ ಶುಲ್ಕದ ಬಾಕಿ ಪಾವತಿಸಬೇಕಾಗಿದೆ. ಬೆಸ್ಕಾಂ 2022-23ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ 5,246.64 ಕೋಟಿ ರು.ಗಳನ್ನು ವಿವಿಧ ಇಲಾಖೆಗಳು ಪಾವತಿ ಬಾಕಿ ಉಳಿಸಿಕೊಂಡಿದ್ದವು. ಪ್ರಸಕ್ತ ಸಾಲಿನ ಜೂ.30ರ ವೇಳೆಗೆ 5,653 ಕೋಟಿ ರು.ಗೆ ಮುಟ್ಟಿದೆ.

ಇಷ್ಟುದೊಡ್ಡ ಮೊತ್ತದ ಬಾಕಿಯು ಬೆಸ್ಕಾಂ ಕೆಲಸಕ್ಕೆ ನೇರವಾಗಿ ಅಡ್ಡಿಯಾಗುತ್ತಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೂ, ವಿದ್ಯುತ್‌ ಖರೀದಿ ಹಣದ ಸಕಾಲಿಕ ಬಾಕಿ ಪಾವತಿ ಮತ್ತಿತರ ವಿಳಂಬ, ಸಾಲ ಪ್ರಮಾಣದ ಹೆಚ್ಚಳದಿಂದ ಎಸ್ಕಾಂಗಳ ಸಾಲದ ಮೇಲಿನ ಬಡ್ಡಿ ಹೊರೆಯಾಗುತ್ತಿದೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ.

 

ಕೆಪಿಟಿಸಿಎಲ್‌ ನೌಕರರಿಗೆ ಶೆ.20 ವೇತನ ಹೆಚ್ಚಳ: ಹೋರಾಟಕ್ಕೂ ಮುನ್ನವೇ ಮುಷ್ಕರ ವಾಪಸ್‌

ಬೆಸ್ಕಾಂಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ 4,067 ಕೋಟಿ ರು., ನಗರಾಭಿವೃದ್ಧಿ ಇಲಾಖೆ 129 ಕೋಟಿ ರು., ಬಿಬಿಎಂಪಿ 684 ಕೋಟಿ ರು., ಬೆಂಗಳೂರು ಜಲಮಂಡಳಿ 484 ಕೋಟಿ ರು., ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59.51 ಕೋಟಿ ರು., ಜಲಸಂಪನ್ಮೂಲ ಇಲಾಖೆ 44.23 ಕೋಟಿ ರು., ಸಣ್ಣ ನೀರಾವರಿ ಇಲಾಖೆ 7.51 ಕೋಟಿ ರು., ಕೇಂದ್ರ ಇಲಾಖೆ ಕಚೇರಿಗಳಿಂದ 59.90 ಕೋಟಿ ರು., ಇತರೆ ರಾಜ್ಯ ಸರ್ಕಾರಿ ಕಚೇರಿಗಳಿಂದ 107.53 ಕೋಟಿ ರು. ಸೇರಿದಂತೆ ಒಟ್ಟು 5,653 ಕೋಟಿ ರು. ಬಾಕಿ ಇದೆ.

ಇನ್ನು ಹುಬ್ಬಳ್ಳಿ ಮೂಲದ ಹೆಸ್ಕಾಂ ವ್ಯಾಪ್ತಿಯಲ್ಲಿ 3,666 ಕೋಟಿ ರು., ಕಲಬುರಗಿ ವ್ಯಾಪ್ತಿಯ ಜೆಸ್ಕಾಂಗೆ 2,065 ಕೋಟಿ ರು., ಮಂಗಳೂರು ವ್ಯಾಪ್ತಿಯ ಮೆಸ್ಕಾಂಗೆ 400 ಕೋಟಿ ರು., ಹುಕ್ಕೇರಿ ಸೊಸೈಟಿಗೆ 343.36 ಕೋಟಿ ರು. ವಿದ್ಯುತ್‌ ಶುಲ್ಕವನ್ನು ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ. ಇನ್ನು ಮೈಸೂರು ವ್ಯಾಪ್ತಿಯ ಚಾಮುಂಡೇಶ್ವರಿ (ಚೆಸ್ಕಾಂ) ವಿದ್ಯುತ್‌ ಸರಬರಾಜು ನಿಗಮದ ಅಧಿಕಾರಿಗಳು ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ಮೊತ್ತದ ಬಗ್ಗೆ ತಿಳಿಸಲು ನಿರಾಕರಿಸಿದರು.

ರಾಜ್ಯದ ಜನತೆಗೆ ವಿದ್ಯುತ್ ಶಾಕ್, ಜುಲೈ 1ರಿಂದ ದರ‌ ಏರಿಕೆ, ಕೆಇಆರ್‌ಸಿ ಒಪ್ಪಿಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ