ಸಂಪರ್ಕಕ್ಕೆ ಸಿಗದ ಕಾಶ್ಮೀರ ಕ್ರಿಕೆ​ಟಿ​ಗ​ರ ಹುಡುಕಾಟಕ್ಕೆ ಜಾಹೀರಾತು!

Published : Aug 29, 2019, 01:28 PM IST
ಸಂಪರ್ಕಕ್ಕೆ ಸಿಗದ ಕಾಶ್ಮೀರ ಕ್ರಿಕೆ​ಟಿ​ಗ​ರ ಹುಡುಕಾಟಕ್ಕೆ ಜಾಹೀರಾತು!

ಸಾರಾಂಶ

ಕಾಶ್ಮೀರ ಕಣಿವೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್‌ನೆಟ್‌ ವ್ಯವಸ್ಥೆ ಕಡಿತಗೊಳಿಸಲಾಗಿದೆ. 370ನೇ ವಿಧಿ ರದ್ದು ಪಡಿಸಿದ್ದರ ಪರಿಣಾಮ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದರ ಬಿಸಿ ಈಗ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಆ.29]: 370ನೇ ವಿಧಿ ರದ್ದತಿಯಿಂದಾಗಿ ಭದ್ರತೆ ದೃಷ್ಟಿ​ಯಿಂದ ಕಾಶ್ಮೀರದಲ್ಲಿ ಮೊಬೈಲ್‌ ನೆಟ್‌ವರ್ಕ್ ಮೇಲೆ ನಿರ್ಬಂಧ ಹೇರ​ಲಾ​ಗಿದೆ. ಇದರ ಬಿಸಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ.

ಜಮ್ಮು ಕಾಶ್ಮೀರದಲ್ಲಿ ಕ್ಯಾಪ್ಟನ್ ನಾಪತ್ತೆ: ಟೂರ್ನಿ ಆಡಲು ಆಟಗಾರರೇ ಇಲ್ಲ..!

ಹೌದು, ಇದರಿಂದಾಗಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಗೆ ತನ್ನ ಆಟ​ಗಾ​ರ​ರನ್ನು ಸಂಪ​ರ್ಕಿ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಈಗಾ​ಗಲೇ ಅಂಡರ್‌-23 ವಿಝ್ಝಿ ಟ್ರೋಫಿ​ಯಿ​ಂದ ಹಿಂದೆ ಸರಿ​ದಿ​ರುವ ಜಮ್ಮು-ಕಾಶ್ಮೀರ ತಂಡ, ಮುಂದಿನ ತಿಂಗಳು ಆರಂಭ​ಗೊ​ಳ್ಳ​ಲಿ​ರುವ ವಿಜಯ್‌ ಹಜಾರೆ ರಾಷ್ಟ್ರೀ​ಯ ಏಕ​ದಿನ ಟೂರ್ನಿಗೆ ಶಿಬಿರ ಆರಂಭಿ​ಸಲು ಆಟ​ಗಾ​ರ​ರೊಂದಿಗೆ ಸಂವ​ಹನ ನಡೆ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಹೀಗಾಗಿ ಸ್ಥಳೀಯ ಟೀವಿ ವಾಹಿನಿಗಳಲ್ಲಿ ಆಟ​ಗಾ​ರ​ರು, ಕ್ರಿಕೆಟ್‌ ಸಂಸ್ಥೆಯನ್ನು ಸಂಪ​ರ್ಕಿಸಿ ಶಿಬಿರಕ್ಕೆ ಹಾಜ​ರಾ​ಗು​ವಂತೆ ಜಾಹೀ​ರಾತು ನೀಡ​ಲಾ​ಗಿದೆ. ಭಾರ​ತೀಯ ಕ್ರಿಕೆಟ್‌ನಲ್ಲಿ ಇಂತಹ ಪ್ರಸಂಗ ಬಹಳ ಅಪ​ರೂ​ಪ​ವಾ​ಗಿದ್ದು, ಮಾಧ್ಯ​ಮ​ಗ​ಳ​ಲ್ಲಿ ಭಾರೀ ಸುದ್ದಿ​ಯಾ​ಗಿದೆ.

ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್‌ಗೆ ಸೂಚನೆ!

ಜಮ್ಮು-ಕಾಶ್ಮೀರ ತಂಡದ ಸಲಹೆಗಾರ​ರಾ​ಗಿ​ರು​ವ ಭಾರತೀಯ ಕ್ರಿಕೆ​ಟಿಗ ಇರ್ಫಾನ್‌ ಪಠಾಣ್‌, ‘ಜಮ್ಮು ಆಟಗಾರರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಕಾಶ್ಮೀರ ಆಟಗಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇಂತ​ಹ ಅನುಭವ ಎಂದೂ ಆಗಿ​ರ​ಲಿಲ್ಲ. ಇದು ನನ್ನ ವೃತ್ತಿಜೀವನದ ವಿಶೇಷ ಸವಾಲು’ ಎಂದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?