ರಾಜ್ಯದಲ್ಲಿ 1 ಕೋಟಿ ಕೊರೋನಾ ಟೆಸ್ಟ್‌..!

Kannadaprabha News   | Asianet News
Published : Nov 22, 2020, 10:00 AM IST
ರಾಜ್ಯದಲ್ಲಿ 1 ಕೋಟಿ ಕೊರೋನಾ ಟೆಸ್ಟ್‌..!

ಸಾರಾಂಶ

ಶನಿವಾರ 1,781 ಹೊಸ ಕೇಸ್‌, 1,799 ಗುಣಮುಖ, 20 ಸಾವು| ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 24,714ಕ್ಕೆ ಕುಸಿತ|  494 ಮಂದಿಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ| ಈವರೆಗಿನ ಸೋಂಕಿನ ಪ್ರಕರಣಗಳ ಸಂಖ್ಯೆ 8.71 ಲಕ್ಷಕ್ಕೇರಿದ್ದು ಇದರಲ್ಲಿ 8.34 ಲಕ್ಷ ಮಂದಿ ಗುಣಮುಖ| ಈವರೆಗೆ 11,641 ಮಂದಿ ಮರಣ| 

ಬೆಂಗಳೂರು(ನ.22): ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಸಂಖ್ಯೆ ಒಂದು ಕೋಟಿ ದಾಟಿದೆ. ಶನಿವಾರ ದಾಖಲೆಯ 1.25 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದ್ದು 1,781 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 1,799 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ಮೃತರಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಒಂದು ಲಕ್ಷಕ್ಕಿಂತ ಹೆಚ್ಚಾಗುತ್ತಿದ್ದು, ಶನಿವಾರ 1,25,337 ಪರೀಕ್ಷೆ ನಡೆದಿರುವುದು ಹೊಸ ದಾಖಲೆಯಾಗಿದೆ. ಇದರೊಂದಿಗೆ ಈವರೆಗಿನ ಕೊರೋನಾ ಪರೀಕ್ಷೆ ಬರೋಬ್ಬರಿ 1.01 ಕೋಟಿ ಮುಟ್ಟಿದೆ. ಇದರಲ್ಲಿ 69 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆಯಾಗಿದೆ.

5 ದಿನದಲ್ಲಿ 117 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು..!

ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 24,714ಕ್ಕೆ ಕುಸಿದಿದೆ. ಈ ಪೈಕಿ 494 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗಿನ ಸೋಂಕಿನ ಪ್ರಕರಣಗಳ ಸಂಖ್ಯೆ 8.71 ಲಕ್ಷಕ್ಕೇರಿದ್ದು ಇದರಲ್ಲಿ 8.34 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 11,641 ಮಂದಿ ಮರಣವನ್ನಪ್ಪಿದ್ದಾರೆ. 19 ಮಂದಿ ಸೋಂಕಿತರು ಅನ್ಯ ಕಾರಣದಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 10 ಮಂದಿ ಮೃತರಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 3, ತುಮಕೂರು 2, ಬಳ್ಳಾರಿ, ಧಾರವಾಡ, ಹಾವೇರಿ, ಕೋಲಾರ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಅಸುನೀಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಹೊಸದಾಗಿ 972 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಾಗಲಕೋಟೆ 10, ಬಳ್ಳಾರಿ 37, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 23, ಬೀದರ್‌ 12, ಚಾಮರಾಜ ನಗರ 19, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 14, ಚಿತ್ರದುರ್ಗ 34, ದಕ್ಷಿಣ ಕನ್ನಡ 46, ದಾವಣಗೆರೆ 28, ಧಾರವಾಡ 12, ಗದಗ 12, ಹಾಸನ 25, ಹಾವೇರಿ 8, ಕಲಬುರಗಿ 9, ಕೊಡಗು 12, ಕೋಲಾರ 25, ಕೊಪ್ಪಳ 5, ಮಂಡ್ಯ 37, ಮೈಸೂರು 126, ರಾಯಚೂರು 9, ರಾಮನಗರ 14, ಶಿವಮೊಗ್ಗ 13, ತುಮಕೂರು 92, ಉಡುಪಿ 19, ಉತ್ತರ ಕನ್ನಡ 21, ವಿಜಯಪುರ 63 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 11ಜನರಲ್ಲಿ ಸೋಂಕು ಧೃಢಪಟ್ಟಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!